ಆ್ಯಪ್ನಗರ

ಯೋಗ ಸಾಧನೆ ಸದೃಢ ಆರೋಗ್ಯಕ್ಕೆ ಸಹಕಾರಿ

ಯೋಗಾಸನ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಅದರ ನಿಯಮಗಳನ್ನು ಶರಣರು ವಚನಗಳಲ್ಲಿ ವ್ಯಾಖ್ಯಾನಿಸಿದ್ದಾರೆ ಎಂದು ಶಿವಮೊಗ್ಗ ಬಸವ ಕೇಂದ್ರ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

Vijaya Karnataka 24 Jun 2019, 6:14 pm
ಭದ್ರಾವತಿ: ಯೋಗಾಸನ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಅದರ ನಿಯಮಗಳನ್ನು ಶರಣರು ವಚನಗಳಲ್ಲಿ ವ್ಯಾಖ್ಯಾನಿಸಿದ್ದಾರೆ ಎಂದು ಶಿವಮೊಗ್ಗ ಬಸವ ಕೇಂದ್ರ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
Vijaya Karnataka Web SMR-23BDVT2


ಅವರು ಭಾನುವಾರ ಹಳೇನಗರದ ಶ್ರೀ ಅಕ್ಕಮಹಾದೇವಿ ಬಳಗ, ಬಸವ ಕೇಂದ್ರ ಹಾಗೂ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ 203ನೇ ಶರಣ ಸಂಗಮ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ‍್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಇಂದ್ರಿಯಗಳನ್ನು ಕೇಂದ್ರಿಕರಿಸಿದ ಸ್ಥಿತಿಯೆ ಧ್ಯಾನವಾಗಿದೆ. ಅದ್ದರಿಂದ ದೈನಂದಿನ ಜೀವನದಲ್ಲಿ ದೈಹಿಕ ಶ್ರಮಗಳನ್ನು ಸರಿಯಾದ ರೀತಿಯಲ್ಲಿ ಅನುಸರಣೆ ಮಾಡಿದ್ದಲ್ಲಿ ಯಾವ ಆಸನಗಳೂ ಬೇಕಾಗುವುದಿಲ್ಲ. ಇಂದಿನ ದಿನಗಳಲ್ಲಿ ಅವುಗಳನ್ನು ಅನುಸರಿಸದೆ ಇರುವ ಕಾರಣದಿಂದಾಗಿ ಮಾನಸಿಕ, ದೈಹಿಕವಾಗಿ ಕ್ಷೀಣಿಸುವಂತಾಗಿದೆ ಎಂದು ಹೇಳಿದರು.

ಟಿಎಂಎಇಎಸ್‌ ಆರ್ಯುವೇದಿಕ್‌ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಅರುಣ ಕುಮಾರಿ ಯೋಗ ಮತ್ತು ಆರೋಗ್ಯದ ಕುರಿತು, ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್‌ ಕಾಲೇಜಿನ ಡಾ.ಕಂಚನ್‌ ಜಿರೋಬೆ ಕೊಪ್ಪದ್‌ ಬಸವತತ್ವ ಮತ್ತು ವಿಜ್ಞಾನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅಕ್ಕಮಹಾದೇವಿ ಬಳಗದವರಿಂದ ಪ್ರಾರ್ಥನೆ ನಡೆಯಿತು. ಡಾ.ದಿವ್ಯ ಸ್ವಾಗತಿಸಿ, ಟಿ.ಜಿ.ಬಸವರಾಜಯ್ಯ ವಂದಿಸಿದರು. ಮಲ್ಲಿಕಾಂಬ ವಿರುಪಾಕ್ಷ ಪ್ಪ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ