ಆ್ಯಪ್ನಗರ

ಮಾಹಿತಿ ತಂತ್ರಜ್ಞಾನದಿಂದ ಹಳ್ಳಿ-ನಗರ ಅಂತರ ಕಡಿತ

ಆಧುನಿಕ ಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನದ ಬದಲಾವಣೆಯಿಂದ ನಗರ ಮತ್ತು ಹಳ್ಳಿಗಳ ನಡುವೆ ಅಂತರ ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶಗಳು ಸಹ ನಗರ ಪ್ರದೇಶಗಳಷ್ಟೇ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿದೆ ಎಂದು ನಿವೃತ್ತ ಉಪನ್ಯಾಸಕ ವಿಜಯವಾಮನ್‌ ಅಭಿಪ್ರಾಯ ಪಟ್ಟರು.

Vijaya Karnataka 22 Feb 2019, 5:00 am
ತ್ಯಾಗರ್ತಿ: ಆಧುನಿಕ ಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನದ ಬದಲಾವಣೆಯಿಂದ ನಗರ ಮತ್ತು ಹಳ್ಳಿಗಳ ನಡುವೆ ಅಂತರ ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶಗಳು ಸಹ ನಗರ ಪ್ರದೇಶಗಳಷ್ಟೇ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿದೆ ಎಂದು ನಿವೃತ್ತ ಉಪನ್ಯಾಸಕ ವಿಜಯವಾಮನ್‌ ಅಭಿಪ್ರಾಯ ಪಟ್ಟರು.
Vijaya Karnataka Web SMR-21TGT1


ಇಲ್ಲಿನ ಲಿಟ್ಲ್‌ಫ್ಲವರ್‌ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ 'ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಬೇಕೇ' ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರ ಪ್ರದೇಶದ ಮಕ್ಕಳೊಂದಿಗೆ ಪೈಪೋಟಿ ಎದುರಿಸಲು ಮತ್ತು ಪಾರಿಭಾಷಿಕ ಶಬ್ಧಗಳ ತಿಳಿವಳಿಕೆ ಬರಬೇಕಾದರೆ ಇಂಗ್ಲಿಷ್‌ ಕಲಿಕೆ ಇಂದಿನ ವಿದ್ಯಾರ್ಥಿಗಳಿಗೆ ಅನಿವಾರ್ಯ. ಇಂಗ್ಲಿಷ್‌ ಭಾಷೆಗೆ ಇರುವ ಅವಕಾಶಗಳು ಬೇರೆ ಭಾಷೆಗಳಿಗಿಲ್ಲ. ಹೊರಗಿನ ಪ್ರಪಂಚದ ಸವಾಲುಗಳನ್ನು ಸ್ವೀಕರಿಸಲು ಇಂಗ್ಲಿಷ್‌ ಕಲಿಕೆಯೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಶಿಕ್ಷ ಣತಜ್ಞ ಬಿ.ಎನ್‌. ರಾಮಚಂದ್ರ ಮಾತನಾಡಿ, ಪಾಲಕರು ಮಕ್ಕಳ ಕಲಿಕೆಗೆ ಸೌಲಭ್ಯ ನೀಡುವುದು ಮಾತ್ರ ಶಿಕ್ಷ ಣವಲ್ಲ. ಕಲಿಕೆ ಜತೆಗೆ ಪೋಷಕರು ಭಾಗಿಯಾಗಿ ಆಸಕ್ತಿ ಮೂಡಿಸಬೇಕು. ಭಾಷೆ ಕಲಿಸುವ ಮಾಧ್ಯಮವಾಗಿದ್ದು, ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ, ಭಾಷೆಯಾಗಿ ಇಂಗ್ಲಿಷ್‌ನ್ನು ಕಲಿಸಬೇಕು ಎಂದು ಹೇಳಿದರು.

ಆಧುನಿಕ ಶಿಕ್ಷ ಣದ ಸವಾಲುಗಳ ಕುರಿತು ಪೋಷಕರೊಂದಿಗೆ ಸಂವಾದ ನಡೆಸಲಾಯಿತು. ನಿವೃತ್ತ ಮುಖ್ಯಶಿಕ್ಷ ಕ ನಾರಾಯಣಮೂರ್ತಿ ಕಾನುಗೋಡು ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಲ್‌.ಆರ್‌.ವೀರಪ್ಪ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯದರ್ಶಿ ಜಯ್‌ಕುಮಾರ್‌, ನಿರ್ದೇಶಕರಾದ ಕೇಶವಮೂರ್ತಿ, ಕರಿಬಸಪ್ಪ, ಬಿ.ಎಸ್‌.ನಾಗರಾಜ, ಗ್ರಾ.ಪಂ. ಸದಸ್ಯ ಗಿರೀಶ್‌, ಮುಖ್ಯ ಶಿಕ್ಷ ಕಿ ಸುಷ್ಮಾ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ