ಆ್ಯಪ್ನಗರ

ವರಾಹಿ ಹಿನ್ನೀರು ಭಾಗದಲ್ಲಿ ಮತ್ತೆ ಕಂಪನ

ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸೋಮವಾರ ಸಹ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ತೀವ್ರ ಆತಂಕದಿಂದ ಮನೆಯಿಂದ ಹೊರಗೋಡಿ ಬಂದರು.

Vijaya Karnataka 5 Feb 2019, 5:00 am
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸೋಮವಾರ ಸಹ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ತೀವ್ರ ಆತಂಕದಿಂದ ಮನೆಯಿಂದ ಹೊರಗೋಡಿ ಬಂದರು.
Vijaya Karnataka Web vibration back on the backwaters of varahi
ವರಾಹಿ ಹಿನ್ನೀರು ಭಾಗದಲ್ಲಿ ಮತ್ತೆ ಕಂಪನ


ಮಧ್ಯಾಹ್ನ 12.15ರ ವೇಳೆಗೆ ಒಂದೆರಡು ಸೆಕೆಂಡ್‌ ಅವಧಿಯಲ್ಲಿ ಭೂಮಿ ಕಂಪಿಸಿದೆ. ಹೊಸನಗರ ತಾಲೂಕಿನ ಯಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರಿ ಶಬ್ದದೊಂದಿಗೆ ಕಂಪನವಾದ ಅನುಭವವಾಗಿದೆ. ಮಾನಿ ಜಲಾಶಯ ಹಾಗೂ ವಿದ್ಯುದಾಗಾರ ಸುತ್ತಮುತ್ತಲೂ ಕಂಪನ ಸಂಭವಿಸಿರುವುದು ಜನರ ಆತಂಕವನ್ನು ಇಮ್ಮಡಿಗೊಳಿಸಿದೆ.

ತೀರ್ಥಹಳ್ಳಿ ಪಟ್ಟಣ ಸಮೀಪ ದೊಡ್ಡ ಶಬ್ದ ಕೇಳಿಸಿದ್ದು ಬಿಟ್ಟರೆ ಕಂಪನದ ಅನುಭವವಾಗಿಲ್ಲ. ವಾರಾಹಿ ಹಿನ್ನೀರು ಜಲ ವಿದ್ಯುತ್‌ ಯೋಜನೆಯ ಮೇಗರವಳ್ಳಿ, ಹನಸ, ಕರುಣಾಪುರ, ದಿಂಡ, ಹುರುಳಿ, ತೈರೊಳ್ಳಿ, ದೊಡ್ಡಿನಮನೆ, ಸುಳುಗೋಡು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭೂ ಕಂಪನವಾಗಿದೆ ಎಂಬ ಕುರಿತು ಜನರು ಮಾಹಿತಿ ನೀಡಿದ್ದಾರೆ.

ಪಶ್ಚಿಮಘಟ್ಟ ಶ್ರೇಣಿಯ ಆಯ್ದ ಭಾಗದಲ್ಲಿ ಭಾನುವಾರ ಬೆಳಗಿನ ಜಾವ ಭೂಮಿ ಕಂಪಿಸಿ ಜನರಲ್ಲಿ ಆತಂಕ ಉಂಟುಮಾಡಿದ್ದು, ಸೋಮವಾರ ಮಧ್ಯಾಹ್ನ ಮತ್ತೆ ಉಂಟಾದ ಕಂಪನ ಜನರ ನೆಮ್ಮದಿ ಕೆಡಿಸಿದೆ. ಯಾವುದೇ ಆಸ್ತಿಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ. ನಿರಂತರ 2 ದಿನಗಳಿಂದ ಭೂ ಕಂಪನವಾದ ಕುರಿತಂತೆ ಮಾಹಿತಿ ನೀಡುತ್ತಿದ್ದರೂ ಆಡಳಿತ ತೀವ್ರ ನಿಗಾವಹಿಸಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ