ಸಾಗರ: 2013ರ ಸಹಕಾರಿ ಕಾಯ್ದೆ ತಿದ್ದುಪಡಿಯಿಂದಾಗಿ ಗ್ರಾಹಕರು ಮತ್ತು ಷೇರುದಾರರಿಗೆ ಮತದಾನ ಹಕ್ಕು ಕಸಿದುಕೊಂಡಂತಾಗಿದೆ. ಆದ್ದರಿಂದ ಈ ಸಂಬಂಧ ಹೈಕೋರ್ಟ್ನಲ್ಲಿದಾವೆ ಹೂಡಲಾಗಿದೆ ಎಂದು ಗಣಪತಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಎಸ್.ವಿ.ಹಿತಕರ ಜೈನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಶನಿವಾರ ಮಾತನಾಡಿದ ಅವರು, ಗಣಪತಿ ಬ್ಯಾಂಕ್ ಆಡಳಿತ ಮಂಡಳಿ ಬೇಜವಾಬ್ದಾರಿತನದಿಂದ ಚುನಾವಣೆಯಲ್ಲಿಮತದಾನ ಮಾಡುವ ಹಕ್ಕಿನಿಂದ ಸಾವಿರಾರು ಮತದಾರರು ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿಹೈಕೋರ್ಟ್ನಲ್ಲಿದಾವೆ ಹೂಡಲಾಗಿದೆ ಎಂದು ತಿಳಿಸಿದರು.
ಕಾಯ್ದೆಯಿಂದ ಆಗುತ್ತಿರುವ ತೊಂದರೆ ಕುರಿತು ನಮ್ಮ ತಂಡವು ಮತ್ತೊಮ್ಮೆ ಕೋರ್ಟ್ನಲ್ಲಿದಾವೆ ಹೂಡುವ ಸಿದ್ಧತೆ ನಡೆಸಿದೆ. ಜತೆಗೆ ಕಾಯ್ದೆ ಸಂಬಂಧ ಸೂಕ್ತ ನಿಗಾವಹಿಸದೆ ಷೇರುದಾರರು, ಸದಸ್ಯರು ಮತದಾನದಿಂದ ವಂಚಿತರಾಗುತ್ತಿರುವುದನ್ನು ಪ್ರಶ್ನಿಸಿ ಸಹಕಾರಿ ಇಲಾಖೆ ಮೇಲೆ ದಾವೆ ಹೂಡಲಾಗುವುದು ಎಂದು ತಿಳಿಸಿದರು. ದಳವಾಯಿ ದಾನಪ್ಪ, ಪ್ರೇಮ್ಸಿಂಗ್, ಕೆ.ಎಲ್.ಭೋಜರಾಜ್, ಕೆ.ಸಿದ್ದಪ್ಪ, ಅರುಣ ವಿನಾಯಕ್, ಪಾರ್ವತಿ, ಹನುಮಂತಪ್ಪ, ವಸಂತ್ ಶೇಟ್, ಗುರುಬಸವನಗೌಡ ಇತರರು ಇದ್ದರು.
ಸುದ್ದಿಗೋಷ್ಠಿಯಲ್ಲಿಶನಿವಾರ ಮಾತನಾಡಿದ ಅವರು, ಗಣಪತಿ ಬ್ಯಾಂಕ್ ಆಡಳಿತ ಮಂಡಳಿ ಬೇಜವಾಬ್ದಾರಿತನದಿಂದ ಚುನಾವಣೆಯಲ್ಲಿಮತದಾನ ಮಾಡುವ ಹಕ್ಕಿನಿಂದ ಸಾವಿರಾರು ಮತದಾರರು ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿಹೈಕೋರ್ಟ್ನಲ್ಲಿದಾವೆ ಹೂಡಲಾಗಿದೆ ಎಂದು ತಿಳಿಸಿದರು.
ಕಾಯ್ದೆಯಿಂದ ಆಗುತ್ತಿರುವ ತೊಂದರೆ ಕುರಿತು ನಮ್ಮ ತಂಡವು ಮತ್ತೊಮ್ಮೆ ಕೋರ್ಟ್ನಲ್ಲಿದಾವೆ ಹೂಡುವ ಸಿದ್ಧತೆ ನಡೆಸಿದೆ. ಜತೆಗೆ ಕಾಯ್ದೆ ಸಂಬಂಧ ಸೂಕ್ತ ನಿಗಾವಹಿಸದೆ ಷೇರುದಾರರು, ಸದಸ್ಯರು ಮತದಾನದಿಂದ ವಂಚಿತರಾಗುತ್ತಿರುವುದನ್ನು ಪ್ರಶ್ನಿಸಿ ಸಹಕಾರಿ ಇಲಾಖೆ ಮೇಲೆ ದಾವೆ ಹೂಡಲಾಗುವುದು ಎಂದು ತಿಳಿಸಿದರು. ದಳವಾಯಿ ದಾನಪ್ಪ, ಪ್ರೇಮ್ಸಿಂಗ್, ಕೆ.ಎಲ್.ಭೋಜರಾಜ್, ಕೆ.ಸಿದ್ದಪ್ಪ, ಅರುಣ ವಿನಾಯಕ್, ಪಾರ್ವತಿ, ಹನುಮಂತಪ್ಪ, ವಸಂತ್ ಶೇಟ್, ಗುರುಬಸವನಗೌಡ ಇತರರು ಇದ್ದರು.