ಆ್ಯಪ್ನಗರ

ಯುವಕ ಭದ್ರಾ ಪಾಲು

ಭದ್ರಾ ಜಲಾಶಯ ಬಳಿಯ ಹೊಳೆಗೆ ಆಕಸ್ಮಿಕ ಬಿದ್ದ ಯುವಕ ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.

Vijaya Karnataka Web 18 Aug 2018, 5:00 am
ಶಿವಮೊಗ್ಗ: ಭದ್ರಾ ಜಲಾಶಯ ಬಳಿಯ ಹೊಳೆಗೆ ಆಕಸ್ಮಿಕ ಬಿದ್ದ ಯುವಕ ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.
Vijaya Karnataka Web younger death in bhadra
ಯುವಕ ಭದ್ರಾ ಪಾಲು


ಕಡೂರು ಮೂಲದ ಹರ್ಷ(32) ಹೊಳೆಗೆ ಬಿದ್ದವರು. ಭದ್ರಾವತಿಯಲ್ಲಿ ವಾಸವಾಗಿರುವ ಈತ ಶಿವಮೊಗ್ಗದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದ. ಕಡೂರಿನಿಂದ ಈತನ ಸ್ನೇಹಿತರು ಭದ್ರಾ ಜಲಾಶಯ ವೀಕ್ಷಿಸಲು ಬಂದಿದ್ದು, ಅವರೊಂದಿಗೆ ಬಂದ ಹರ್ಷ ಜಲಾಶಯ ವೀಕ್ಷಿಸಿದ್ದಾನೆ.
ಬಳಿಕ ಹೊಳೆಯ ಮಾರ್ಗದಲ್ಲೇ ಸ್ನೇಹಿತರೊಂದಿಗೆ ಊಟ ಮಾಡಿ ಕೈತೊಳೆಯಲು ಹೋದಾಗ ಘಟನೆ ನಡೆದಿದೆ. ನೀರು ಪಾಲಾಗಿರುವ ಯುವಕನ ಶೋಧ ಕಾರ್ಯ ನಡೆದಿದ್ದು, ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ