ಆ್ಯಪ್ನಗರ

ಸಾಹಿತ್ಯದಿಂದ ಮೌಲ್ಯ ಸಂಪಾದನೆ: ನಾಡಿ

ಸಾಹಿತ್ಯದ ಹವ್ಯಾಸ ಹಣ, ಒಡವೆ, ಐಶ್ವರ್ಯ ತಂದುಕೊಡದಿರಬಹುದು. ಅದಕ್ಕಿಂತಲೂ ದುಬಾರಿಯಾದ ಮೌಲ್ಯಗಳನ್ನು ಸಂಪಾದಿಸಬಹುದು ಎಂದು ಖ್ಯಾತ ಸಾಹಿತಿ ಡಾ. ನಾ.ಡಿಸೋಜ ಅಭಿಪ್ರಾಯಪಟ್ಟರು.

Vijaya Karnataka 6 Jul 2019, 6:36 pm
ಶಿವಮೊಗ್ಗ: ಸಾಹಿತ್ಯದ ಹವ್ಯಾಸ ಹಣ, ಒಡವೆ, ಐಶ್ವರ್ಯ ತಂದುಕೊಡದಿರಬಹುದು. ಅದಕ್ಕಿಂತಲೂ ದುಬಾರಿಯಾದ ಮೌಲ್ಯಗಳನ್ನು ಸಂಪಾದಿಸಬಹುದು ಎಂದು ಖ್ಯಾತ ಸಾಹಿತಿ ಡಾ. ನಾ.ಡಿಸೋಜ ಅಭಿಪ್ರಾಯಪಟ್ಟರು.
Vijaya Karnataka Web SMG-0607-2-15-4SMG2


ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಭಾಂಗಣದಲ್ಲಿ ಗುರುವಾರದಂದು ಕನ್ನಡ ವಿಭಾಗದ 'ನುಡಿ ಮಂಟಪ' ಸಾಹಿತ್ಯ ವೇದಿಕೆ ಉದ್ಘಾಟನೆ ಹಾಗೂ ಆರ್‌.ಅಶ್ವಿನಿ ಅವರ 'ನವನಿಧಿ' ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುಸ್ತಕಗಳ ಓದಿನಿಂದ ಸಮಾಜವನ್ನು ನೋಡುವ ಪರಿಕಲ್ಪನೆಯೆ ಬದಲಾಗುತ್ತದೆ. ನಮ್ಮ ಅರ್ಥಗಳಿಗೆ ಹೊಸ ಆಯಾಮ ತಂದುಕೊಡುತ್ತದೆ. ಓದುವ ಹವ್ಯಾಸವು ಜ್ಞಾನದೊಂದಿಗೆ ಹೊಸ ಅರ್ಥ, ಪದ, ವಿಷಯ, ವಿಚಾರ ಮತ್ತು ಸಂಸ್ಕೃತಿ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಆಧುನಿಕ ಆವಿಷ್ಕಾರಗಳೆನಿಸಿದ ಸಾಮಾಜಿಕ ಮಾಧ್ಯಮಗಳ ಜತೆಗೆ ಹಳೆಯ ಸಂಸ್ಕೃತಿ ಉಳಿಸಿಕೊಳ್ಳಬೇಕೆಂದರು.

ಕನ್ನಡದ ಮಕ್ಕಳು ಕನ್ನಡದ ಪದಗಳನ್ನೇ ಮರೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ನಮ್ಮ ತನ ಕಾಪಾಡಿಕೊಳ್ಳಲು ಕಾಲೇಜುಗಳಲ್ಲಿ ಸಾಹಿತ್ಯ ವೇದಿಕೆಗಳು, ಗೋಡೆ ಬರಹ ಪತ್ರಿಕೆಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳಲ್ಲಿ ಬರೆಯುವ ಮತ್ತು ಹವ್ಯಾಸವನ್ನು ಬೆಳೆಸುತ್ತವೆ. ಅದರಿಂದ ಹೊಸ ಲೋಕವೆ ತೆರೆದುಕೊಳ್ಳುತ್ತದೆ. ನಾವು ನಮ್ಮ ಭಾಷೆ ಬಗ್ಗೆ ಕಳಕಳಿ ಇಟ್ಟುಕೊಳ್ಳಬೇಕು. ಮಾತೃ ಭಾಷೆಯನ್ನು ಸಂರಕ್ಷಿಸಬೇಕೆಂದರು.

ವಿದ್ಯಾರ್ಥಿ ದೆಸೆಯಲ್ಲೇ ಕಾದಂಬರಿ ರಚಿಸಿರುವ ಅಶ್ವಿನಿ ಅವರು ಹೊಸ ಭರವಸೆ ಮೂಡಿಸಿದ್ದಾರೆ. ಬರವಣಿಗೆ ಶೈಲಿ, ಭಾಷೆ ಮೆಚ್ಚುಗೆ ಗಳಿಸುತ್ತದೆ. ಅವರೊಬ್ಬ ಪ್ರಬುದ್ಧ ಲೇಖಕಿಯಾಗಿ ಬೆಳವಣಿಗೆ ಕಾಣುತ್ತಾರೆಂಬ ವಿಶ್ವಾಸವಿದೆ. ಕಾದಂಬರಿಯಲ್ಲಿ ಸಂಬಂಧಗಳ ಆಳ, ಅಗಲ, ಅವುಗಳ ಮೌಲ್ಯವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಪ್ರೊ. ಎಚ್‌.ಎಂ.ವಾಗ್ದೇವಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶುಭ ಮರವಂತೆ, ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಡಾ. ಕೆ.ಎಸ್‌.ಸರಳಾ, ಡಾ. ಯು.ಶಶಿರಾಜ್‌, ನುಡಿಮಂಟಪದ ಸಂಚಾಲರಾದ ಎಚ್‌.ದೊಡ್ಡಾನಾಯ್ಕ್‌, ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ