ರಸ್ತೆ, ಕೆರೆಗಳ ಅತಿಕ್ರಮಣ ತೆರವಿಗೆ ಗ್ರಾಮಸ್ಥರ ಆಗ್ರಹ
ಅತಿಕ್ರಮಣ ಮಾಡಿರುವ ರಸ್ತೆ ಹಾಗೂ ಕೆರೆ ಜಾಗ ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ಹೊಸೂಡಿ, ಚಿಕ್ಕಮರಡಿ, ಯಲವಟ್ಟಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka 20 Sep 2019, 5:00 am
ಶಿವಮೊಗ್ಗ: ಅತಿಕ್ರಮಣ ಮಾಡಿರುವ ರಸ್ತೆ ಹಾಗೂ ಕೆರೆ ಜಾಗ ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ಹೊಸೂಡಿ, ಚಿಕ್ಕಮರಡಿ, ಯಲವಟ್ಟಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಹೊರವಲಯ ಗುರುಪುರ ತಿರುವಿನ ಹೊಸೂಡಿ, ಶೆಟ್ಟಿಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿಕೆಲವರು ಮುಖ್ಯ ರಸ್ತೆಯ ಜಾಗದಲ್ಲೇ ಕಾಂಪೌಂಡ್ ಗೋಡೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಸರಕಾರಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೊಸೂಡಿಯಲ್ಲಿಕಾಡಾಕ್ಕೆ ಸೇರಿದ 92 ಎಕರೆ ವಿಸ್ತಾರದ ಪುರಾತನ ದೊಡ್ಡ ಕೆರೆ ಇದ್ದು, ಈಗಾಗಲೇ ಶೇ.95ಕ್ಕೂ ಹೆಚ್ಚು ಭಾಗ ಅತಿಕ್ರಮಣಕ್ಕೆ ಒಳಗಾಗಿದೆ. ಕೆರೆಯ ಒಡ್ಡಿನ ರಸ್ತೆಯೂ ಶಿಥಿಲವಾಗಿದೆ. ಇಲಾಖೆಯಿಂದ ಸೂಕ್ತ ನಿರ್ವಹಣೆಯಾಗುತ್ತಿಲ್ಲ. ಅಲ್ಲದೆ, ಅಳಿದುಳಿದ ಕೆರೆಯೂ ಸಂಪೂರ್ಣ ಹೂಳಿನಿಂದ ತುಂಬಿಕೊಂಡಿದೆ. ಆದ್ದರಿಂದ ಕೆರೆ ಒತ್ತುವರಿ ತೆರವುಗೊಳಿಸಿ, ಹೂಳನ್ನು ತೆಗೆಸಬೇಕು ಹಾಗೂ ಕೆರೆ ಒಡ್ಡಿನ ರಸ್ತೆಗೆ ಸುರಕ್ಷತಾ ಸಾಧನ ಅಳವಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷವಷ್ಟೇ ಎನ್ಆರ್ಎಫ್ ಫಂಡಿನಿಂದ 5 ಕೋಟಿ ರೂ. ವೆಚ್ಚದಲ್ಲಿಗುರುಪುರ ಕ್ರಾಸ್ನಿಂದ ಹೊಸೂಡಿ ವರೆಗೆ ಡಾಂಬರ್ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ಬದಿ ಮೆಸ್ಕಾಂನವರು ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಹಾಕಿದ್ದಾರೆ. ಹೀಗಾಗಿ, ವಾಹನಗಳು ಕಂಬಕ್ಕೆ ಡಿಕ್ಕಿಯಾಗುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಜತೆಗೆ, ಖಾಸಗಿ ಸಂಸ್ಥೆಯವರು ರಸ್ತೆಗೆ ಕಾಂಪೌಂಡ್ ಗೋಡೆ ನಿರ್ಮಿಸಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿಜಿ.ಪಂ.ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ತಾ.ಪಂ. ಸದಸ್ಯ ಕೆ.ಜಿ.ಶ್ರೀಧರ, ಡಾ.ಬಾಲಕೃಷ್ಣ ಹೆಗಡೆ, ಖಾರಾ ಸುಬ್ಬಣ್ಣ, ದಿನಕರ ಗೌಡ, ಸುಬ್ರಮಣ್ಯ ಉಪಾಧ್ಯಾಯ, ಕೃಷ್ಣಮೂರ್ತಿ ಐತಾಳ ಮತ್ತಿತರರು ಹಾಜರಿದ್ದರು.
ಶಿವಮೊಗ್ಗ ಹೊರವಲಯ ಗುರುಪುರ ತಿರುವಿನ ಹೊಸೂಡಿ, ಶೆಟ್ಟಿಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿಕೆಲವರು ಮುಖ್ಯ ರಸ್ತೆಯ ಜಾಗದಲ್ಲೇ ಕಾಂಪೌಂಡ್ ಗೋಡೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಸರಕಾರಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹೊಸೂಡಿಯಲ್ಲಿಕಾಡಾಕ್ಕೆ ಸೇರಿದ 92 ಎಕರೆ ವಿಸ್ತಾರದ ಪುರಾತನ ದೊಡ್ಡ ಕೆರೆ ಇದ್ದು, ಈಗಾಗಲೇ ಶೇ.95ಕ್ಕೂ ಹೆಚ್ಚು ಭಾಗ ಅತಿಕ್ರಮಣಕ್ಕೆ ಒಳಗಾಗಿದೆ. ಕೆರೆಯ ಒಡ್ಡಿನ ರಸ್ತೆಯೂ ಶಿಥಿಲವಾಗಿದೆ. ಇಲಾಖೆಯಿಂದ ಸೂಕ್ತ ನಿರ್ವಹಣೆಯಾಗುತ್ತಿಲ್ಲ. ಅಲ್ಲದೆ, ಅಳಿದುಳಿದ ಕೆರೆಯೂ ಸಂಪೂರ್ಣ ಹೂಳಿನಿಂದ ತುಂಬಿಕೊಂಡಿದೆ. ಆದ್ದರಿಂದ ಕೆರೆ ಒತ್ತುವರಿ ತೆರವುಗೊಳಿಸಿ, ಹೂಳನ್ನು ತೆಗೆಸಬೇಕು ಹಾಗೂ ಕೆರೆ ಒಡ್ಡಿನ ರಸ್ತೆಗೆ ಸುರಕ್ಷತಾ ಸಾಧನ ಅಳವಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷವಷ್ಟೇ ಎನ್ಆರ್ಎಫ್ ಫಂಡಿನಿಂದ 5 ಕೋಟಿ ರೂ. ವೆಚ್ಚದಲ್ಲಿಗುರುಪುರ ಕ್ರಾಸ್ನಿಂದ ಹೊಸೂಡಿ ವರೆಗೆ ಡಾಂಬರ್ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ಬದಿ ಮೆಸ್ಕಾಂನವರು ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಹಾಕಿದ್ದಾರೆ. ಹೀಗಾಗಿ, ವಾಹನಗಳು ಕಂಬಕ್ಕೆ ಡಿಕ್ಕಿಯಾಗುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಜತೆಗೆ, ಖಾಸಗಿ ಸಂಸ್ಥೆಯವರು ರಸ್ತೆಗೆ ಕಾಂಪೌಂಡ್ ಗೋಡೆ ನಿರ್ಮಿಸಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿಜಿ.ಪಂ.ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ತಾ.ಪಂ. ಸದಸ್ಯ ಕೆ.ಜಿ.ಶ್ರೀಧರ, ಡಾ.ಬಾಲಕೃಷ್ಣ ಹೆಗಡೆ, ಖಾರಾ ಸುಬ್ಬಣ್ಣ, ದಿನಕರ ಗೌಡ, ಸುಬ್ರಮಣ್ಯ ಉಪಾಧ್ಯಾಯ, ಕೃಷ್ಣಮೂರ್ತಿ ಐತಾಳ ಮತ್ತಿತರರು ಹಾಜರಿದ್ದರು.