ಸಾಗರ : ರಾಜಕಾರಣಿಗಳಿಗೆ ಅಗತ್ಯವಾದ ಸಾಮಾಜಿಕ ಇಚ್ಛಾಶಕ್ತಿಯನ್ನು ತಮ್ಮ ಅಧಿಕಾರವಧಿಯಲ್ಲಿದೇವರಾಜ ಅರಸು ಕಾಪಾಡಿಕೊಂಡಿದ್ದರು ಎಂದು ಹೋರಾಟಗಾರ ಹರ್ಷಕುಮಾರ್ ಕುಗ್ವೆ ಹೇಳಿದರು.
ಇಲ್ಲಿನ ಜಂಬಗಾರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿಗುರುವಾರ ಕರ್ನಾಟಕ ಮುನ್ನಡೆ ಸಂಸ್ಥೆ ಏರ್ಪಡಿಸಿದ್ದ 'ಅರಸು ನೆನಪು'ಕಾರ್ಯಕ್ರಮದಲ್ಲಿಅವರು ಉಪನ್ಯಾಸ ನೀಡಿದರು.
ಸಂವಿಧಾನದ ಆಶಯ ಸರಿಯಾಗಿ ಅರ್ಥ ಮಾಡಿಕೊಂಡು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದವರು ದೇವರಾಜ ಅರಸು. ಆದರೆ ಆಧುನಿಕ ಸಾಮಾಜಿಕ ಜಾಲತಾಣಗಳು ಅರಸುರಂತಹ ಸಾಮಾಜಿಕ ಹರಿಕಾರರನ್ನು ವಿದ್ಯಾರ್ಥಿ ಯುವಜನರಿಗೆ ತಲುಪಿಸುವಲ್ಲಿವಿಫಲವಾಗಿವೆ ಎಂದರು.
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕಿ ವೃಂದಾ ಹೆಗಡೆ ಪ್ರತಿಸ್ಪಂದನೆ ನೀಡಿದರು. ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಶಿವಾನಂದ ಕುಗ್ವೆ, ರತ್ನಾಕರ ಸಿ. ಕಾನುಗೋಡು, ಬಿಸಿಎಂ ವಿಸ್ತರಣಾಧಿಕಾರಿ ಸಿ.ಲಕ್ಷಿತ್ರ್ಮೕನಾರಾಯಣ್, ಆರ್.ನಾರಾಯಣ್ ಮಂಡಗಳಲೆ ಇದ್ದರು. ಭೂಮಿಕಾ ಪ್ರಾರ್ಥಿಸಿ, ಲಕ್ಷಿತ್ರ್ಮೕನಾರಾಯಣ ಸ್ವಾಗತಿಸಿದರು. ಪರಮೇಶ್ವರ ಕೆ.ಆಲಳ್ಳಿ ವಂದಿಸಿ, ಶಂಕರ್ ನಿರೂಪಿಸಿದರು.