ಆ್ಯಪ್ನಗರ

ಹಲ್ಲೆಕೋರರ ಗಡಿಪಾರಿಗೆ ವಿಎಚ್‌ಪಿ ಆಗ್ರಹ

ಅನ್ಯಕೋಮಿನ ಯುವಕರಿಂದ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆಯಾಗುತ್ತಿದೆ ಎಂದು ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ರಮೇಶ್‌ ಬಾಬು ಜಾದವ್‌ ಆರೋಪಿಸಿದರು.

Vijaya Karnataka 28 Sep 2019, 5:00 am
ಶಿವಮೊಗ್ಗ: ಅನ್ಯಕೋಮಿನ ಯುವಕರಿಂದ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆಯಾಗುತ್ತಿದೆ ಎಂದು ವಿಶ್ವ ಹಿಂದು ಪರಿಷತ್‌ ಜಿಲ್ಲಾಧ್ಯಕ್ಷ ರಮೇಶ್‌ ಬಾಬು ಜಾದವ್‌ ಆರೋಪಿಸಿದರು.
Vijaya Karnataka Web vhp demanding for the exile of attackers
ಹಲ್ಲೆಕೋರರ ಗಡಿಪಾರಿಗೆ ವಿಎಚ್‌ಪಿ ಆಗ್ರಹ


ಸುದ್ದಿಗೋಷ್ಠಿಯಲ್ಲಿಶುಕ್ರವಾರ ಆವರು ಮಾತನಾಡಿ, ಇತ್ತೀಚೆಗೆ ಹಿಂದುಗಳ ಮೇಲೆ ನಿರಂತರ ದಾಳಿ ಆಗುತ್ತಿದೆ. ಅದರಲ್ಲೂಗಣೇಶೋತ್ಸವದಂತಹ ಹಬ್ಬಗಳಲ್ಲಿಮುಂದಾಳತ್ವ ವಹಿಸುವ ಹಿಂದು ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿಸೋಮಿನಕೊಪ್ಪದ ಯೋಗೀಶ್‌, ಬಿ.ಬೀರನಹಳ್ಳಿ ಸುಮನ್‌, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆನಡೆದಿದೆ. ಇಂತಹ ಹಲ್ಲೆಗಳು ಪದೇ ಪದೇ ಆಗುತ್ತಲೇ ಇವೆ. ಕೂಡಲೆ ಹಲ್ಲೆನಡೆಸಿದ ಮತಾಂಧ ಗೂಂಡಾಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಅಲ್ಲದೆ, ಅನ್ಯಕೋಮಿನ ಯುವಕರು ಪ್ರೀತಿಯ ಹೆಸರಿನಲ್ಲಿಹಿಂದು ಯುವತಿಯರನ್ನು ವಂಚಿಸಿ ಮದುವೆಯಾಗುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಇತ್ತೀಚೆಗೆ ಇಂತಹ ಲವ್‌ ಜಿಹಾದ್‌ ಪ್ರಕರಣವೊಂದು ಶಿವಮೊಗ್ಗದಲ್ಲಿಯೇ ನಡೆದಿದ್ದು, ಇದನ್ನು ಪ್ರಶ್ನೆ ಮಾಡಲು ಹೋದ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆಆಗಿದ್ದೂ ಅಲ್ಲದೇ ಅವರ ವಿರುದ್ಧ್ದವೇ ಮೊಕದ್ದಮೆ ದಾಖಲಿಸಲಾಗಿದೆ. ಇಂತಹ ಘಟನೆಗಳಿಗೆ ಕೆಲ ಮಾಜಿ ಶಾಸಕರ ಕುಮ್ಮಕ್ಕು ಕೂಡ ಇದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿಪ್ರಮುಖರಾದ ನಾರಾಯಣ ಜಿ.ವರ್ಣೇಕರ್‌, ನಟರಾಜ್‌, ನಾಗೇಶ್‌, ರಾಜೇಶ್‌ಗೌಡ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ