ಸಾಗರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡ ದ್ವಿಚಕ್ರ ವಾಹನ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಬುಧವಾರ ರಾತ್ರಿ ತಾಲೂಕಿನ ತ್ಯಾಗರ್ತಿ ಸಮೀಪದ ಮಳ್ಳದಲ್ಲಿ ನಡೆದಿದೆ. ತ್ಯಾಗರ್ತಿ ಸಮೀಪದ ಮಳ್ಳ ಗ್ರಾಮದ ಕಾಗೋಡು ದಿಂಬದ ಕುಂಬಾರ ಕೆರಿಯಪ್ಪ(28) ಮೃತ ಪಟ್ಟವರು.
ಗಾರೆ ಕೆಲಸ ಮಾಡುವ ಕುಂಬಾರ ಕೆರಿಯಪ್ಪ ತಮ್ಮ ಬೈಕ್ನಲ್ಲಿ ತಾಗರ್ತಿ ಕಡೆಯಿಂದ ಸಂಜೆ ಏಳರ ಸಮಯದಲ್ಲಿ ಮಳ್ಳ ಬಸ್ ನಿಲ್ದಾಣ ಪಕ್ಕದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಕೆರಿಯಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದ್ವಿಚಕ್ರವಾಹನದಲ್ಲಿ ಕೆರಿಯಪ್ಪ ಅವರ ಜತೆ ತೆರಳುತ್ತಿದ್ದ ರಮೇಶ್ ಕೂಡ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾರೆ ಕೆಲಸ ಮಾಡುವ ಕುಂಬಾರ ಕೆರಿಯಪ್ಪ ತಮ್ಮ ಬೈಕ್ನಲ್ಲಿ ತಾಗರ್ತಿ ಕಡೆಯಿಂದ ಸಂಜೆ ಏಳರ ಸಮಯದಲ್ಲಿ ಮಳ್ಳ ಬಸ್ ನಿಲ್ದಾಣ ಪಕ್ಕದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಕೆರಿಯಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ದ್ವಿಚಕ್ರವಾಹನದಲ್ಲಿ ಕೆರಿಯಪ್ಪ ಅವರ ಜತೆ ತೆರಳುತ್ತಿದ್ದ ರಮೇಶ್ ಕೂಡ ಗಾಯಗೊಂಡಿದ್ದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.