ಆ್ಯಪ್ನಗರ

ವಾಹನ ಡಿಕ್ಕಿ: ದ್ವಿಚಕ್ರವಾಹನ ಸವಾರ ಸಾವು

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಬುಧವಾರ ರಾತ್ರಿ ತಾಲೂಕಿನ ತ್ಯಾಗರ್ತಿ ಸಮೀಪದ ಮಳ್ಳದಲ್ಲಿ ನಡೆದಿದೆ. ತ್ಯಾಗರ್ತಿ ಸಮೀಪದ ಮಳ್ಳ ಗ್ರಾಮದ ಕಾಗೋಡು ದಿಂಬದ ಕುಂಬಾರ ಕೆರಿಯಪ್ಪ(28) ಮೃತ ಪಟ್ಟವರು.

Vijaya Karnataka 11 Jan 2019, 5:12 pm
ಸಾಗರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಬುಧವಾರ ರಾತ್ರಿ ತಾಲೂಕಿನ ತ್ಯಾಗರ್ತಿ ಸಮೀಪದ ಮಳ್ಳದಲ್ಲಿ ನಡೆದಿದೆ. ತ್ಯಾಗರ್ತಿ ಸಮೀಪದ ಮಳ್ಳ ಗ್ರಾಮದ ಕಾಗೋಡು ದಿಂಬದ ಕುಂಬಾರ ಕೆರಿಯಪ್ಪ(28) ಮೃತ ಪಟ್ಟವರು.
Vijaya Karnataka Web vehicle collision the death of a motorcycle rider
ವಾಹನ ಡಿಕ್ಕಿ: ದ್ವಿಚಕ್ರವಾಹನ ಸವಾರ ಸಾವು


ಗಾರೆ ಕೆಲಸ ಮಾಡುವ ಕುಂಬಾರ ಕೆರಿಯಪ್ಪ ತಮ್ಮ ಬೈಕ್‌ನಲ್ಲಿ ತಾಗರ್ತಿ ಕಡೆಯಿಂದ ಸಂಜೆ ಏಳರ ಸಮಯದಲ್ಲಿ ಮಳ್ಳ ಬಸ್‌ ನಿಲ್ದಾಣ ಪಕ್ಕದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಕೆರಿಯಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದ್ವಿಚಕ್ರವಾಹನದಲ್ಲಿ ಕೆರಿಯಪ್ಪ ಅವರ ಜತೆ ತೆರಳುತ್ತಿದ್ದ ರಮೇಶ್‌ ಕೂಡ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ