ಆ್ಯಪ್ನಗರ

ಕೃಷಿಯಿಂದ ದೂರವಾಗುತ್ತಿರುವ ಯುವಕರು : ಆತಂಕ

ಕೃಷಿ ಇಂದು ಅತ್ಯಂತ ನಷ್ಟದ ಉದ್ಯೋಗವೆನಿಸಿದ್ದು , ಯುವಕರು ಕೃಷಿಯಿಂದ ವಿಮುಖವಾಗುತ್ತಿರುವುದು ದುರದೃಷ್ಟಕರ ಎಂದು ತುಮರಿ ಗ್ರಾ.ಪಂ. ಸದಸ್ಯ ಅನಿಲ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದರು.

Vijaya Karnataka 13 Jul 2019, 5:00 am
ತುಮರಿ : ಕೃಷಿ ಇಂದು ಅತ್ಯಂತ ನಷ್ಟದ ಉದ್ಯೋಗವೆನಿಸಿದ್ದು , ಯುವಕರು ಕೃಷಿಯಿಂದ ವಿಮುಖವಾಗುತ್ತಿರುವುದು ದುರದೃಷ್ಟಕರ ಎಂದು ತುಮರಿ ಗ್ರಾ.ಪಂ. ಸದಸ್ಯ ಅನಿಲ್‌ ಕುಮಾರ್‌ ಆತಂಕ ವ್ಯಕ್ತಪಡಿಸಿದರು.
Vijaya Karnataka Web SMR-12tmp


ಅವರು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಇಲಾಖೆ ಏರ್ಪಡಿಸಿದ್ದ ಕೃಷಿ ಅಭಿಯಾನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕೃಷಿಕರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಬೆಳೆ ಬೆಳೆಯುವುದಕ್ಕೂ ಕಾಡುಪ್ರಾಣಿಗಳ ಕಾಟ. ಮಂಗಗಳ ಹಾವಳಿ ಮಲೆನಾಡಿನಲ್ಲಿ ಮಿತಿ ಮೀರಿದ್ದು ಕೃಷಿಕರು ಕಂಗಾಲಾಗಿದ್ದಾರೆ. ರೋಗ, ಪ್ರಾಣಿಗಳ ಹಾವಳಿ, ಬೆಳೆದ ಬೆಲೆಗೂ ಸೂಕ್ತ ಬೆಲೆ ಇಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ರೈತರು ಸ್ಪರ್ಧಿಸಬೇಕಾಗಿದೆ. ಒಟ್ಟಾರೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಗಂಭೀರ ಪ್ರಯತ್ನ ನಡೆಯಬೇಕಾಗಿದೆ ಎಂದರು.

ಎಪಿಎಂಸಿ ಸದಸ್ಯ ಓಂಕಾರಜೈನ್‌ ಮಾತನಾಡಿ, ಸರಕಾರ ಎಷ್ಟೋ ಯೋಜನೆಗಳನ್ನು ಜಾರಿಗೆ ತಂದಿದ್ದರೂ ರೈತರನ್ನು ತಲುಪುತ್ತಿಲ್ಲ. ರೈತರ ಕೃಷಿ ಉತ್ಪನ್ನ ಗಳಿಗೆ ಬಡ್ಡಿ ರಹಿತ ಸಾಲ ನೀಡುವ ಸೌಲಭ್ಯಗಳು ಇಲ್ಲಿನ ಆಫ್ಸ್‌ ಕೋಸ್‌ ಸಂಸ್ಥೆಗಳಲ್ಲಿದ್ದರೂ ಈ ವರ್ಷ ಯಾವುದೇ ರೈತ ಇದರ ಪ್ರಯೋಜನ ಪಡೆದಿಲ್ಲ. ಬೆಳೆವಿಮೆ, ಫಸಲ್‌ ಬೀಮಾ ಮತ್ತಿತರ ಯೋಜನೆಗಳ ಬಗ್ಗೆ ಎಷ್ಟೋ ರೈತರಿಗೆ ತಿಳಿವಳಿಕೆ ಇಲ್ಲ. ಸರಕಾರದ ಯೋಜನೆಗಳ ಪ್ರಯೋಜನ ರೈತರಿಗೆ ತಲುಪುವಂತಾಗಬೇಕೆಂದರು.

ಪ್ರಗತಿಪರ ಕೃಷಿಕ ಮಂಜಯ್ಯಜೈನ್‌ ಮಾತನಾಡಿದರು. ಕೆಡಿಪಿ ಸದಸ್ಯ ಕೆ.ಸಿ.ರಾಮಚಂದ್ರ , ಪಿಡಿಒ ಇಮ್ತಿಯಾಜ್‌ ಬಾಷಾ, ಮೀನುಗಾರಿಕೆ ಇಲಾಖೆಯ ಸೌಮ್ಯ , ಕಂದಾಯ ಇಲಾಖೆಯ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ತೋಟಗಾರಿಕೆ ಅಧಿಕಾರಿ ಅರುಣಕುಮಾರ್‌ ಇಲಾಖೆ ಸೌಲಭ್ಯ ವಿವರಿಸಿ, ರೈತರೊಡನೆ ಸಂವಾದ ನಡೆಸಿದರು.

ತಾಲೂಕು ಮಟ್ಟದ ಯಾವ ಇಲಾಖೆ ಅಧಿಕಾರಿಯೂ ಹೋಬಳಿ ಮಟ್ಟದ ಕೃಷಿ ಅಭಿಯಾನದಲ್ಲಿ ಹಾಜರಿಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಯಿತು. ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕ ಅಧಿಕಾರಿ ಐ.ಡಿ.ಗಣಪತಿ ಸ್ವಾಗತಿಸಿ, ಕೃಷಿ ಅಧಿಕಾರಿ ಚಂದ್ರಪ್ಪ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ