ಆ್ಯಪ್ನಗರ

ರಾಜಧಾನಿಗೆ ಲಿಂಗನಮಕ್ಕಿ ನೀರು: ವ್ಯಾಪಕ ವಿರೋಧ

ತಾಲೂಕಿನ ಶರಾವತಿ ಹಿನ್ನೀರಿನ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರೊದಗಿಸುವ ಯೋಜನೆ ಕೂಡಲೇ ಕೈಬಿಡಬೇಕೆಂದು ಸಾಗರ ಭಾಗದ ಸಾರ್ವಜನಿಕರು, ಜಿಲ್ಲೆಯ ಪರಿಸರ ಪ್ರೇಮಿಗಳು ವ್ಯಾಪಕ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Vijaya Karnataka 21 Jun 2019, 5:00 am
ಸಾಗರ (ಶಿವಮೊಗ್ಗ) : ತಾಲೂಕಿನ ಶರಾವತಿ ಹಿನ್ನೀರಿನ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರೊದಗಿಸುವ ಯೋಜನೆ ಕೂಡಲೇ ಕೈಬಿಡಬೇಕೆಂದು ಸಾಗರ ಭಾಗದ ಸಾರ್ವಜನಿಕರು, ಜಿಲ್ಲೆಯ ಪರಿಸರ ಪ್ರೇಮಿಗಳು ವ್ಯಾಪಕ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
Vijaya Karnataka Web water to the capital widespread opposition
ರಾಜಧಾನಿಗೆ ಲಿಂಗನಮಕ್ಕಿ ನೀರು: ವ್ಯಾಪಕ ವಿರೋಧ


ಜೂನ್‌ 22ರಂದು ಸಂಜೆ 5ಕ್ಕೆ ಈ ಕುರಿತು ಚರ್ಚಿಸುವುದಕ್ಕಾಗಿ ಸಾಗರದ ನೌಕರರ ಭವನದಲ್ಲಿ 'ಸಮಾಲೋಚನಾ ಸಭೆ'ಯನ್ನು ಕರೆಯಲಾಗಿದೆ.

'ಶರಾವತಿ ನದಿಗಾಗಿ ನಾವು' ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ಸೃಜಿಸಲಾಗಿದ್ದು, ಸೋಶಿಯಲ್‌ ಮೀಡಿಯಾ ಮೂಲಕ ದೊಡ್ಡ ಹೋರಾಟ ರೂಪಿಸುವ ಯೋಜನೆಯೂ ಇದೆ. ಲಿಂಗನಮಕ್ಕಿ ನೀರು ಬೆಂಗಳೂರಿಗೆ ಸರಬರಾಜು ಮಾಡುವ ಸಂಬಂಧ ಗುರುವಾರ ಮಾಧ್ಯಮಗಳಲ್ಲಿ ಮಾಹಿತಿ ತಿಳಿಯುತ್ತಿದ್ದಂತೆ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಂದಿನ ನಡೆ, ಮಲೆನಾಡಿಗೆ ಶರಾವತಿಯ ಪ್ರಾಮುಖ್ಯತೆ ಮತ್ತಿತರ ಅಂಶಗಳ ಬಗ್ಗೆ ಗಮನ ಸೆಳೆಯಲಾಗುತ್ತಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಆಳುವವರ ಕಣ್ಣಿಗೆ ಶರಾವತಿ ಬಿದ್ದಿರುವುದಕ್ಕೆ ಸ್ಥಳೀಯವಾಗಿ ಆಕ್ಷೇಪ ಹರಿಯತೊಡಗಿದೆ. ಟ್ವಿಟರ್‌ನಲ್ಲಿ ಜನಪ್ರತಿನಿಧಿಗಳನ್ನು ಟ್ಯಾಗ್‌ ಮಾಡಿ ಅವರ ಗಮನವನ್ನೂ ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ನದಿ ನೀರನ್ನು ತಿರುಗಿಸುವ, ಒಂದು ಪ್ರದೇಶದ ನೀರನ್ನು ನೂರಾರು ಕಿ.ಮೀ. ದೂರಕ್ಕೆ ಕೊಂಡಯ್ಯುವ ಯೋಜನೆಗಳೇ ಮೂರ್ಖತನದ್ದು. ನದಿ ನೀರು ತಿರುಗಿಸುವುದರಿಂದ ಪರಿಸರದ ಮೇಲೆ, ನೀರು ಅವಲಂಬಿಸಿ ಹುಟ್ಟಿ ಬೆಳೆಯುವ ಜಲಚರಗಳ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದರಲ್ಲೂ ಸಾಗರದ ಜನತೆಗೇ ಕುಡಿಯಲು ಸರಿಯಾಗಿ ನೀರೊದಗಿಸಲು ಆಗುತ್ತಿಲ್ಲ. ಜಿಲ್ಲೆಯ ನೀರಾವರಿ ವ್ಯವಸ್ಥೆ ಅಧೋಗತಿಯಲ್ಲಿದೆ. ಅಂಥದ್ದರಲ್ಲಿ ದೂರದ ಬೆಂಗಳೂರಿಗೆ ಇಲ್ಲಿಂದ ನೀರು ತೆಗೆದುಕೊಂಡು ಹೋಗಲು ಬಿಡಬಾರದು ಎಂಬ ಆಗ್ರಹ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ