ಆ್ಯಪ್ನಗರ

ಎಟಿಎಂ ಕಾರ್ಡ್‌ ಬಳಸಿ ಮಹಿಳೆಗೆ ವಂಚನೆ

ಎಟಿಎಂನಲ್ಲಿ ಹಣ ತೆಗೆಯಲು ಹೋದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ 39ಸಾವಿರ ರೂ. ಲಪಟಾಯಿಸಿರುವುದು ನಗರದ ಸವಳಂಗ ರಸ್ತೆ ಕರ್ಣಾಟಕ ಬ್ಯಾಂಕ್‌ನಲ್ಲಿ ನಡೆದಿದೆ.

Vijaya Karnataka 10 Sep 2018, 5:00 am
ಶಿವಮೊಗ್ಗ: ಎಟಿಎಂನಲ್ಲಿ ಹಣ ತೆಗೆಯಲು ಹೋದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ 39ಸಾವಿರ ರೂ. ಲಪಟಾಯಿಸಿರುವುದು ನಗರದ ಸವಳಂಗ ರಸ್ತೆ ಕರ್ಣಾಟಕ ಬ್ಯಾಂಕ್‌ನಲ್ಲಿ ನಡೆದಿದೆ.
Vijaya Karnataka Web using atm card fraud to women
ಎಟಿಎಂ ಕಾರ್ಡ್‌ ಬಳಸಿ ಮಹಿಳೆಗೆ ವಂಚನೆ


ಬಸವನಗುಡಿಯ ವಿಶಾಲಾರತ್ನಾಕರ ಅವರು ಹಣ ತೆಗೆಯಲು ಎಟಿಎಂಗೆ ಹೋದಾಗ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಸಹಾಯ ಮಾಡುವ ನೆಪದಲ್ಲಿ ಅವರಿಂದ ಗುಪ್ತಸಂಖ್ಯೆ ತಿಳಿದುಕೊಂಡಿದ್ದು ಅವರ ಅರಿವಿಗೆ ಬರದಂತೆ ಮತ್ತೊಂದು ಎಟಿಎಂ ಕಾರ್ಡ್‌ ಕೊಟ್ಟಿದ್ದಾನೆ.

ಅವರು ತೆರಳಿದ ಬಳಿಕ ಎಟಿಎಂನಿಂದ 39ಸಾವಿರ ರೂ. ತೆಗೆದಿದ್ದಾನೆ. ವಿಶಾಲಾ ಅವರಿಗೆ ಮನೆಗೆ ತೆರಳಿದ ಬಳಿಕ ಎಟಿಎಂ ಕಾರ್ಡ್‌ ತಮ್ಮದಲ್ಲ ಎನ್ನುವುದು ಅರಿವಿಗೆ ಬಂದಿದೆ. ಬ್ಯಾಂಕ್‌ನಲ್ಲಿ ಪರಿಶೀಲನೆ ನಡೆಸಿದಾಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲ್ವರ ಬಂಧನ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟ್ಯಾಂಕ್‌ ಮೊಹಲ್ಲಾದ ಶಹನವಾಜ್‌, ಶಫಿ, ಲಷ್ಕರ್‌ ಮೊಹಲ್ಲಾದ ರಿಜ್ವಾನ್‌, ರಾಜೀವ್‌ಗಾಂಧಿ ಬಡಾವಣೆಯ ಜಿಯಾವುಲ್ಲಾ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಲಷ್ಕರ್‌ ಮೊಹಲ್ಲಾದ ತೋಹಿದ್‌ ನಾಪತ್ತೆಯಾಗಿದ್ದಾನೆ. ಶೇಷಾದ್ರಿಪುರ ಬಳಿ ಇವರು ರಾತ್ರಿ ವೇಳೆ ದರೋಡೆಗೆ ಹೊಂಚು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಮೂರು ಕಬ್ಬಿಣದ ರಾಡ್‌, ಖಾರದ ಪುಡಿ ವಶಕ್ಕೆ ಪಡೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ