ಆ್ಯಪ್ನಗರ

‘ಶ್ರೇಷ್ಠ ಚಿಂತನೆಗೆ ಯೋಗ ವಿಶೇಷ ಅಸ್ತ್ರ’

ಮಾನವ ತಂತ್ರಜ್ಞಾನ, ವಿಜ್ಞಾನದ ಸಾಧನಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದು, ಕಲೆಗಳ ಕೊರತೆಯಿಂದ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದಾನೆ ಎಂದು ಬ್ರಹ್ಮಕುಮಾರಿ ಸ್ವಾತಿ ಹೇಳಿದರು.

Vijaya Karnataka 25 Jun 2018, 5:00 am
ಶಿವಮೊಗ್ಗ : ಮಾನವ ತಂತ್ರಜ್ಞಾನ, ವಿಜ್ಞಾನದ ಸಾಧನಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದು, ಕಲೆಗಳ ಕೊರತೆಯಿಂದ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದಾನೆ ಎಂದು ಬ್ರಹ್ಮಕುಮಾರಿ ಸ್ವಾತಿ ಹೇಳಿದರು.
Vijaya Karnataka Web yoga inevitable for great think
‘ಶ್ರೇಷ್ಠ ಚಿಂತನೆಗೆ ಯೋಗ ವಿಶೇಷ ಅಸ್ತ್ರ’


ಕೇಂದ್ರಿಯ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆ ಅನುಸಂಧಾನ ಪರಿಷತ್‌ ಮತ್ತು ಬ್ರಹ್ಮಕುಮಾರೀಸ್‌ ರಾಜಯೋಗ ಎಜುಕೇಶನ್‌ ಅಂಡ್‌ ರಿಸರ್ಚ್‌ ಫೌಂಡೇಶನ್‌ಗಳ ಸಹಯೋಗದಲ್ಲಿ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಯೋಗ ಮತ್ತು ಯೋಗಾಸನ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಮಾನವನು ಹೆಚ್ಚಿನ ಸಮಯವನ್ನು ತಂತ್ರಜ್ಞಾನ, ವಿಜ್ಞಾನದ ಸಾಧನಗಳೊಂದಿಗೆ ಕಳೆಯುತ್ತಿದ್ದಾನೆ. ಇದರ ಪರಿಣಾಮ ಸಾಮರಸ್ಯದ ಬದುಕಿಗೆ ಬೇಕಾದ ಜೀವನ ನಡೆಸುವ ಕಲೆಗಳ ಕೊರತೆಯಿಂದ ಸಂಬಂಧಗಳನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾನೆ ಎಂದರು.

ಇದರಿಂದಾಗಿ ಸಮಾಜದಲ್ಲಿ ಸಂಬಂಧಗಳ ನಡುವಿನ ಬಿರುಕುಗಳು ದಿನೇ ದಿನೇ ಹೆಚ್ಚುತ್ತಿದ್ದು, ಸುಂದರ ಸಮಾಜದ ನಿರ್ಮಾಣದ ಕಾರ್ಯದಲ್ಲಿ ದೊಡ್ಡ ಕಂಟಕವಾಗುತ್ತಿದೆ. ಮನುಷ್ಯ ಮನುಷ್ಯನ ನಡುವಿನ ಘರ್ಷಣೆ ದೂರವಾಗಲು, ಸ್ನೇಹ, ಸೌಹಾರ್ದತೆ ಮೂಡಿಸಲು ಬೇಕಾದ ವಿಶಾಲ ಮನೋಭಾವ, ಶ್ರೇಷ್ಠ ಚಿಂತನೆಗಾಗಿ ಯೋಗವು ವಿಶೇಷ ಅಸ್ತ್ರವಾಗಿದೆ ಎಂದರು.

ಯೋಗದಿಂದ ಮಾನಸಿಕ, ಶಾರೀರಿಕ, ಸಾಮಾಜಿಕವಾಗಿ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗಾಸನದ ಜತೆಗೆ ಮಾನಸಿಕ ಆರೋಗ್ಯಕ್ಕಾಗಿ ಕಳೆದ ಒಂದು ತಿಂಗಳಿಂದ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ, ಬುಳ್ಳಾಪುರ, ಸೂಗೂರು ಗ್ರಾಮಗಳಲ್ಲಿ ಮತ್ತು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಉಚಿತ ಯೋಗಾಸನವನ್ನು ಅಂತಾರಾಷ್ಟ್ರೀಯ ಯೋಗದ ದಿನದ ಅಂಗವಾಗಿ ನುರಿತ ಯೋಗ ಶಿಕ್ಷ ಕರಿಂದ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಶಿಬಿರದಲ್ಲಿ ಭಾಗಿಯಾಗಿದ್ದ ಯೋಗ ಶಿಕ್ಷ ಕರಾದ ಯೋಗ ಶಿಕ್ಷ ಣ ಸಮಿತಿಯ ಶ್ರೀನಿವಾಸಮೂರ್ತಿ, ಶ್ರೀಮತಿ ಅರುಣ ಪ್ರಕಾಶ್‌, ಅಮೃತ ಯೋಗ ಕೇಂದ್ರದ ಮಂಜುನಾಥ, ಸುಧಾ, ಚನ್ನಬಸಪ್ಪ, ಅರುಣ್‌ರಾಜ್‌ ಶೆಟ್ಟಿ ಅವರಿಗೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಆಯುಷ್‌ ಅಧಿಕಾರಿ ಎನ್‌.ಹರ್ಷ ಪುತ್ರಾಯ್‌ ಅವರು ಸನ್ಮಾನಿಸಲಾಯಿತು.

ಶಿಬಿರದಲ್ಲಿ ಧ್ಯಾನ, ಯೋಗಾಸನ, ಪ್ರಾಣಾಯಾಮ, ಮುದ್ರಾಯೋಗದ ಲಾಭವನ್ನು ಶಿಬಿರಾರ್ಥಿಗಳು ಪಡೆದುಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ