ಆ್ಯಪ್ನಗರ

ವೀರಶೈವ ಲಿಂಗಾಯಿತ ವೇದಿಕೆ ಉದ್ಘಾಟನೆ

ಮಾನವ ಜೀವನಕ್ಕೆ ದಿಕ್ಸೂಚಿಯಾಗಿ ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಸುವುದೇ ನಿಜವಾದ ವೀರಶೈವ-ಲಿಂಗಾಯುತ ಧರ್ಮ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

Vijaya Karnataka 25 Jun 2018, 5:00 am
ಶಿವಮೊಗ್ಗ : ಮಾನವ ಜೀವನಕ್ಕೆ ದಿಕ್ಸೂಚಿಯಾಗಿ ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಸುವುದೇ ನಿಜವಾದ ವೀರಶೈವ-ಲಿಂಗಾಯುತ ಧರ್ಮ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.
Vijaya Karnataka Web veerashiva lingayath forum inaguaration
ವೀರಶೈವ ಲಿಂಗಾಯಿತ ವೇದಿಕೆ ಉದ್ಘಾಟನೆ


ನಗರದ ಸವಳಂಗ ರಸ್ತೆಯ ಕುವೆಂಪು ನಗರದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ ಸಂಸ್ಕೃತಿ ಕಟ್ಟಿ ಬೆಳೆಸುವ ಮಹತ್ಕಾರ್ಯ ಮಾಡುತ್ತಿರುವ ವೀರಶೈವ, ಲಿಂಗಾಯಿತರನ್ನು ಒಂದು ಗೂಡಿಸುವ ಕೆಲಸ ಶ್ಲಾಘನೀಯ ಎಂದರು.

ಜಾತಿ ಹೆಸರು ಹೇಳಿಕೊಂಡು ತೋರಿಕೆಗೆ ಮಾತ್ರ ವೀರಶೈವ ಆಚರಣೆ ಮಾಡದೇ ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದಿರುವ ಉಡುಗೆ ತೊಡುಗೆ, ಆಚಾರ ವಿಚಾರ, ಆಹಾರ ಪದ್ಧತಿ ಮುಂದುವರಿಸಿಕೊಂಡು ಹೋಗುವ ಅನಿವಾರ‍್ಯವಿದೆ. ಈ ನಿಟ್ಟಿನಲ್ಲಿ ಇಂದಿನ ಯುವಕರು ಚಿಂತನೆ ನಡೆಸಬೇಕೆಂದರು.

ಚುನಾವಣೆಯಲ್ಲಿ ನಮಗೆ ಸಿಕ್ಕಿರುವ ಗೆಲುವು ನಮ್ಮದಲ್ಲ. ಅದು ನಿಮ್ಮ ಆಶೀರ್ವಾದದ ಪ್ರತೀಕ. ಹೀಗಾಗಿ ಇದು ನಿಮ್ಮ ಗೆಲುವು. ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ. ಸಮಾಜದ ಏಳಿಗೆಗೆ ಹೆಚ್ಚಿನ ಅಭಿವೃದ್ಧಿ ಕೆಲಸಮಾಡಲಾಗುವುದು ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ ಮಾತನಾಡಿ, ಇಂದು ವೇದಿಕೆಗಳು ಎಷ್ಟು ವೇಗವಾಗಿ ಹುಟ್ಟಿಕೊಳ್ಳುತ್ತವೆಯೋ, ಅಷ್ಟೇ ವೇಗವಾಗಿ ಕಾರ‍್ಯ ನಿಲ್ಲಿಸಿಬಿಡುತ್ತವೆ. ಈ ವೇದಿಕೆ ಅಂತಹವುಗಳ ಸಾಲಿಗೆ ಸೇರದೆ, ಮೂಲಕ ಉದ್ದೇಶಗಳ ಈಡೇರಿಕೆಗೆ ನಿರಂತರವಾಗಿ ವೇದಿಕೆ ಕಾರ್ಯ ನಡೆಯುವಂತಾಗಲಿ ಎಂದು ಆಶಯವ್ಯಕ್ತಪಡಿಸಿದರು.

ಸಮುದಾಯದ ವಿದ್ಯಾರ್ಥಿಗಳು ಕೇವಲ ಎಂಜಿನಿಯರ್‌, ಡಾಕ್ಟರ್‌ ಆಗಲು ಓದದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವ ಅವಶ್ಯವಿದೆ ಎಂದರು.

ವೇದಿಕೆ ಅಧ್ಯಕ್ಷ ಬಿ.ಆರ್‌.ಜಯದೇವಪ್ಪ ಮಾತನಾಡಿ, ಸಮಾಜದ ಬಾಂಧವರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ವೇದಿಕೆ ಹುಟ್ಟಿಕೊಂಡಿದೆ. ಸಮುದಾಯಕ್ಕೆ ಅವಶ್ಯವಿರುವ ಸಮುದಾಯ ಭವನ, ಗ್ರಂಥಾಲಯ, ದೇವಸ್ಥಾನ, ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಪ್ರೋತ್ಸಾಹ ಬೇಕಿದ್ದು, ಸಮಾಜದ ಜನ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಹೆಚ್ಚನ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಬಳ್ಳಕೆರೆ ಸಂತೋಷ್‌, ಪಿ.ರುದ್ರೇಶ್‌, ಎಚ್‌.ಚನ್ನೇಶ್‌, ಜಯದೇವ, ಭಾರತಿ ಚನ್ನೇಶ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ