ಆ್ಯಪ್ನಗರ

ಪತಿ ಸಾವು ತನಿಖೆಗೆ ಪತ್ನಿ ದೂರು

ತಾಲೂಕಿನ ಕಾನ್ಲೆ ಗ್ರಾಮ ಪಂಚಾಯಿತಿಯ ಹೊಂಕೇರಿ ಗ್ರಾಮದಲ್ಲಿ ತನ್ನ ಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಪತ್ನಿ ಗ್ರಾಮಾಂತರ ಠಾಣೆಗೆ ಶುಕ್ರವಾರ ದೂರು ನೀಡಿದ ಘಟನೆ ನಡೆದಿದೆ.

Vijaya Karnataka 14 Jul 2019, 5:00 am
ಸಾಗರ: ತಾಲೂಕಿನ ಕಾನ್ಲೆ ಗ್ರಾಮ ಪಂಚಾಯಿತಿಯ ಹೊಂಕೇರಿ ಗ್ರಾಮದಲ್ಲಿ ತನ್ನ ಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಪತ್ನಿ ಗ್ರಾಮಾಂತರ ಠಾಣೆಗೆ ಶುಕ್ರವಾರ ದೂರು ನೀಡಿದ ಘಟನೆ ನಡೆದಿದೆ.
Vijaya Karnataka Web wife complains for husbands death investigation
ಪತಿ ಸಾವು ತನಿಖೆಗೆ ಪತ್ನಿ ದೂರು


ಹೊಂಕೇರಿ ಗ್ರಾಮದ ಸುಧಾಕರ್‌ (32) ಶುಕ್ರವಾರ ಅನುಮಾನಾಸ್ಪದ ರೀತಿ ತನ್ನ ಜಮೀನಿನಲ್ಲಿ ಮೃತಪಟ್ಟಿದ್ದಾರೆ. ಪತ್ನಿ ಸಂಗೀತ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಜಮೀನಲ್ಲಿ ತುಂಬಾ ಜನ ಸೇರಿದ್ದಾರೆ ಎಂದು ಗ್ರಾಮಸ್ಥರು ಅವರಿಗೆ ತಿಳಿಸಿದ್ದಾರೆ. ಸಂಗೀತ ಅವರು ಜಮೀನಿಗೆ ಬಂದು ನೋಡಿದಾಗ ಪತಿ ಸುಧಾಕರ್‌ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಕಂಡು ಬಂದಿದೆ. ತನ್ನ ಪತಿ ಬಾಯಲ್ಲಿ ರಕ್ತಬಂದಿದ್ದು, ಮೂಗಿನಲ್ಲಿ ಮಣ್ಣು ತುಂಬಿಕೊಂಡಿದ್ದು, ಹಾಕಿಕೊಂಡಿದ್ದ ಬಟ್ಟೆ ಹರಿದು ಹೋಗಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಸಂಗೀತ ತಮ್ಮ ದೂರಿನಲ್ಲಿ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ