ಆ್ಯಪ್ನಗರ

ಯುವಜನತೆಗೆ ಬೇಕು ಅಧ್ಯಯನದ ಬಲ

ಕಲಿಕೆ ಒತ್ತಡದಲ್ಲಿ ಸಿಲುಕಿದ ವಿದ್ಯಾರ್ಥಿಗಳು ತಮ್ಮ ಬಾಲ್ಯ, ಯೌವ್ವನ ಕಳೆದುಕೊಳ್ಳುತ್ತಿದ್ದು, ಇಂದಿನ ಶಿಕ್ಷ ಣ ಯಂತ್ರಮಾನವರನ್ನು ನಿರ್ಮಿಸುತ್ತಿರುವುದು ವಿಪರಾರ‍ಯಸ ಎಂದು ತಜ್ಞ ಆಯುರ್ವೇದ ವೈದ್ಯ ಡಾ. ಪತಂಜಲಿ ಹೇಳಿದರು.

Vijaya Karnataka 14 Jul 2019, 5:00 am
ಸಾಗರ : ಕಲಿಕೆ ಒತ್ತಡದಲ್ಲಿ ಸಿಲುಕಿದ ವಿದ್ಯಾರ್ಥಿಗಳು ತಮ್ಮ ಬಾಲ್ಯ, ಯೌವ್ವನ ಕಳೆದುಕೊಳ್ಳುತ್ತಿದ್ದು, ಇಂದಿನ ಶಿಕ್ಷ ಣ ಯಂತ್ರಮಾನವರನ್ನು ನಿರ್ಮಿಸುತ್ತಿರುವುದು ವಿಪರಾರ‍ಯಸ ಎಂದು ತಜ್ಞ ಆಯುರ್ವೇದ ವೈದ್ಯ ಡಾ. ಪತಂಜಲಿ ಹೇಳಿದರು.
Vijaya Karnataka Web SMR-13SGR2


ಇಲ್ಲಿನ ಎಲ್‌.ಬಿ.ಕಾಲೇಜಿನ ತಾರಾಪುರ ಆವರಣದ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಶನಿವಾರ ಎಂಡಿಎಫ್‌ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಆನ್‌ಲೈನ್‌, ಮೊಬೈಲ್‌ ಸುಳಿಯಲ್ಲಿ ಹೊಸ ಯುವ ಸಮೂಹ ಮಾನವೀಯ ಸಂಬಂಧಗಳನ್ನು ಕಳೆದುಕೊಳ್ಳುತ್ತಲಿದೆ. ಶಾಲೆ, ಕಾಲೇಜುಗಳಲ್ಲಿ ಪಠ್ಯ ಪುಸ್ತಕ, ಸಾಮಾನ್ಯಜ್ಞಾನದ ಪುಸ್ತಕ, ಸಾಹಿತ್ಯ ಕೃತಿ ಓದುವ ಹವ್ಯಾಸ ಬೆಳೆಸಬೇಕು. ಅಂಕಗಳಿಕೆ ಹಿಂದೆ ಬಿದ್ದು ಅಧ್ಯಯನಶೀಲತೆ ಕಳೆದುಕೊಂಡಿದ್ದೇವೆ. ಗೂಗಲ್‌ ಜ್ಞಾನವೇ ಜ್ಞಾನವಲ್ಲ ಎಂಬ ಎಚ್ಚರ ಯುವಸಮೂಹಕ್ಕೆ ಅಗತ್ಯ ಎಂದರು. ಅಧ್ಯಕ್ಷ ತೆ ವಹಿಸಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಸಿ.ಎಸ್‌.ಲಿಂಗರಾಜ್‌ ಮಾತನಾಡಿದರು.

ಎಂಡಿಎಫ್‌ ನಿರ್ದೇಶಕ ಈಳಿ ಶ್ರೀಧರ್‌, ಎಸ್‌.ಜಿ.ಶ್ಯಾನಭಾಗ್‌ ಪೋಷಕರಾದ ಎಂ.ಎಸ್‌.ಉಡುಪ, ತಾರಕೇಶ್ವರ, ವಿದ್ಯಾರ್ಥಿ ಕೆ.ಆರ್‌.ಸಂತೋಷ್‌ ಮಾತನಾಡಿದರು. 2018-19ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ 13 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಕಾಲೇಜಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎ.ಜಿ.ಚಂದನಾ ಅವರಿಗೆ ಆಡಳಿತಮಂಡಳಿಯ ಜಗದೀಶ ಒಡೆಯರ್‌ ನೀಡಿದ ಶಬ್ದಕೋಶ ವಿತರಿಸಲಾಯಿತು. ರಿಯಾ ಆಯಿಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಜಿ.ಪಿ.ಶ್ರೀಪಾದ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕೆ.ಬಿ.ವೈಶಾಲಿ ಪುರಸ್ಕೃತರ ಪಟ್ಟಿ ವಾಚಿಸಿದರು. ಡಾ. ಜಫ್ರುಲ್ಲಾ ಖಾನ್‌ ವಂದಿಸಿ, ಬಿ.ಜಿ.ಮಂಜಪ್ಪ ನಿರೂಪಿಸಿದರು.

----------
ಕಲಿಕೆ ಜತೆಗೆ ವೈಯಕ್ತಿಕ ಕೆಲಸ, ಮನೆ ಕೆಲಸ ಮಾಡುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಉತ್ತಮ ಅಂಕಗಳಿಸುವ ಜತೆಗೆ ಬದುಕನ್ನು ಉತ್ತಮವಾಗಿ ನಿರ್ವಹಿಸಲು ಅಗತ್ಯ ಮೌಲ್ಯ ಬೆಳೆಸಿಕೊಳ್ಳಬೇಕು.
- ಸಿ.ಎಸ್‌.ಲಿಂಗರಾಜ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ