ಆ್ಯಪ್ನಗರ

ವಿವೇಕ ರೈಗೆ ಶಂಬಾ, ನಾಗೇಶ್‌ ಹೆಗಡೆಗೆ ಕಾರಂತ ಪ್ರಶಸ್ತಿ

ಶಿವಮೊಗ್ಗ ಕರ್ನಾಟಕ ಸಂಘದ ವಾರ್ಷಿಕ ಜೀವಮಾನ ಸಾಧನೆ ಪ್ರಶಸ್ತಿಗಳಾದ ಡಾ. ಶಂಬಾ ಜೋಷಿ ಮತ್ತು ಡಾ. ಶಿವರಾಮ ಕಾರಂತ ಪ್ರಶಸ್ತಿಗಳು 2019ನೇ ಸಾಲಿಗೆ ಕ್ರಮವಾಗಿ ಸಂಶೋಧಕ ಡಾ. ಬಿ.ಎ.ವಿವೇಕ ರೈ, ವಿಜ್ಞಾನ ಸಾಹಿತಿ ನಾಗೇಶ್‌ ಹೆಗಡೆ ಅವರಿಗೆ ಘೋಷಿಸಲಾಗಿದೆ.

Vijaya Karnataka 10 Apr 2019, 5:00 am
ಶಿವಮೊಗ್ಗ : ಶಿವಮೊಗ್ಗ ಕರ್ನಾಟಕ ಸಂಘದ ವಾರ್ಷಿಕ ಜೀವಮಾನ ಸಾಧನೆ ಪ್ರಶಸ್ತಿಗಳಾದ ಡಾ. ಶಂಬಾ ಜೋಷಿ ಮತ್ತು ಡಾ. ಶಿವರಾಮ ಕಾರಂತ ಪ್ರಶಸ್ತಿಗಳು 2019ನೇ ಸಾಲಿಗೆ ಕ್ರಮವಾಗಿ ಸಂಶೋಧಕ ಡಾ. ಬಿ.ಎ.ವಿವೇಕ ರೈ, ವಿಜ್ಞಾನ ಸಾಹಿತಿ ನಾಗೇಶ್‌ ಹೆಗಡೆ ಅವರಿಗೆ ಘೋಷಿಸಲಾಗಿದೆ.
Vijaya Karnataka Web vivekha rai nagesh hegde award
ವಿವೇಕ ರೈಗೆ ಶಂಬಾ, ನಾಗೇಶ್‌ ಹೆಗಡೆಗೆ ಕಾರಂತ ಪ್ರಶಸ್ತಿ


ಏ.13ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಸಂಘದ ಗೌರವ ಸದಸ್ಯರಾದ ಡಾ. ಶಂಬಾ ಜೋಷಿ ಅವರ ಹೆಸರಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಹಾಗೂ ಡಾ. ಶಿವರಾಮ ಕಾರಂತ ಹೆಸರಲ್ಲಿ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಪ್ರಶಸ್ತಿ ನೀಡಲಾಗುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಡಾ.ಕೆ.ಎನ್‌.ಗುರುದತ್‌ ಅಧ್ಯಕ್ಷ ತೆ ವಹಿಸುವರು. ಕಾರ್ಯಕ್ರಮದಲ್ಲಿ ಡಾ. ಬಿ.ಎ.ವಿವೇಕ್‌ ರೈ ಕುರಿತು ವಿಶ್ರಾಂತ ಪ್ರಾಚಾರ್ಯ ಡಾ. ಸತ್ಯನಾರಾಯಣ ಮಲ್ಲಿಪುರ ಹಾಗೂ ನಾಗೇಶ್‌ ಹೆಗಡೆ ಕುರಿತು ಪರಿಸರ ಹೋರಾಟಗಾರ ಅಖಿಲೇಶ್‌ ಚಿಪ್ಪಳಿ ಅಭಿನಂದನಾ ಭಾಷಣ ಮಾಡುವರು ಎಂದು ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್‌.ಎಸ್‌.ನಾಗಭೂಷಣ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ