ಆ್ಯಪ್ನಗರ

Shivamogga SP: ಸಾಹೇಬ್ರೆ.. ನಂಗೊಂದು ಹೆಣ್ಣು ಹುಡುಕಿ ಕೊಡಿ! ಶಿವಮೊಗ್ಗ ಎಸ್‌ಪಿಗೆ ಯುವಕನ ಪತ್ರ

ಬೇರೆಯವರ ಮಾತು ಆಮೇಲೆ ಈಗೀಗ ಡಾಕ್ಟರ್‌ ಮತ್ತು ಇಂಜಿನಿಯರ್‌ಗಳಿಗೂ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಈ ಹಿನ್ನೆಲೆ ಭದ್ರಾವತಿಯ ಯುವಕನೊಬ್ಬ ವಧು ಹುಡುಕಿಕೊಡುವಂತೆ ಶಿವಮೊಗ್ಗ ಎಸ್‌ಪಿಗೆ ಪತ್ರ ಬರೆದಿದ್ದಾನೆ. ಈಗ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

Edited byಅವಿನಾಶ ವಗರನಾಳ | Vijaya Karnataka Web 26 Nov 2022, 11:03 am

ಹೈಲೈಟ್ಸ್‌:


  • ಮದುವೆಗೆ ಹುಡುಗಿ ಸಿಕ್ಕಿಲ್ಲ, ಹೆಣ್ಣು ಹುಡುಕಿಕೊಡಿ ಎಂದು ಯುವಕನ ಪತ್ರ
  • ವಧು ಹುಡುಕಿಕೊಡಿ ಎಂದು ಶಿವಮೊಗ್ಗ ಎಸ್‌ಪಿಗೆ ಭದ್ರಾವತಿ ಯುವಕನ ಮನವಿ
  • ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆದ ಯುವಕನ ಪತ್ರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web letter to shivamogga sp
Body ಶಿವಮೊಗ್ಗ: ವಧು ಹುಡುಕಿಕೊಡುವಂತೆ ಮ್ಯಾಟ್ರಿಮೋನಿಯಲ್‌ಗೆ ಬಯೋಡೆಟಾ ನೀಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ ವಧು ಇದ್ದಲ್ಲಿ ತಿಳಿಸುವಂತೆ ಕೋರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾನೆ. ಭದ್ರಾವತಿಯ ಒಎಸ್‌ ಪ್ರವೀಣ್‌ ಎಂಬುವವರೇ ನಂಗೊಂದು ಹೆಣ್ಣು ಹುಡುಕಿ ಕೊಡಿ ಸಾಹೇಬ್ರೇ ಎಂದು ಶಿವಮೊಗ್ಗ ಎಸ್‌ಪಿಗೆ ಮನವಿ ಸಲ್ಲಿಸಿದ ವ್ಯಕ್ತಿ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಟಪಾಲು ವಿಭಾಗದಲ್ಲಿ ಮನವಿ ಪತ್ರವನ್ನು ಸಲ್ಲಿಸಿದ್ದು, ಅದರಲ್ಲಿ ವಧುವಿದ್ದರೆ ಭದ್ರಾವತಿ ಪುರಸಭೆಯ ಕೆಲವು ಸದಸ್ಯರನ್ನು ಸಂಪರ್ಕಿಸಬೇಕು ಎಂದು ಅವರು ಹೆಸರುಗಳನ್ನು ಸಹ ನಮೂದಿಸಿದ್ದಾನೆ. ಈ ಪತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಎಸ್‌ಪಿಗೆ ಬಂದ ಪತ್ರದಲ್ಲಿ ಏನಿದೆ?
ನಾನು ಭದ್ರಾವತಿ ನಗರದಲ್ಲಿ ಜನಿಸಿರುತ್ತೇನೆ. ನಾನು ಯಾದವ ಗೊಲ್ಲ ಜಾತಿಗೆ ಸೇರಿದವನಾಗಿರುತ್ತೇನೆ. ನನ್ನ ಕಡೆಯವರು ಆಂಧ್ರ ಪ್ರದೇಶದ ಮಡಕಶಿರ ಟೌನ್ ಶ್ರೀ ಸತ್ಯ ಸಾಯಿ ಜಿಲ್ಲೆಯವರಾಗಿರುತ್ತಾರೆ. ನಮ್ಮ ತಂದೆಯವರು ತೋಟಗಾರಿಕಾ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದು, ನಿವೃತ್ತರಾಗಿರುತ್ತಾರೆ. ನನ್ನ ಅಣ್ಣ ಈಗಾಗಲೇ ಮದುವೆಯಾಗಿದ್ದಾನೆ. ನಾನು ಹಿಂದೆ ಸಾಫ್ಟ್‌ವೇರ್‌ ಕಂಪನಿಯಲ್ಲಿ ಅಧ್ಯಾಪಕನಾಗಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿರುತ್ತೇನೆ ಎಂದು ಪ್ರವೀಣ್‌ ತಿಳಿಸಿದ್ದಾನೆ.

ಸದ್ಯ ಭದ್ರಾವತಿಯಲ್ಲಿರುವ ನಮ್ಮ ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದೇನೆ. ವಧು ಅನ್ವೇಷಣೆಯಲ್ಲಿ ಯಾವುದು ಸರಿ ಹೋಗದ ಕಾರಣ, ನಮ್ಮ ಯಾದವ ಗೊಲ್ಲ ಜಾತಿಯ ಯಾರಾದರೂ ವಧು ತಮ್ಮ ಅಧೀನದಲ್ಲಿ ಕಂಡು ಬಂದರೆ ನನಗೆ ತಿಳಿಸುವುದರ ಮೂಲಕ ನಾನು ವಿವಾಹ ಮಾಡಿಕೊಳ್ಳಲು ಸಹಾಯ ಮಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನನಗೆ ಪರಿಚಯ ಇರುವ ವ್ಯಕ್ತಿಗಳಾದ ಭದ್ರಾವತಿ ಪುರಸಭೆಯ ಸದಸ್ಯ ವಿ ಕದರೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ನಾಯಕ್ ಅವರಲ್ಲಿ ಕೇಳಬಹುದು. ಈ ಅರ್ಜಿಯನ್ನ ಪೊಲೀಸರಿಂದ ಪರಿಶೀಲಿಸಿ ಹಾಗೂ ನನ್ನ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿರುತ್ತೇನೆ ಎಂದು ಪ್ರವೀಣ್‌ ಪತ್ರ ಬರೆದಿದ್ದಾನೆ.

ಒಕ್ಕಲಿಗ ಸಮುದಾಯದ ಯುವಕರ ಮದುವೆಗೆ ಯುವತಿಯರೇ ಸಿಗುತ್ತಿಲ್ಲ! ರೈತರಿಗೆ ಹೆಣ್ಣು ಕೊಡ್ತಿಲ್ಲ!
ಹೀಗೆ ಪತ್ರ ಬರೆದಿರುವ ಪ್ರವೀಣ್, ತಮಾಷೆಗಾಗಿ ಬರೆದಿದ್ದಾನೋ ಅಥವಾ ಮಾನಸಿಕ ಅಸ್ವಸ್ಥನೋ ಎಂಬುದು ಪೊಲೀಸರಿಗೆ ತಲೆ ನೋವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಜಿಕೆ, ಭದ್ರಾವತಿ ಪೊಲೀಸರು ಈ ಅರ್ಜಿಯನ್ನು ಅರ್ಜಿ ಬರೆದಾತವನ್ನು ಹುಡುಕುತ್ತಿದ್ದಾರೆ. ಆತ ಯಾವ ಕಾರಣಕ್ಕೆ ಪತ್ರ ಬರೆದಿದ್ದಾನೆ ಎಂಬುದು ಗೊತ್ತಿಲ್ಲ. ಆದರೆ, ಪೊಲೀಸ್ ಇಲಾಖೆಗೆ ಈ ತರಹದ ಪತ್ರ ಬರೆಯುವುದು ಸಮಂಜಸವಲ್ಲ. ಅವನನ್ನು ಕರೆದು ವಿಚಾರಿಸಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

'ಹುಡುಗನ ಕಡೆಯವರು ಮನೆಗೆ ಬಂದಿದ್ದು ಸತ್ಯ, ನಾನಿನ್ನೂ ಮದುವೆಗೆ ಓಕೆ ಹೇಳಿಲ್ಲ': ವೈಷ್ಣವಿ ಗೌಡ
ಯಾದವ ಗೊಲ್ಲ ಸಮುದಾಯದಲ್ಲಿ ಹೆಣ್ಣುಗಳ ಕೊರತೆ ಇರುವುದು ನಿಜ. ಅದರಲ್ಲೂ ಚಿತ್ರದುರ್ಗ ಸ್ವಲ್ಪ ಮಟ್ಟಿಗೆ ಕಾಣಿಸುವ ಸಮುದಾಯ ಈ ತರಹದ ಒಂದು ಸಾಮಾಜಿಕ ಸಮಸ್ಯೆ ಎದುರಿಸುತ್ತಾ ಬಂದಿದೆ. ಪತ್ರ ಬರೆದಾತ ನಿಜವಾಗಿಯೂ ತನ್ನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾನೆಯೇ ಅಥವಾ ಯಾರಾದರೂ ತಮಾಷೆಗೆ ಬರೆದರೇ? ಈ ಪತ್ರ ಹೇಗೆ ಹೊರಬಂತು? ಎಂಬುದು ಕುತೂಹಲ ಮೂಡಿಸಿದ್ದು, ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ