ಆ್ಯಪ್ನಗರ

ಮದುವೆ ಬಳಿಕ ಠಾಣೆಗೆ ಬಂದ ನಾಪತ್ತೆಯಾಗಿದ್ದ ಯುವತಿ

ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ಯುವತಿ ಬಿ.ಎಚ್‌.ತುಳಸಿ(19) ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಅದೇ ಗ್ರಾಮದ ಯುವಕ ನಾಗರಾಜ(22) ನೊಂದಿಗೆ ವಿವಾಹವಾಗಿದ್ದು, ರಕ್ಷ ಣೆ ಕೋರಿ ಹೊಳೆಹೊನ್ನೂರು ಠಾಣೆಗೆ ಹಾಜರಾಗಿದ್ದಾರೆ.

Vijaya Karnataka 31 Jan 2019, 5:00 am
ಶಿವಮೊಗ್ಗ : ಭದ್ರಾವತಿ ತಾಲೂಕು ಮೈದೊಳಲು ಗ್ರಾಮದ ಯುವತಿ ಬಿ.ಎಚ್‌.ತುಳಸಿ(19) ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಅದೇ ಗ್ರಾಮದ ಯುವಕ ನಾಗರಾಜ(22) ನೊಂದಿಗೆ ವಿವಾಹವಾಗಿದ್ದು, ರಕ್ಷ ಣೆ ಕೋರಿ ಹೊಳೆಹೊನ್ನೂರು ಠಾಣೆಗೆ ಹಾಜರಾಗಿದ್ದಾರೆ.
Vijaya Karnataka Web young woman who came to the station
ಮದುವೆ ಬಳಿಕ ಠಾಣೆಗೆ ಬಂದ ನಾಪತ್ತೆಯಾಗಿದ್ದ ಯುವತಿ


ತುಳಸಿಗೆ ಭದ್ರಾವತಿ ಸಮೀಪದ ಗ್ರಾಮವೊಂದರ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಬಳಿಕ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಕಳೆದ ವಾರ ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು. ಆಕೆ ಅದೇ ಗ್ರಾಮದ ಅನ್ಯ ಜಾತಿಯ ಯುವಕ ನಾಗರಾಜನೊಂದಿಗೆ ಹೋಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ವಾರದ ಹಿಂದೆ ನಾಪತ್ತೆಯಾಗಿದ್ದ ಈ ಜೋಡಿ ದೇವಸ್ಥಾನವೊಂದರಲ್ಲಿ ವಿವಾಹವಾಗಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ. ತುಳಸಿ ಮತ್ತು ನಾಗರಾಜ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ