ಆ್ಯಪ್ನಗರ

ಎಕ್ಸ್‌ರೇ ಕೆಲಸ ಸವಾಲೇ ಸರಿ

ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾದ ಹತ್ತಾರು ಸಂಗತಿಗಳಿಂದ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಇಲ್ಲಿನ ಉಪವಿಭಾಗೀಯ ಆಸ್ಪತ್ರೆ ತಜ್ಞ ವೈದ್ಯ ಡಾ.ಸಿದ್ದನಗೌಡ ಪಾಟೀಲ್‌ ಹೇಳಿದರು.

Vijaya Karnataka 12 Nov 2019, 5:00 am
ಸಾಗರ: ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾದ ಹತ್ತಾರು ಸಂಗತಿಗಳಿಂದ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಇಲ್ಲಿನ ಉಪವಿಭಾಗೀಯ ಆಸ್ಪತ್ರೆ ತಜ್ಞ ವೈದ್ಯ ಡಾ.ಸಿದ್ದನಗೌಡ ಪಾಟೀಲ್‌ ಹೇಳಿದರು.
Vijaya Karnataka Web 0707103009SGR3_46
ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿಶುಕ್ರವಾರ ಆರೋಗ್ಯ ಇಲಾಖೆ ನೌಕರರ ಒಕ್ಕೂಟದಿಂದ ನಾಲ್ವರು ಎಕ್ಸ್‌ರೇ ತಂತ್ರಜ್ಞರನ್ನು ಸನ್ಮಾನಿಸಲಾಯಿತು.


ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿಶುಕ್ರವಾರ ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಏರ್ಪಡಿಸಿದ್ದ ವಿಶ್ವ ರೆಡಿಯಾಲಜಿ ದಿನಾಚರಣೆ ಅಂಗವಾಗಿ ನಾಲ್ವರು ಎಕ್ಸ್‌ರೇ ತಂತ್ರಜ್ಞರ ಸನ್ಮಾನ ಸಮಾರಂಭದಲ್ಲಿಅವರು ಮಾತನಾಡಿದರು.

ಎಕ್ಸ್‌ರೇ ರೂಂನಲ್ಲಿಕೆಲಸ ಸೇರಿದಂತೆ ಆರೋಗ್ಯ ಇಲಾಖೆ ಸೇವೆ ಸವಾಲಿನ ಕೆಲಸ ಆಗಿದೆ. ವಿಕಿರಣ ಹಾನಿಕಾರಿಯಾಗಿದ್ದು, ರೋಗಿ ಮತ್ತು ತಜ್ಞರು ಸಾಕಷ್ಟು ಎಚ್ಚರ ವಹಿಸಬೇಕೆಂದರು.

ಸನ್ಮಾನ ಸ್ವೀಕರಿಸಿದ ಎಕ್ಸರೆ ತಂತ್ರಜ್ಞ ಹಾಗೂ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಇತ್ತೀಚೆಗೆ ವೈದ್ಯರಾಗಿ ಸೇವೆಗೆ ಬರುವವರಲ್ಲಿಶ್ರೀಮಂತರ ಮಕ್ಕಳು ಹೆಚ್ಚುತ್ತಿದ್ದಾರೆ. ಅಂತವರಿಗೆ ಬಡತನದ ಕಲ್ಪನೆ ಇಲ್ಲ. ಇವರಿಗೆ ಸಾರ್ವಜನಿಕ ನಡವಳಿಕೆ ಬಗ್ಗೆ ಹಿರಿಯ ಅನುಭವಿ ವೈದ್ಯರಿಂದ ತರಬೇತಿ ಅಗತ್ಯವಿದೆ ಎಂದರು.

ಆಸ್ಪತ್ರೆ ಹಿರಿಯ ಎಕ್ಸ್‌ರೇ ತಂತ್ರಜ್ಞರಾದ ಮ.ಸ.ನಂಜುಂಡಸ್ವಾಮಿ, ಮುಸ್ತಾಕ್‌ ಅಹ್ಮದ್‌, ರಾಜು ಈಳಿಗಾರ್‌ ಹಾಗೂ ಆನಂದಪುರ ಆಸ್ಪತ್ರೆಯ ಪ್ರತಿಭಾ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ವೈದ್ಯರಾದ ಡಾ.ಪರಪ್ಪ, ಡಾ.ಸುಮ, ಸಿಬ್ಬಂದಿ ಸುಶೀಲ, ಲತಾ ಇತರರು ಇದ್ದರು. ರೇಣುಕಾ ಪ್ರಾರ್ಥಿಸಿ, ಗುರುಶಾಂತ ಸ್ವಾಗತಿಸಿದರು. ಜುಬೇದ ವಂದಿಸಿ, ವಿನೋದಕುಮಾರ್‌ ನಿರೂಪಿಸಿದರು.

========
ಎಕ್ಸ್‌ರೇ ಯಂತ್ರದ ಆವಿಷ್ಕಾರದಿಂದ ರೋಗಿಯೊಬ್ಬನ ಚಿಕಿತ್ಸೆ ಹೇಗೆ ಮಾಡಬೇಕೆಂಬುದಕ್ಕೆ ಉತ್ತರ ಸಿಕ್ಕಿದೆ. ಅನೇಕ ರೋಗಗಳು ಈ ಯಂತ್ರದ ಮೂಲಕ ಪತ್ತೆಯಾಗುತ್ತವೆ. ರೆಡಿಯೇಷನ್‌ ಹಾನಿಕಾರಕ ಎಂಬ ಎಚ್ಚರ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಇಲ್ಲಿನ ತಂತ್ರಜ್ಞರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.
-ಡಾ.ಮುನಿವೆಂಕಟರಾಜು, ತಾಲೂಕು ಆರೋಗ್ಯಾಧಿಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ