ಆ್ಯಪ್ನಗರ

ಕಾಲುಬಾಯಿ ರೋಗ ತಡೆಗೆ ಲಸಿಕೆ ಪರಿಹಾರ

ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ತಡೆಯಲು ಪ್ರತಿಯೊಬ್ಬರೂ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಹೊಸನಗರ ತಾಲೂಕು ಪಂಚಾಯಿತಿ ಅಧ್ಯಕ್ಷ ತೊರೆಗೆದ್ದೆ ವಾಸಪ್ಪಗೌಡರು ಹೇಳಿದರು.

Vijaya Karnataka 19 Oct 2019, 5:00 am
ರಿಪ್ಪನ್‌ಪೇಟೆ: ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ತಡೆಯಲು ಪ್ರತಿಯೊಬ್ಬರೂ ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಹೊಸನಗರ ತಾಲೂಕು ಪಂಚಾಯಿತಿ ಅಧ್ಯಕ್ಷ ತೊರೆಗೆದ್ದೆ ವಾಸಪ್ಪಗೌಡರು ಹೇಳಿದರು.
Vijaya Karnataka Web 0501213316RPT1_46


ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಸೆ ಗ್ರಾಮದಲ್ಲಿಪಶುಪಾಲನಾ ಇಲಾಖೆಯಿಂದ ಆರಂಭವಾದ 16ನೇ ಸುತ್ತಿನ ಕಾಲು ಬಾಯಿ ಲಸಿಕಾ ಕಾರ‍್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನ ಸಹಾಯಕ ನಿರ್ದೇಶಕ ಡಾ.ಎಂ.ಎಸ್‌.ರಾಮಚಂದ್ರ ಮಾತನಾಡಿ, ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾದ ಕಾಲುಬಾಯಿ ರೋಗವನ್ನು ದೇಶದಿಂದ ನಿರ್ಮೂಲನೆಗೊಳಿಸಲು ವರ್ಷದಲ್ಲಿಎರಡು ಬಾರಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರೈತ ಬಾಂಧವರು ಸಹಕರಿಸಬೇಕೆಂದರು. ಹೆದ್ದಾರಿಪುರ ಗ್ರಾ. ಪಂ.ಸದಸ್ಯ ಶ್ರೀನಾಗರಾಜ್‌, ಗ್ರಾಮಸ್ಥರಾದ ರುದ್ರಪ್ಪ, ಈರಣ್ಣ, ಹಾಲಪ್ಪ, ಯೋಗೇಂದ್ರಪ್ಪ, ಸತೀಶ ಇತರರು ಇದ್ದರು.

------
ಜಾನುವಾರುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳಲ್ಲಿಕಾಲುಬಾಯಿ ರೋಗ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿದೆ. ಲಸಿಕೆ ಹಾಕಿಸುವುದೊಂದೇ ಈ ರೋಗ ಬರದಂತೆ ತಡೆಯುವ ಮಾರ್ಗ .
-ಡಾ.ಕೆ.ಎಂ.ನಾಗರಾಜ್‌, ರಿಪ್ಪನ್‌ಪೇಟೆ ಪಶುವೈದ್ಯಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ