ಆ್ಯಪ್ನಗರ

ವೃಂದಾವನಗಳ ಸಂರಕ್ಷಣೆಗೆ ವಿಪ್ರ ಸಮಾಜ ಆಗ್ರಹ

ಆನೆಗುಂದಿಯಲ್ಲಿರುವ ಶ್ರೀ ವ್ಯಾಸರಾಜರ ಮೂಲ ವೃಂದಾವನವನ್ನು ಧ್ವಂಸ ಮಾಡಿದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 21 Jul 2019, 5:00 am
ಶಿವಮೊಗ್ಗ : ಆನೆಗುಂದಿಯಲ್ಲಿರುವ ಶ್ರೀ ವ್ಯಾಸರಾಜರ ಮೂಲ ವೃಂದಾವನವನ್ನು ಧ್ವಂಸ ಮಾಡಿದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲೆಯ ವಿವಿಧ ವಿಪ್ರ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web viprama social demand for the preservation of vrindavan
ವೃಂದಾವನಗಳ ಸಂರಕ್ಷಣೆಗೆ ವಿಪ್ರ ಸಮಾಜ ಆಗ್ರಹ


ಪವಿತ್ರ ಕ್ಷೇತ್ರ ಆನೆಗುಂದಿಯಲ್ಲಿ ತುಂಗಭದ್ರಾ ನದಿಯ ನಡುಗಡ್ಡೆಯ ನವ ವೃಂದಾವನದಲ್ಲಿ ವಿಪ್ರ ಸಮುದಾಯದ ಮಾಧ್ವ ಪಂಗಡದ ಶ್ರೀ ವ್ಯಾಸರಾಜರ ವೃಂದಾವನವನ್ನು ಧ್ವಂಸ ಮಾಡಿರುವುದು ಹಿಂದೂ ಸಮಾಜಕ್ಕೆ ಅಘಾತಕಾರಿಯಾಗಿದೆ. ಈ ಕೃತ್ಯದಿಂದ ಸಾವಿರಾರು ಭಕ್ತರು ದಿಗ್ಭ್ರಮೆಗೊಳಗಿದ್ದಾರೆ. ಇದು ಕೇವಲ ವಿಪ್ರ ಸಮಾಜಕ್ಕೆ ಅಲ್ಲದೆ ಇಡೀ ನಾಡಿಗೆ ಮಾಡಿದ ಅವಮಾನವಾಗಿದೆ.

ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಮಾಡಬೇಕು. ಐತಿಹಾಸಿಕ ವೃಂದಾವನಗಳನ್ನು ಸಂರಕ್ಷಿಸಬೇಕು. ಅದಕ್ಕಾಗಿ ಕ್ಷೇತ್ರಕ್ಕೆ ಸೂಕ್ತ ರಕ್ಷ ಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಟರಾಜ್‌ ಭಾಗವತ್‌, ಸುಮತೀಂದ್ರಚಾರ್‌, ದೀನಮಣಿ, ಸುರೇಶ್‌, ವಾಸುದೇವ ಕುಷ್ಟಗಿ, ದೀನದಯಾಳ್‌, ಎನ್‌.ವಿ.ಶಂಕರನಾರಾಯಣ, ಎಂ.ಶಂಕರ್‌, ಸುರೇಖಾ ಮುರಳೀಧರ್‌ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ