ಆ್ಯಪ್ನಗರ

ತುಮಕೂರು: ಪೋಷಕರ ಮೇಲಿನ ಹಳೆ ದ್ವೇಷಕ್ಕೆ 4 ವರ್ಷದ ಮಗು ಕೊಲೆ; ಆರೋಪಿ ಪೊಲೀಸರ ಬಲೆಗೆ

ಪೋಷಕರ ಜೊತೆಗಿನ ಹಳೇ ದ್ವೇಷಕ್ಕೆ 4 ವರ್ಷದ ಮಗುವನ್ನು ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು, ಮನೆಯಂಗಳದಲ್ಲಿ ಆಟುವಾಡುತ್ತಿದ್ದ ಮಗು ಸಂಜೆ ಕೊಚ್ಚಿ ಕೊಲೆಯಾದ ರೀತಿ ನೀರಿನಲ್ಲಿ ಸಂಪಿನಲ್ಲಿ ಪತ್ತೆಯಾಗಿದೆ.

Vijaya Karnataka Web 28 Oct 2020, 5:42 pm
ತುಮಕೂರು (ಕೊಡಿಗೇನಹಳ್ಳಿ): ಮನೆಯಂಗಳದಲ್ಲಿ ಆಟುವಾಡುತ್ತಿದ್ದ ಮಗು ಸಂಜೆ ಕೊಚ್ಚಿ ಕೊಲೆಯಾದ ರೀತಿ ನೀರಿನಲ್ಲಿ ಸಂಪಿನಲ್ಲಿ ಪತ್ತೆಯಾಗಿರುವ ಘಟನೆ ಮಧುಗಿರಿ ತಾಲೂಕ ವೀರನಾಗೇನಹಳ್ಳಿ ಗ್ರಾಮದ ಮಜರೆ ವಡ್ಡರಹಟ್ಟಿಯಲ್ಲಿ ನಡೆದಿದೆ.
Vijaya Karnataka Web a young boy kills 4 year old boy for revenge
ತುಮಕೂರು: ಪೋಷಕರ ಮೇಲಿನ ಹಳೆ ದ್ವೇಷಕ್ಕೆ 4 ವರ್ಷದ ಮಗು ಕೊಲೆ; ಆರೋಪಿ ಪೊಲೀಸರ ಬಲೆಗೆ


ಪುರವರ ಹೋಬಳಿಯ ವೀರನಾಗೇನಹಳ್ಳಿ ವ್ಯಾಪ್ತಿಯ ಮಜರೆ ವಡ್ಡರಹಟ್ಟಿಯಲ್ಲಿ ರಘು ಹಾಗೂ ಗೀತಾ ದಂಪತಿಯ ಪುತ್ರ ಜಯಂತ್ (4ವರ್ಷ) ಮೃತ ಮಗು. ಮಂಗಳವಾರ ಸಂಜೆಯಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಪೋಷಕರು ಸುತ್ತಮತ್ತ ವಿಚಾರಿಸಿದ್ದಾರೆ. ಆದರೆ, ಸಂಜೆ 6:30ರ ವೇಳೆಗೆ ನೀರಿನ ಸಂಪಿನಲ್ಲಿ ಕೊಲೆಯಾದ ರೀತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಮೃತ ಮಗುವಿನ ಪೋಷಕರಿಗೂ ಗ್ರಾಮದ ಸತ್ಯಪ್ಪ ಎಂಬುವವರ ಮಗ 15 ವರ್ಷದ ಬಾಲಕನಿಗೆ ಹಳೆ ದ್ವೇಷವಿತ್ತು ಎನ್ನಲಾಗಿದೆ. ಈತನ ಮೇಲೆ ಪೋಷಕರು ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತುಮಕೂರು: ಮದ್ಯದ ಅಮಲು ತಂದ ಆಪತ್ತು..! ಕುಡಿದ ಮತ್ತಿನಲ್ಲಿ ಬಾವಿಗೆ ಬಿದ್ದ ಯುವಕ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೊಡಿಗೇನಹಳ್ಳಿ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದರು. ಹಳೆ ದ್ವೇಷಕ್ಕೆ ಮಗುವನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ