ಆ್ಯಪ್ನಗರ

ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ರಕ್ಷಿಸಿದ ಯುವಕರು

ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಗ್ರಾಮದ ಯುವಕರು ರಕ್ಷ ಣೆ ಮಾಡಿದ ಘಟನೆ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತದ ಬಳಿ ಶನಿವಾರ ನಡೆದಿದೆ.

Vijaya Karnataka 25 Aug 2019, 5:00 am
ಹೊಸನಗರ: ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಗ್ರಾಮದ ಯುವಕರು ರಕ್ಷ ಣೆ ಮಾಡಿದ ಘಟನೆ ತಾಲೂಕಿನ ಯಡೂರು ಸಮೀಪದ ಅಬ್ಬಿ ಜಲಪಾತದ ಬಳಿ ಶನಿವಾರ ನಡೆದಿದೆ.
Vijaya Karnataka Web SMR-24HOSP3


ಬೆಂಗಳೂರಿನಿಂದ ಬಂದಿದ್ದ 12 ಜನರ ಪ್ರವಾಸಿಗರ ತಂಡ ವರಾಹಿ ಹಿನ್ನೀರು ಸಮೀಪದ ಅಬ್ಬಿ ಜಲಪಾತ ವೀಕ್ಷ ಣೆಗೆ ತೆರಳಿದ್ದರು. ಪಾಚಿಗಟ್ಟಿದ್ದ ಕಲ್ಲು ಬಂಡೆಗಳ ನಡುವೆ ತೆರಳುತ್ತಿದ್ದ ವೇಳೆ ಪ್ರವಾಸಿಗರು ಕಾಲು ಜಾರಿ ಜಲಪಾತದ ಸೆಳೆತಕ್ಕೆ ಸಿಲುಕಿದ್ದರು. ಓರ್ವ ಸುಮಾರು 20 ಅಡಿ ಆಳಕ್ಕೆ ಜಾರಿ, ಬಂಡೆಯೊಂದನ್ನು ಹಿಡಿದುಕೊಂಡು ನಿಂತಿದ್ದ. ಅವರ ಜತೆಯಲ್ಲಿ ಇದ್ದವರು ಕೂಗಿಕೊಂಡಿದ್ದರಿಂದ ಸಮೀಪದ ಗ್ರಾಮಸ್ಥರಿಗೆ ವಿಷಯ ತಿಳಿಯಿತು. ಪ್ರವಾಸಿಗರ ರಕ್ಷ ಣೆಗೆ ಕೂಡಲೇ ಧಾವಿಸಿ ಬಂದ ಯುವಕರು ಹಗ್ಗವನ್ನು ಬಳಸಿ ಪ್ರವಾಸಿಗರನ್ನು ಸುರಕ್ಷಿತವಾಗಿ ಪಾರು ಮಾಡುವಲ್ಲಿ ಯಶಸ್ವಿಯಾದರು. ಯುವಕರ ಕಾರಾರ‍ಯಚರಣೆಯಿಂದಾಗಿ ನೀರಿನ ಸೆಳವಿನ ನಡುವೆ ಸಿಲುಕಿದ್ದ ಪ್ರವಾಸಿಗರು ಸುರಕ್ಷಿತ ಜಾಗ ತಲುಪುವಂತಾಯಿತು. ಓರ್ವ ಪ್ರವಾಸಿಗನಿಗೆ ತರಚಿದ ಗಾಯವಾಗಿದ್ದು, ದೊಡ್ಡ ಅಪಾಯ ಸ್ವಲ್ಪದರಲ್ಲಿಯೇ ತಪ್ಪಿದೆ.

ಯಡೂರು ಸಮೀಪದ ಅಬ್ಬಿ ಫಾಲ್ಸ್‌ ಬಂಡೆಗಲ್ಲುಗಳ ನಡುವೆ ಹಂತ ಹಂತವಾಗಿ ಧುಮ್ಮಿಕ್ಕುವ ಮನಮೋಹಕ ಜಲಪಾತವಾಗಿದೆ. ಮಳೆಗಾಲದಲ್ಲಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿದ್ದು, ಪ್ರವಾಸಿಗರು ಬರುವುದು ಸಾಮಾನ್ಯ. ಜಲಪಾತ ಸುಂದರವಾಗಿದ್ದರೂ, ಹಂತ ಹಂತವಾಗಿ ಧುಮುಕುವ ಕಾರಣಕ್ಕೆ ಅಕ್ಕಪಕ್ಕದ ಬಂಡೆಗಳು ಪಾಚಿಗಟ್ಟಿ ಅಪಾಯವನ್ನು ಆಹ್ವಾನಿಸುತ್ತವೆ. ಇಲ್ಲಿ ಸ್ವಲ್ಪ ಆಯತಪ್ಪಿದರೂ, ಅಪಾಯ ಕಟ್ಟಿಟ್ಟ ಬುಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ