ಆ್ಯಪ್ನಗರ

ಮತದಾರರ ಪಟ್ಟಿಯಲ್ಲಿ ಗೊಂದಲ: ಬಿಜೆಪಿ ಪ್ರತಿಭಟನೆ

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿ ತೀವ್ರ ಗೊಂದಲಕ್ಕೆ ಒಳಗಾಗಿದೆ. ಅದನ್ನು ಕೂಡಲೆ ಬದಲಾಯಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಕೆ.ಎಸ್‌.ಗುರುಮೂರ್ತಿ ಹೇಳಿದರು.

Vijaya Karnataka 15 Dec 2018, 5:00 am
ಶಿಕಾರಿಪುರ : ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿ ತೀವ್ರ ಗೊಂದಲಕ್ಕೆ ಒಳಗಾಗಿದೆ. ಅದನ್ನು ಕೂಡಲೆ ಬದಲಾಯಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಕೆ.ಎಸ್‌.ಗುರುಮೂರ್ತಿ ಹೇಳಿದರು.
Vijaya Karnataka Web SMR-14skp2


ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆ, ತಹಸೀಲ್ದಾರ್‌ ಕಚೇರಿ ಮುತ್ತಿಗೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಕರಡು ಪಟ್ಟಿ ತಯಾರಿಸುವಾಗ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸದೆ ಕೇವಲ ರಾಜಕೀಯ ಪ್ರಭಾವ, ಹಿತಾಸಕ್ತಿ ಪರಿಗಣಿಸಿ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ.

ಚುನಾವಣೆ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆಯುವುದಕ್ಕೆ ಇದೇ ತಿಂಗಳ 20ರವರೆಗೆ ದಿನಾಂಕ ನಿಗದಿಪಡಿಸಿದೆ. ಈ ನಡುವೆ ಪುರಸಭೆ ವ್ಯಾಪ್ತಿಯಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ವಾರ್ಡ್‌ ವಿಂಗಡನೆ ಅಸಮರ್ಪಕವಾಗಿದೆ. ಒಂದೇ ಕೇರಿಯ ಅರ್ಧ ಭಾಗ ಒಂದು ವಾರ್ಡ್‌ ಮತ್ತೊಂದು ಭಾಗ ಬೇರೆ ವಾರ್ಡ್‌ಗೆ ವಿಂಗಡಿಸಲಾಗಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಲಾಗಿಲ್ಲ ಎನ್ನುವುದು ಪಟ್ಟಿ ನೋಡಿದರೆ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಮತದಾರರ ಪಟ್ಟಿಯಲ್ಲಿನ ಗೊಂದಲ ಕೂಡಲೆ ಸರಿಪಡಿಸಬೇಕು, ಈಗಿನ ಕರಡು ಪಟ್ಟಿ ರದ್ದುಗೊಳಿಸಬೇಕು, ರಾಜಕೀಯ ಪಕ್ಷ , ಸ್ಥಳೀಯ ಮುಖಂಡರೊಂದಿಗೆ ಮಾಹಿತಿ ಪಡೆದು ಮತದಾರರ ಪರಿಷ್ಕರಣೆ ಮಾಡುವ ಕಾರ‍್ಯ ಮಾಡಬೇಕು. ಒಂದು ಪಕ್ಷ ದ, ಕೆಲವೆ ರಾಜಕಾರಣಿಗಳ ಹಿತಾಸಕ್ತಿ ಕಾಯುವಂತಿರುವ ಪಟ್ಟಿಗೆ ಎಲ್ಲರೂ ಆಕ್ಷೇಪಣೆ ಸಲ್ಲಿಸಬೇಕು ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಬಿ.ಚನ್ನವೀರಪ್ಪ, ಗುರುರಾಜ ಜಗತಾಪ್‌, ಪುರಸಭೆ ಸದಸ್ಯರಾದ ವಸಂತಗೌಡ, ಪರಶುರಾಮ್‌ ಚಾರುಗಲ್ಲಿ, ಪಾಲಾಕ್ಷ ಪ್ಪ, ಸೈಯದ್‌ಪೀರ್‌, ಕೆ.ಹಾಲಪ್ಪ, ಡಿ.ಎಸ್‌.ಈಶ್ವರಪ್ಪ, ರೇಣುಕಸ್ವಾಮಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ