ಆ್ಯಪ್ನಗರ

ರಾಷ್ಟ್ರೀಯ ಭಾಷೆ ಹೆಗ್ಗಳಿಕೆಗೆ ಪಾತ್ರವಾದ ಹಿಂದಿ

ಭಾರತಾದ್ಯಂತ ಬಹುತೇಕ ರಾಜ್ಯಗಳಲ್ಲಿ ಹಿಂದಿ ಪ್ರಧಾನ ಸಂವಹನ ಭಾಷೆಯಾಗಿ ರಾಷ್ಟ್ರೀಯ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಹಿಂದಿ ಭಾಷಾ ಶಿಕ್ಷ ಕರ ಸಂಘದ ಕಾರ್ಯದರ್ಶಿ ಲೋಕೇಶ್‌ ಹೇಳಿದರು.

ವಿಕ ಸುದ್ದಿಲೋಕ 19 Jun 2016, 3:56 pm

ತುರುವೇಕೆರೆ: ಭಾರತಾದ್ಯಂತ ಬಹುತೇಕ ರಾಜ್ಯಗಳಲ್ಲಿ ಹಿಂದಿ ಪ್ರಧಾನ ಸಂವಹನ ಭಾಷೆಯಾಗಿ ರಾಷ್ಟ್ರೀಯ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಹಿಂದಿ ಭಾಷಾ ಶಿಕ್ಷ ಕರ ಸಂಘದ ಕಾರ್ಯದರ್ಶಿ ಲೋಕೇಶ್‌ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಮುಚ್ಚಯದಲ್ಲಿ ತಾಲೂಕು ಹಿಂದಿ ಭಾಷಾ ಶಿಕ್ಷ ಕರ ಸಂಘ ಮತ್ತು ಕ್ಷೇತ್ರ ಶಿಕ್ಷ ಣ ಇಖೆಯ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಹಿಂದಿ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷ ಕರುಗಳಿಗೆ ಸನ್ಮಾನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿ ಭಾಷೆಯನ್ನು ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸಿದರೆ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗ ಬಲ್ಲದು. ಕನ್ನಡ, ಇಂಗ್ಲೀಷ್‌, ಹಿಂದಿ ಭಾಷಾ ಜ್ಞಾನ ಇರುವವರು ಈ ದೇಶದ ಯಾವುದೇ ಮೂಲೆಯಲ್ಲಿ ಉದ್ಯೋಗ ನಿರತರಾಗಿ ಬದುಕು ಕಟ್ಟಿಕೊಳ್ಳುವ ಉತ್ತಮ ಅವಕಾಶಗಳಿವೆ. ಈ ದಿಸೆಯಲ್ಲಿ ಶಿಕ್ಷ ಣದ hಜತೆ-ಜತೆಗೆ ಎಲ್ಲಾ ಭಾಷೆಗಳ ಅರಿವು ಅತ್ಯಗತ್ಯ. ಅದರಲ್ಲೂ ರಾಷ್ಟ್ರೀಯ ಭಾಷೆ ಎನಿಸಿರುವ ಹಿಂದಿ ಈ ದೇಶದ ಎಲ್ಲೆಡೆ ಮಾನ್ಯ. ಶಿಕ್ಷ ಕರು ಭಾಷಾ ಸಂಘಗಳನ್ನು ಶಕ್ತಿಯುವಾಗಿ ಸಂಘಟಿಸಿ ಕೊಳ್ಳುವುದರಿಂದ ತಮ್ಮ ಬೇಕು ಬೇಡಗಳನ್ನು ಪೂರೈಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲ್‌ ಪ್ರಕಾಶ್‌ ಮಾತನಾಡಿ, ಶಿಕ್ಷ ಕರು ಮತ್ತು ವೈದ್ಯರು ಸಮಾಜ ತಿದ್ದುವ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಬಹ ಮುಖ್ಯ ಪಾತ್ರ ವಹಿಸಿರುತ್ತಾರೆ. ಶಿಕ್ಷ ಕರು ಪ್ರತಿಯೊಂದು ವಿಷಯದಲ್ಲೂ ಕ್ರಿಯಾಶೀಲತೆಯಿಂದ ಕೆಲಸ ಮಾಡಿದ್ದೇ ಆದಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನೂರಕ್ಕೆ ನೂರರಷ್ಟು ಫಲಿತಾಂಷ ತರಲು ಶ್ರಮಿಸಿದ ಶಿಕ್ಷ ಕರು ಮತ್ತು ನಿವೃತ್ತ ಶಿಕ್ಷ ಕರನ್ನು ಸನ್ಮಾಸಲಾಯಿತು.

ಸರಳ ಸಮಾರಂಭದಲ್ಲಿ ಇಸಿಒ ನರಸಿಂಹಮೂರ್ತಿ, ತಾಲೂಕು ಸಹಶಿಕ್ಷ ಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಉಮೇಶ್‌, ಖಜಾಂಚಿ ಶಾಂತರಾಜು, ಪದಾಧಿಕಾರಿಗಳಾದ ಲಕ್ಷ್ಮೇ ಪ್ರಸಾದ್‌, ಕುಬೇರಪ್ಪ, ಆರ್‌.ಪಿ.ಗೋವಿಂದರಾಜುಲು ಶೆಟ್ಟಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ