ಆ್ಯಪ್ನಗರ

ಕಲಾಸೇವೆಗಾಗಿ ಅಮಾನಿಕೆರೆ ಮಂಜುನಾಥ್‌ಗೆ ರಜತ ಕಿರೀಟ ಸಮರ್ಪಣೆ

ತಾಲೂಕಿನ ರಂಗಕಲೆಯನ್ನು ಸಕ್ರಿಯವಾಗಿಸಲು ಶ್ರಮಿಸಿದ ರಂಗಕಲಾವಿದ, ಸಮಾಜ ಸೇವಕ ಅಮಾನಿಕೆರೆ ಮಂಜುನಾಥ್‌ ಅವರ ಕಲಾಸೇವೆಗೆ ಸಂದಿರುವ ರಜತ ಕಿರೀಟ ಅಭಿನಂದನೆ ಅರ್ಥಪೂರ್ಣ ಎಂದು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

Vijaya Karnataka 26 Dec 2018, 5:00 am
ತುರುವೇಕೆರೆ: ತಾಲೂಕಿನ ರಂಗಕಲೆಯನ್ನು ಸಕ್ರಿಯವಾಗಿಸಲು ಶ್ರಮಿಸಿದ ರಂಗಕಲಾವಿದ, ಸಮಾಜ ಸೇವಕ ಅಮಾನಿಕೆರೆ ಮಂಜುನಾಥ್‌ ಅವರ ಕಲಾಸೇವೆಗೆ ಸಂದಿರುವ ರಜತ ಕಿರೀಟ ಅಭಿನಂದನೆ ಅರ್ಥಪೂರ್ಣ ಎಂದು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
Vijaya Karnataka Web a silver crown dedication to amanakere manjunath for the arts
ಕಲಾಸೇವೆಗಾಗಿ ಅಮಾನಿಕೆರೆ ಮಂಜುನಾಥ್‌ಗೆ ರಜತ ಕಿರೀಟ ಸಮರ್ಪಣೆ


ಸತ್ಯಗಣಪತಿ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ತಾಲೂಕು ಕಲಾವಿದರ ಒಕ್ಕೂಟ ವತಿಯಿಂದ ಏರ್ಪಡಿಸಿದ್ದ ಪೌರಾಣಿಕ ನಾಟಕ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಮಾನಿಕೆರೆ ಮಂಜಣ್ಣನವರು ಒಂದು ಕುಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ನಾನಾ ಆಯಾಮಗಳಿಂದ ದೊರಕಿಸಿ ಅದನ್ನು ಸುಗ್ರಾಮವನ್ನಾಗಿಸಿದ್ದಾರೆ. ಮೂಲೆಗುಂಪಾಗಿದ್ದ ತಾಲೂಕಿನ ಕಲಾವಿದರನ್ನು ಒಗ್ಗೂಡಿಸಿ ತಾಲೂಕು ಕಲಾವಿದರ ಒಕ್ಕೂಟವನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅಸಹಾಯಕರಿಗೆ ಧ್ವನಿಯಾಗಿ ಅವರು ಸಲ್ಲಿಸಿರುವ ಅನುಪಮ ಸೇವೆಗೆ ರಜತ ಕಿರೀಟ ಅಭಿನಂದನೆ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ರಂಗಕಲೆಗೆ ಶ್ರಮಿಸಿರುವ ಹಿರಿಯ ರಂಗನಿರ್ದೇಶಕರು, ಹಾರ್ಮೋನಿಯಂ ವಾದಕ ಗುರುಗಳನ್ನು ಪುರಸ್ಕರಿಸಲಾಯಿತು.

ಅಹೋರಾತ್ರಿ ಪ್ರದರ್ಶನಗೊಂಡ ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಮಂಡ್ಯದ ಉಪನ್ಯಾಸಕಿ ನಿರ್ಮಲಾ, ದೇವಿಹಳ್ಳಿ ಮಂಜಣ್ಣ ದುಯೋರ್ಧನ, ಕಲ್ಕೆರೆ ಶಂಕರಣ್ಣ ಧರ್ಮರಾಯರಾಗಿ, 43ನೇ ಬಾರಿಗೆ ಅಭಿಮನ್ಯು ಪಾತ್ರದಲ್ಲಿ ಅಮಾನಿಕೆರೆ ಮಂಜುನಾಥ್‌ ಹಾಗೂ ಹಲವರು ಸಹ ಪಾತ್ರದೊಂದಿಗೆ ಉತ್ತಮ ಅಭಿನಯದೊಂದಿಗೆ ರಂಗಾಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಅಭಿನಂದನೆ ಸಮಾರಂಭದಲ್ಲಿ ಹಾಗೂ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಮಸಾಲಾ ಜಯರಾಮ್‌, ಒಕ್ಕೂಟದ ಬೋರೇಗೌಡ, ರಮೇಶಗೌಡ, ದೊಡಾಘಟ್ಟ ಚಂದ್ರೇಶ್‌, ಮೂಡಲಗಿರಿಯಪ್ಪ, ಹುಲಿಕಲ್‌ ನಾಗರಾಜು, ಜಯಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ