ಆ್ಯಪ್ನಗರ

ಸಚಿವ ವೆಂಕಟರವಣಪ್ಪಗೆ ಪತ್ನಿ ವಿಯೋಗ

ತಾಲೂಕಿನ ಶಾಸಕರು ಹಾಗೂ ರಾಜ್ಯ ಕಾರ್ಮಿಕ ಸಚಿವರಾಗಿರುವ ವೆಂಕಟರಮಣಪ್ಪ ಅವರ ಪತ್ನಿ ಶಾರದಮ್ಮ (72) ಬುಧವಾರ ವಿಧಿವಶರಾದರು.

Vijaya Karnataka 15 Nov 2018, 5:09 pm
ಪಾವಗಡ:
Vijaya Karnataka Web
ಸಚಿವ ವೆಂಕಟರವಣಪ್ಪಗೆ ಪತ್ನಿ ವಿಯೋಗ

ತಾಲೂಕಿನ ಶಾಸಕರು ಹಾಗೂ ರಾಜ್ಯ ಕಾರ್ಮಿಕ ಸಚಿವರಾಗಿರುವ ವೆಂಕಟರಮಣಪ್ಪ ಅವರ ಪತ್ನಿ ಶಾರದಮ್ಮ (72) ಬುಧವಾರ ವಿಧಿವಶರಾದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ಅನೇಕ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅಪರಾಹ್ನ ನಿಧನರಾದರು.

ಮೃತರು ಪತಿ ವೆಂಕಟರಮಣಪ್ಪ ಹಾಗೂ ಪುತ್ರರಾದ ಜಿಪಂ ಸದಸ್ಯ ಎಚ್‌.ವಿ. ವೆಂಕಟೇಶ್‌, ಎಚ್‌.ವಿ. ಕುಮಾರಸ್ವಾಮಿ ಹಾಗೂ ಪುತ್ರಿ ಪದ್ಮಾವತಿ ಅವರನ್ನು ಅಗಲಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದುಕೊಂಡರು.

ಗುರುವಾರ ಅಪರಾಹ್ನ ಹನುಮಂತನಹಳ್ಳಿ ತೋಟದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ, ಸೋಮ್ಲಾನಾಯ್ಕ, ಎಸ್‌.ಎಸ್‌.ಕೆ.ಅಧ್ಯಕ್ಷ ಜಿ.ಎಸ್‌.ಧರ್ಮಪಾಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದೇಶ್‌ ಬಾಬು, ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್‌, ಪುರಸಭೆ ಮಾಜಿ ಅಧ್ಯಕ್ಷ ಮಾನಂ ವಂಕಟಸ್ವಾಮಿ, ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ