ಆ್ಯಪ್ನಗರ

ಸ್ಥಳೀಯರ ಸಹಕಾರದಿಂದ ಉತ್ತಮ ಕೆಲಸ

ಸನ್ಯಾಸಿಕೋಡಮಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸನ್ಯಾಸಿಕೋಡಮಗ್ಗಿ ಗ್ರಾಮದ ಕರಿಯಮ್ಮ ದೇವಸ್ಥಾನದಿಂದ ನಂದೀಶ್ವರ ವೃತ್ತದವರೆಗೆ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ವಿಧಾನಪರಿಷತ್‌ ಸದಸ್ಯ ಆರ್‌.ಪಸನ್ನಕುಮಾರ್‌ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

Vijaya Karnataka 17 Feb 2019, 5:00 am
ಹೊಳೆಹೊನ್ನೂರು: ಸನ್ಯಾಸಿಕೋಡಮಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸನ್ಯಾಸಿಕೋಡಮಗ್ಗಿ ಗ್ರಾಮದ ಕರಿಯಮ್ಮ ದೇವಸ್ಥಾನದಿಂದ ನಂದೀಶ್ವರ ವೃತ್ತದವರೆಗೆ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ವಿಧಾನಪರಿಷತ್‌ ಸದಸ್ಯ ಆರ್‌.ಪಸನ್ನಕುಮಾರ್‌ ಅವರು ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
Vijaya Karnataka Web SMR-16HHR1


ನಂತರ ಅವರು ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಯೋಜನೆಯಡಿ ರಸ್ತೆ ಅಭಿವೃದ್ಧಿ ಹಾಗೂ ಬಾಕ್ಸ್‌ ಚರಂಡಿ ನಿರ್ಮಿಸಲಾಗುತ್ತಿದೆ. ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಕ್ಷೇತ್ರಾದ್ಯಂತ ಇಂತಹ ಹಲವು ಪ್ರಗತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಉತ್ತಮ ಕೆಲಸ ಆಗಬೇಕಾದಲ್ಲಿ ಸ್ಥಳೀಯರು ಸಹಕಾರ ನೀಡಬೇಕು ಎಂದರು.

ಗ್ರಾ.ಪಂ. ಉಪಾಧ್ಯಕ್ಷ ಸುರೇಶ್‌ ಬಿಂಗೇರ್‌, ಸದಸ್ಯರಾದ ಲತಾ ಮಂಜುನಾಥ್‌, ಮೀನಾಕ್ಷ ಮ್ಮ, ಜಿ.ಸಾಕಮ್ಮ, ಆರ್‌.ಸಿ.ಮಹೇಶ್‌, ಬಸವರಾಜ್‌, ಹೊಳೆಹೊನ್ನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಹನುಮಂತು, ಮುಖಂಡರಾದ ಜಿ.ಆರ್‌.ಸೀತಾರಾಮ್‌, ಹನುಮಂತಪ್ಪಗೌಡ, ಗಂಗನಗೌಡ, ಎಚ್‌.ಜಿ.ಮಂಜುನಾಥ್‌, ಹಮೀದ್‌ ಖಾನ್‌, ಬಸಪ್ಪ ಮಾಸ್ಟರ್‌ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ