ಆ್ಯಪ್ನಗರ

ಶಿವಮೊಗ್ಗ ಕಾರಾಗೃಹದಲ್ಲಿ ವಿಡಿಯೋ ಕಾಲ್‌ ಸೌಲಭ್ಯ; ಕಾಲ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!

ಮಾನವೀಯತೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹವು ವಿಡಿಯೋ ಕಾಲ್‌ ಮೂಲಕ ತಮ್ಮವರೊಂದಿಗೆ ಮಾತನಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಕಾರಾಗೃಹದಲ್ಲಿರುವ ಸಜಾಬಂದಿಗಳೊಂದಿಗೆ ಅವರ ಸಂಬಂಧಿಗಳು ಮನೆಯಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಬಹುದಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ ತಿಳಿಸಿದ್ದಾರೆ.

Vijaya Karnataka Web 13 Jan 2021, 9:21 am
ಶಿವಮೊಗ್ಗ: ಕಾರಾಗೃಹದಲ್ಲಿರುವ ಸಜಾಬಂದಿಗಳನ್ನು ಅವರ ಬಂಧುಗಳು ಇನ್ನು ಮುಂದೆ ವಿಡಿಯೋ ಕರೆ ಮಾಡಿ ಮಾತನಾಡಬಹುದಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಕೋವಿಡ್‌ ಹಿನ್ನೆಲೆಯಲ್ಲಿ ಹೊರಗಿನ ವ್ಯಕ್ತಿಗಳನ್ನು ಕಾರಾಗೃಹದೊಳಗೆ ಬರುವುದಕ್ಕೆ ಸರಕಾರ ಅವಕಾಶ ನಿರಾಕರಿಸಿದೆ. ಆ ಮೂಲಕ ಕಾರಾಗೃಹದೊಳಗೆ ಕೋವಿಡ್‌-19 ಹರಡುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಆದರೆ, ಸಜಾಬಂದಿಗಳನ್ನು ಅವರ ಬಂಧುಗಳು ನೋಡಲಾಗದ, ಮಾತನಾಡಿಸಲಾಗದ ನೋವು ಇದೆ.

ಮಾನವೀಯತೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹವು ವಿಡಿಯೋ ಕಾಲ್‌ ಮೂಲಕ ತಮ್ಮವರೊಂದಿಗೆ ಮಾತನಾಡುವ ಅವಕಾಶ ಕಲ್ಪಿಸಿಕೊಟ್ಟಿದೆ. ಕಾರಾಗೃಹದಲ್ಲಿರುವ ಸಜಾಬಂದಿಗಳೊಂದಿಗೆ ಅವರ ಸಂಬಂಧಿಗಳು ಮನೆಯಲ್ಲೇ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಬಹುದಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ ತಿಳಿಸಿದ್ದಾರೆ.

ಅವರ ಸಂಬಂಧಿಗಳು ನೂರಾರು ಕಿ.ಮೀ. ದೂರದಿಂದ ಇಡೀ ದಿನ ಪ್ರಯಾಣ ಮಾಡಿ ಕಾರಾಗೃಹಕ್ಕೆ ಬಂದು ಮಾತನಾಡಿಸಿಕೊಂಡು ಹೋಗಬೇಕಾಗಿತ್ತು. ಅದಕ್ಕಾಗಿ ಕೆಲವರು ಒಂದು ಅಥವಾ ಎರಡು ದಿನ ಮೀಸಲಿಡಬೇಕಾಗಿತ್ತು. ವಿಡಿಯೋ ಕಾನ್ಫರೆನ್ಸ್‌ ಅದೆಲ್ಲವನ್ನು ಸುಗಮಗೊಳಿಸಿದೆ. ಮತ್ತೊಂದು ಕಡೆ ಕಾರಾಗೃಹದಲ್ಲೂ ಹೊರಗಿನ ಜನರು ಬರುವುದನ್ನು ಭದ್ರತೆ ದೃಷ್ಟಿಯಿಂದ ನಿಯಂತ್ರಿಸಲು ಅನುಕೂಲವಾಗಿದೆ. ಎರಡು ದಿನಗಳಿಂದ ಈ ವ್ಯವಸ್ಥೆ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೇಪ್ & ಮರ್ಡರ್ ಆರೋಪದ ಮೇಲೆ ಜೈಲಿನಲ್ಲಿ 8 ವರ್ಷ ಕಳೆದ ವ್ಯಕ್ತಿಗೆ ಸರ್ಕಾರಿ ಉದ್ಯೋಗ..!

ಕಾಲ್‌ ಮಾಡುವುದು ಹೇಗೆ?

ಗೂಗಲ್‌ನಲ್ಲಿ ಎನ್‌ಪಿಐಪಿ ಎಂದು ಸರ್ಚ್ ಮಾಡಿ ನಂತರ ನ್ಯೂ ವಿಸಿಟ್‌ ರಿಜಿಸ್ಪ್ರೇಶನ್‌ ಮೇಲೆ ಕ್ಲಿಕ್‌ ಮಾಡಬೇಕು. ಸಂದರ್ಶಕರು ಇ-ಮೇಲ್‌ ಮತ್ತು ಮೊಬೈಲ್‌ ಸಂಖ್ಯೆ ಸೇರಿದಂತೆ ಕಡ್ಡಾಯ ಮಾಹಿತಿಗಳು, ಸಜಾಬಂದಿಗಳ ಮಾಹಿತಿ ಭರ್ತಿ ಮಾಡಬೇಕು. ಬಳಿಕ ವಿಡಿಯೋ ಕಾನ್ಫರೆನ್ಸ್‌ ಆಯ್ಕೆಯನ್ನು ಕ್ಲಿಕ್‌ ಮಾಡಿದಾಗ ಮೆಸೇಜ್‌ ಮತ್ತು ಇ-ಮೇಲ್‌ಗೆ ಒಟಿಪಿ ಬರುತ್ತದೆ. ಅದನ್ನು ಪೋರ್ಟಲ್‌ನಲ್ಲಿ ಹಾಕಿ ಓಕೆ ಮಾಡಬೇಕು.

ಆನಂತರದಲ್ಲಿ ಕಾರಾಗೃಹದ ಕಡೆಯಿಂದ ನಿಮ್ಮ ಸಂದರ್ಶನದ ಸಮಯವನ್ನು ನಿಗದಿಪಡಿಸಲಾಗುತ್ತದೆ. ನಂತರ ನಮೂದಿಸಿದ ಇ-ಮೇಲ್‌ಗೆ ವಿಐಎಸ್‌ಆರ್‌ಎನ್‌ ನಂಬರ್‌, ಪಿನ್‌ ಮತ್ತು ಲಿಂಕ್‌ ಬರುತ್ತದೆ. ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ ನಂತರ ವಿಐಎಸ್‌ಆರ್‌ಎನ್‌ ನಂಬರ್‌ ನೋಂದಾಯಿಸಿ ನೆಕ್ಸ್ಟ್‌ ಬಟನ್‌ ಕ್ಲಿಕ್‌ ಮಾಡಬೇಕು. ಬಳಿಕ ಸ್ಕ್ರೀನ್‌ನಲ್ಲಿ ನಿಮ್ಮ ಇ-ಮೇಲ್‌ಗೆ ಕಳುಹಿಸಿರುವ ಪಿನ್‌ ಮತ್ತು ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ಹಾಕಿ ಕ್ಲಿಕ್‌ ಮಾಡಿದರೆ ಜಿಟ್ಸಿ ಮುಖಾಂತರ ವಿಡಿಯೊ ಸಂದರ್ಶನಕ್ಕೆ ಹಾಜರಾಗಲು ಕೇಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದಲ್ಲಿ ನಿಮ್ಮ ಸ್ನೇಹಿತ ಅಥವಾ ಸಂಬಂಧಿಗಳ ಜತೆ ಮಾತನಾಡಬಹುದು. ಮಾಹಿತಿಗೆ ಮೊ.9480806469, 9480806467 ಸಂಪರ್ಕಿಸಬಹುದು ಎಂದು ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ