ಆ್ಯಪ್ನಗರ

ದರ ಏರಿಕೆ: ನಿಮ್ಮ ಹೋಂ ಮಿನಿಸ್ಟರ್‌ಗೆ ಕೇಳಿ ಗೊತ್ತಾಗುತ್ತೆ, ಹೋಮ್‌ ಮಿನಿಸ್ಟರ್‌ಗೆ ಕಿಚಾಯಿಸಿದ ಸಿದ್ದರಾಮಯ್ಯ

ಹಾಗಾದರೆ ದರ ಡಬಲ್ ಆಗಿರುವುದು ಸುಳ್ಳಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಗೆ ಕೇಳಿ ನೋಡಿ ಗೊತ್ತಾಗುತ್ತದೆ ಎಂದು ಆರಗ ಜ್ಞಾನೇಂದ್ರ ಅವರನ್ನು ಸಿದ್ದರಾಮಯ್ಯ ಕಿಚಾಯಿಸಿದ‌ರು.

Vijaya Karnataka Web 15 Sep 2021, 5:03 pm
ಬೆಂಗಳೂರು: ದರ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಗೆ ಕೇಳಿ ಗೊತ್ತಾಗುತ್ತೆ! ಎಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಸಿದ್ದರಾಮಯ್ಯ ಕಿಚಾಯಿಸಿದರು.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜನವರಿಯಲ್ಲಿ ಕಾಫಿ ಬೆಲೆ 15 ಇತ್ತು ಈಗ 30 ಆಗಿದೆ. ದೋಸೆ 25 ಇದ್ದರೆ ಇವಾಗ 50 ಆಗಿದೆ ಎಂದರು.

ಈ ವೇಳೆ, ಎಲ್ಲದಕ್ಕೂ ಡೀಸೆಲ್ ಪೆಟ್ರೋಲ್ ಕಾರಣವಾ? ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.‌

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಹೌದು ಡೀಸೆಲ್ ದರ ಏರಿಕೆ ಕಾರಣ. ಡೀಸೆಲ್ ದರ ಹೆಚ್ಚಾದರೆ ಸಾಗಣಿಕೆ ದರ ಹೆಚ್ಚಾಗುತ್ತೆ, ಗ್ಯಾಸ್ ದರ ಹೆಚ್ಚಳ ಆದರೆ ಅಡುಗೆ ಬೆಲೆ ಹೆಚ್ಚಳ ಆಗುತ್ತೆ ಎಂದು ವಿವರಿಸಿದರು.

ಹಾಗಾದರೆ ದರ ಡಬಲ್ ಆಗಿರುವುದು ಸುಳ್ಳಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ ಗೆ ಕೇಳಿ ನೋಡಿ ಗೊತ್ತಾಗುತ್ತದೆ ಎಂದು ಆರಗ ಜ್ಞಾನೇಂದ್ರ ಅವರನ್ನು ಸಿದ್ದರಾಮಯ್ಯ ಕಿಚಾಯಿಸಿದ‌ರು.

ನೀವು ಮನೆಗೆ ಒಂದಿಷ್ಟು ದುಡ್ಡು ಕೊಡ್ತೀರಾ ಅನಿಸುತ್ತೆ. ಮಹಿಳೆಯರ ಕಷ್ಟ ಅರ್ಥವಾಗಲ್ಲ ನಿಮಗೆ, ಒಂದು ಬಾರಿ ನಿಮ್ಮ ಮನೆಯ ಹತ್ರ ಕೇಳಿ, ಬೆಲೆ ಏರಿಕೆ ಹೇಗೆ ಹೆಚ್ಚಾಗಿದೆ ಅಂತ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಯಿತು. ಬೆಲೆ ಏರಿಕೆ ಕುರಿತಾಗಿ ಕಾಂಗ್ರೆಸ್ ಆರೋಪಕ್ಕೆ ಸಿಎಂ‌ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಅದಾನಿ ಅಂಬಾನಿ ಹಿಂದೆ ಯಾರು ಯಾರು ಇದ್ದರು? ಲೈಸೆನ್ಸ್ ಪಾಲಿಸಿ ಹೇಗೆ ಬದಲಾವಣೆ ಆಯಿತು? ಎಂಬ ಬಗ್ಗೆ ವರದಿ ಮಾಧ್ಯಮಗಳಲ್ಲಿ ಬಂದಿದೆ. ಲೈಸೆನ್ಸ್ ರಾಜ್ ಮೂಲಕ ಇವರನ್ನೆಲ್ಲಾ ಹುಟ್ಟು ಹಾಕಿದ್ದು ನೀವೇ. ಯಾರು ಯಾರಿಗೆ ಹತ್ತಿರ ಇದ್ದಾರೆ ಎಂಬುವುದು ಗೊತ್ತಿದೆ. ಅದಾನಿ ಅಂಬಾನಿಯನ್ನು ಶ್ರೀಮಂತರಾಗಿ ಮಾಡಿದ್ದು ನೀವು. ನಾವು ಯಾವುದನ್ನು ಮಾರಾಟ ಮಾಡಿಲ್ಲ. ಬ್ಯಾಂಕ್ ಖಾಸಗೀಕರಣ ಮಾಡಿದ್ದು ಯಾರು? ಎಂದು ಪ್ರತಿಪಕ್ಷ ನಾಯಕರಿಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ