ಆ್ಯಪ್ನಗರ

ವಿಶ್ವಕರ್ಮ ಜಯಂತಿ ಸರಳ ಆಚರಣೆ

ಅತಿವೃಷ್ಟಿ ಹಿನ್ನೆಲೆಯಲ್ಲಿಈ ಬಾರಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲು ಜಿಲ್ಲಾವಿಶ್ವಕರ್ಮ ಮಹಾಸಭಾ ತೀರ್ಮಾನಿಸಿದೆ.

Vijaya Karnataka 15 Sep 2019, 5:00 am
ಶಿವಮೊಗ್ಗ: ಅತಿವೃಷ್ಟಿ ಹಿನ್ನೆಲೆಯಲ್ಲಿಈ ಬಾರಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲು ಜಿಲ್ಲಾವಿಶ್ವಕರ್ಮ ಮಹಾಸಭಾ ತೀರ್ಮಾನಿಸಿದೆ.
Vijaya Karnataka Web vishwa


ಇತ್ತೀಚೆಗೆ ವಿಶ್ವಕರ್ಮ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ ನಡೆಸಲಾಗಿದ್ದು, ಜಯಂತಿ ಆಚರಣೆಗೆ ಸರಕಾರ ನೀಡುವ ಅನುದಾನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಮಹಾಸಭಾದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಅಗರದಹಳ್ಳಿ ನಿರಂಜನ ಮೂರ್ತಿ ಶನಿವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಈ ಬಾರಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿ ರಾಜ್ಯದಲ್ಲಿಹಲವು ಜಿಲ್ಲೆಗಳ ಜನ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಈ ಬಾರಿ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಸೆ.17ರಂದು ಬೆಳಗ್ಗೆ 7ರಿಂದ ಕೃಷಿನಗರದಲ್ಲಿವಿಶ್ವಕರ್ಮ ದೇವಸ್ಥಾನದಲ್ಲಿಹೋಮ, ಹವನ ನಡೆಯಲಿದೆ. ನಂತರ ಕುವೆಂಪು ರಂಗಮಂದಿರದಲ್ಲಿಸರಳವಾಗಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಗೋಷ್ಠಿಯಲ್ಲಿಪ್ರಮುಖರಾದ ಟಿ.ಆರ್‌.ಸತ್ಯನಾರಾಯಣ, ಸೋಮಚಾರಿ, ನಿಂಗಪ್ಪ, ಎ.ಜಿ.ಜನಾರ್ಧನ, ಬಸವರಾಜು, ಸೀತಾಲಕ್ಷ್ಮಿ, ರೂಪ ಚಂದ್ರಶೇಖರ್‌, ಗಂಗಾಧರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ