ಆ್ಯಪ್ನಗರ

ಸರ್ವ ರೋಗಕ್ಕೂ ಯೋಗ ಮದ್ದು

ವೈದ್ಯಕೀಯ ಕ್ಷೇತ್ರಕ್ಕೂ ಸವಾಲಾಗಿರುವ ಅದೆಷ್ಟೋ ಕಾಯಿಲೆಗಳಿಗೆ ಯೋಗವೇ ಮದ್ದಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

Vijaya Karnataka 20 Jun 2018, 5:00 am
ಶಿವಮೊಗ್ಗ : ವೈದ್ಯಕೀಯ ಕ್ಷೇತ್ರಕ್ಕೂ ಸವಾಲಾಗಿರುವ ಅದೆಷ್ಟೋ ಕಾಯಿಲೆಗಳಿಗೆ ಯೋಗವೇ ಮದ್ದಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
Vijaya Karnataka Web yoga potion for all diseases
ಸರ್ವ ರೋಗಕ್ಕೂ ಯೋಗ ಮದ್ದು


ವಿನೋಬನಗರದ ಶಿವಗಂಗಾ ಕೇಂದ್ರದಲ್ಲಿ ಮಂಗಳವಾರ 5.6 ಅಡಿ ಎತ್ತರದ ಯೋಗ ಮಹರ್ಷಿ ಪತಂಜಲಿ ಮೂರ್ತಿ ಪ್ರತಿಷ್ಠಾಪಿಸಿ ಮಾತನಾಡಿದ ಅವರು, ಯೋಗದಿಂದ ಅದೆಷ್ಟೋ ವಾಸಿಯಾಗದ ಕಾಯಿಲೆಗಳಿಗೆ ಪರಿಹಾರ ಸಿಕ್ಕಿವೆ. ಹೀಗಾಗಿ ವಿಶ್ವವೇ ಯೋಗದತ್ತ ವಾಲಿದೆ ಎಂದರು.

ಯೋಗ ಕೇವಲ ಶರೀರಕ್ಕೆ ಮಾತ್ರವಲ್ಲದೇ ಮಾನಸಿಕ ಆರೋಗ್ಯಕ್ಕೂ ಸಹಕಾರಿ. ಯೋಗದಿಂದ ಮಾನಸಿಕ ಶುದ್ಧಿ, ಚಂಚಲತೆ ದೂರವಾಗುತ್ತದೆ. ಯೋಗ ಎಂದರೆ ಮೂಗು ಮುರಿಯುತ್ತಿದ್ದವರು ಇಂದು ಮೂಗು ಹಿಡಿದು ಯೋಗ ಮಾಡುತ್ತಿದ್ದಾರೆ ಎಂದರು.

ಯೋಗದಿಂದ ಶಾರೀರಿಕ ಆರೋಗ್ಯ ವೃದ್ಧಿಯಾಗುತ್ತದೆ. ಕೃತಕವಾಗಿ ನಾವು ಏನೇ ಸೌಂದರ್ಯವರ್ಧಕಗಳನ್ನು ಲೇಪಿಸಿಕೊಂಡರೂ ಸಹ ಮುಖದಲ್ಲಿ ಕಾಂತಿ, ತೇಜಸ್ಸು ಬರಲು ಸಾಧ್ಯವಿಲ್ಲ. ಆದರೆ, ಯೋಗ ಮಾಡುವವನ ಮುಖದಲ್ಲಿ ನೈಸರ್ಗಿಕವಾಗಿ ತೇಜಸ್ಸು, ಕ್ರಾಂತಿ ಹೊರಹೊಮ್ಮುತ್ತದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ಭಾರತ ಎಲ್ಲ ಆಚರಣೆಗಳಿಗೂ ಮೂಲ. ಅದೇ ರೀತಿ ಯೋಗಕ್ಕೂ ಸಹ ಭಾರತವೇ ಮೂಲ ಕೇಂದ್ರ. ಇಂದ್ರೀಯಗಳನ್ನು ನಿಗ್ರಹಿಸುವಂತಹ ಶಕ್ತಿ ಯೋಗಕ್ಕಿದೆ. ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ನೂತನ ಸದಸ್ಯರಾದ ಎಸ್‌.ರುದ್ರೇಗೌಡ ಹಾಗೂ ಆಯನೂರು ಮಂಜುನಾಥ್‌ ಅವರನ್ನು ಅಭಿನಂದಿಸಲಾಯಿತು.

ಬೆಕ್ಕಿನಕಲ್ಮಠದ ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷ ಹಾಗೂ ಯೋಗ ಗುರು ರುದ್ರಾರಾಧ್ಯ, ಕೈಗಾರಿಕೋದ್ಯಮಿ ನಂಜುಂಡಶೆಟ್ಟಿ, ಎಪಿಎಂಸಿ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ