ಆ್ಯಪ್ನಗರ

ಸುಣ್ಣದಹಳ್ಳಿ ಶ್ರೀವೀರಾಂಜನೇಯಸ್ವಾಮಿ ವಿಜೃಂಭಣೆಯ ರಥೋತ್ಸವ

ತಾಲೂಕಿನ ಸುಣ್ಣದಹಳ್ಳಿಯಲ್ಲಿ ಶ್ರೀವ್ಯಾಸರಾಜರಿಂದ ಪ್ರತಿಷ್ಠಾಪಿತವಾದ ಶ್ರೀವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

Vijaya Karnataka 24 Mar 2019, 5:00 am
ಭದ್ರಾವತಿ: ತಾಲೂಕಿನ ಸುಣ್ಣದಹಳ್ಳಿಯಲ್ಲಿ ಶ್ರೀವ್ಯಾಸರಾಜರಿಂದ ಪ್ರತಿಷ್ಠಾಪಿತವಾದ ಶ್ರೀವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web SMR-23BDVT2


ಮೂಲ ದೇವರಿಗೆ ಪಂಚಾಮೃತಭಿಷೇಕ, ವಿಶೇಷ ಅಲಂಕಾರ ಮಾಡಿದ ನಂತರ ರಥ ಪೂಜೆ ನಡೆಸಿ, ಪಲ್ಲಕ್ಕಿಯಲ್ಲಿ ಶ್ರೀಹನುಮಂತನ ಉತ್ಸವಮೂರ್ತಿಯನ್ನಿರಿಸಿ, ದೇವಾಲಯ ಒಳಾವರಣದಲ್ಲಿ ಪ್ರಾಕಾರ ಉತ್ಸವ ನಡೆಸಿ, ರಥದ ಬಳಿ ಆಗಮಿಸಿ ರಥ ಬಲಿ ಪೂಜೆ ನಡೆಸಲಾಯಿತು. ಮಧ್ಯಾಹ್ನ ಶ್ರೀವೀರಾಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ, ನೆರೆದಿದ್ದ ಸಾವಿರಾರು ಭಕ್ತಾದಿಗಳ ಜಯಘೋಷದ ನಡುವೆ ರಥವನ್ನು ಎಳೆಯಲಾಯಿತು. ಭಕ್ತಾದಿಗಳು ರಥದ ಮೇಲೆ ಬಾಳೆಹಣ್ಣು, ಉತ್ತುತ್ತಿ, ಕಾಳುಮೆಣಸು ಬೀರಿ ಪ್ರಾರ್ಥಿಸಿದರು. ಗ್ರಾಮದ ಹೆಬ್ಬಾಗಿಲಿನ ಸಮೀಪ ಬರೆಯಲಾಗಿದ್ದ ಬೃಹದಾಕಾರದ ಓಂ ವರ್ಣಮಯ ರಂಗವಲ್ಲಿಯವರೆಗೆ ರಥವನ್ನು ಎಳೆದು ನಿಲ್ಲಿಸಿ, ಕೆಲ ಸಮಯದ ನಂತರ ಪುನಃ ರಥವನ್ನು ದೇವಾಲಯಕ್ಕೆ ಎಳೆದು ತರಲಾಯಿತು. ನಂತರ ಉತ್ಸವ ನಡೆಸಿ ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಇರಿಸುವ ಮೂಲಕ ರಥೋತ್ಸವ ಸಂಪನ್ನವಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಕೆಲವು ಸಂಘ ಸಂಸ್ಥೆ ಪದಾಧಿಕಾರಿಗಳು ಉಚಿತ ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ದೇವಾಲಯದ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರು ಹಾಗೂ ಅವರ ಸಹೋದರರು ಪೂಜೆ ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ