ಆ್ಯಪ್ನಗರ

2 ಕೋಟಿ 22 ಲಕ್ಷ ವೆಚ್ಚದ ಸಿಸಿರಸ್ತೆ ಕಾಮಗಾರಿಗೆ ಚಾಲನೆ

ಬಡಜನರ ಮತ್ತು ರೈತರ ಋುಣ ತೀರಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕೋಟ್ಯಾಂತರ ರೂ. ಅನುದಾನ ತಂದಿದ್ದು, ಅಭಿವೃದ್ಧಿಯ ಮಹಾಪೂರವೇ ಹರಿಯಲಿದೆ ಎಂದು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಆಶ್ವಾಸನೆ ನೀಡಿದರು.

Vijaya Karnataka 3 Feb 2019, 10:31 pm
ಕೊರಟಗೆರೆ:
Vijaya Karnataka Web 2 crore cost for cc road work
2 ಕೋಟಿ 22 ಲಕ್ಷ ವೆಚ್ಚದ ಸಿಸಿರಸ್ತೆ ಕಾಮಗಾರಿಗೆ ಚಾಲನೆ


ಬಡಜನರ ಮತ್ತು ರೈತರ ಋುಣ ತೀರಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕೋಟ್ಯಾಂತರ ರೂ. ಅನುದಾನ ತಂದಿದ್ದು, ಅಭಿವೃದ್ಧಿಯ ಮಹಾಪೂರವೇ ಹರಿಯಲಿದೆ ಎಂದು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಆಶ್ವಾಸನೆ ನೀಡಿದರು.

ತಾಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಜೆಟ್ಟಿ ಅಗ್ರಹಾರ ಗ್ರಾಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಸಿಸಿರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿದ ವೇಳೆ ಮಾತನಾಡಿದ ಅವರು, ಜೆಟ್ಟಿ ಅಗ್ರಹಾರಕ್ಕೆ 10 ಲಕ್ಷ , ಬರಕ ಗ್ರಾಮಕ್ಕೆ 42 ಲಕ್ಷ , ಕುರಿಹಳ್ಳಿ ಗ್ರಾಮಕ್ಕೆ 15 ಲಕ್ಷ , ತೋವಿನಕೆರೆಗೆ 70 ಲಕ್ಷ , ಜೋನಿಗರಹಳ್ಳಿಗೆ 7 ಲಕ್ಷ , ಮರೇನಾಯಕನಹಳ್ಳಿಗೆ 6 ಲಕ್ಷ , ಚನ್ನರಾಯನದುರ್ಗಕ್ಕೆ 6 ಲಕ್ಷ , ಚೋಳರಪಾಳ್ಯ ಗ್ರಾಮಕ್ಕೆ 50 ಲಕ್ಷ , ಮುಗ್ಗೊಂಡನಹಳ್ಳಿಕ್ಕೆ 10 ಲಕ್ಷ , ಕಾಮೇನಹಳ್ಳಿ ಗ್ರಾಮಕ್ಕೆ 6 ಲಕ್ಷ ಸೇರಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಸಿಸಿರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 2 ಕೋಟಿ 22 ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಕಲ್ಪತರು ನಾಡಿನ ಕನಸಿನ ಯೋಜನೆಯಾದ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ಅತಿವೇಗವಾಗಿ ನಡೆಯುತ್ತಿದೆ. ಕೇಂದ್ರ ಸರಕಾರದಿಂದ ರೈಲ್ವೆ ಕಾಮಗಾರಿಗೆ ಈಗಾಗಲೇ 239 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಜಿಲ್ಲೆಯ ರೈಲ್ವೆ ಕಾಮಗಾರಿಯು ತ್ವರಿತವಾಗಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಕೊರಟಗೆರೆ ಕ್ಷೇತ್ರದಲ್ಲಿಯೂ ಸಹ ರೈಲ್ವೆ ನಿಲ್ದಾಣದ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಅಕ್ಕಮಹಾದೇವಿ, ತಾಪಂ ಉಪಾಧ್ಯಕ್ಷೆ ನರಸಮ್ಮ, ಪಪಂ ಸದಸ್ಯ ಬಲರಾಮಯ್ಯ, ಗ್ರಾಪಂ ಅಧ್ಯಕ್ಷ ನಂದೀಶ್‌, ಉಪಾಧ್ಯಕ್ಷೆ ಲಲಿತಮ್ಮ, ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ