ಆ್ಯಪ್ನಗರ

ವಿಐಎಸ್‌ಎಲ್‌ ಕಾರ್ಖಾನೆ ಉಳಿವಿಗೆ ಉರುಳುಸೇವೆ

ವಿಐಎಸ್‌ಎಲ್‌ ಖಾಸಗೀಕರಣ ವಿರೋಧಿಸಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹಾಗು ನಿವೃತ್ತ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 19 ನೇ ದಿನವೂ ಮುಂದುವರಿದಿದೆ.

Vijaya Karnataka 25 Jul 2019, 5:00 am
ಭದ್ರಾವತಿ: ವಿಐಎಸ್‌ಎಲ್‌ ಖಾಸಗೀಕರಣ ವಿರೋಧಿಸಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹಾಗು ನಿವೃತ್ತ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 19 ನೇ ದಿನವೂ ಮುಂದುವರಿದಿದೆ.
Vijaya Karnataka Web SMR-24BDVT4


19ನೇ ದಿನದ ಅಂಗವಾಗಿ ಮಂಗಳವಾರ ಸಂಜೆ ಕ್ಷೇತ್ರ ಪಾಲಕ ಹಳೇನಗರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಕಾರ್ಮಿಕರು ಸಾಮೂಹಿಕ ಪಾರ್ಥನೆ ಸಲ್ಲಿಸಿ, ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಸಾಮೂಹಿಕ ಉರುಳು ಸೇವೆ ಸಮರ್ಪಿಸಿದರು.

ಕ್ಷೇತ್ರದ ಕಾರ್ಖಾನೆಯನ್ನು ಉಳಿಸಿಕೊಳ್ಳಲು ದೇವರ ಅನುಗ್ರಹವೂ ಮುಖ್ಯವಾಗಿದ್ದು, ಕ್ಷೇತ್ರ ಪಾಲಕ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯ ಆಶೀರ್ವಾದ ಇಲ್ಲಿನ ಜನಪ್ರತಿನಿಧಿಗಳ ಮೇಲಿದ್ದರೆ ನಮ್ಮ ಹೋರಾಟಕ್ಕೆ ಶಕ್ತಿ ಬಂದಂತಾಗುತ್ತದೆ. ಈ ಕಾರ್ಖಾನೆಯನ್ನು ಹಾಗೂ ಇಲ್ಲಿನ ಕಾರ್ಮಿಕ ವರ್ಗವನ್ನು ಉಳಿಸಿಕೊಡುವಲ್ಲಿ ಜನಪ್ರತಿನಿಧಿಗಳಿಗೆ ದೇವರು ಸದ್ಬುದ್ದಿ ನೀಡಲಿ ಎಂದು ಕಾರ್ಮಿಕರು ಪೂಜೆ ಸಲ್ಲಿಸುವುದರೊಂದಿಗೆ ಉರುಳುಸೇವೆ ನಡೆಸಿದರು.

ಸುಮಾರು 50 ವರ್ಷ ಲಾಭದಾಯಕವಾಗಿದ್ದ ಕಾರ್ಖಾನೆಯು ಸಂಕಷ್ಟದ ಈ ಸಂದರ್ಭದಲ್ಲಿ ಕೇವಲ ಹೋರಾಟ, ಪ್ರತಿಭಟನೆ, ಧಿಕ್ಕಾರಗಳನ್ನು ಕೂಗುವುದು ಮಾತ್ರ ನಮ್ಮ ಸಂಸ್ಕೃತಿಯಲ್ಲ. ಇದರ ಹಿನ್ನೆಲೆಯಲ್ಲಿ ಭಗವಂತನ ಅನುಗ್ರಹವು ಕೂಡ ನಮ್ಮ ಮೇಲಿರಲಿ ಎಂಬ ಆಶಯದಿಂದ ಉರುಳುಸೇವೆ ಮಾಡಲಾಗಿದೆ ಎಂದು ಕಾರ್ಮಿಕ ಮುಖಂಡರು ತಮ್ಮ ಅಭಿಪ್ರಾಯ ಹಂಚಿಕೊಂಡರು. ದೇವಾಲಯದ ಪ್ರಧಾನ ಅರ್ಚಕ ಶ್ರೀರಂಗನಾಥ ಶರ್ಮ ಮಂತ್ರೋಪದೇಶ ಪಠಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ