ತುಮಕೂರು:
'ಸ್ಮಾರ್ಟ್ಸಿಟಿ ಅನುಷ್ಠಾನ ವೈಫಲ್ಯ, ಪಕ್ಷಿಗಳ ಮಾರಣ ಹೋಮ!' ಶೀರ್ಷಿಕೆಯಡಿ ಜೂ.10ರಂದು ವಿಕ ಪ್ರಕಟಿಸಿದ್ದ ವಿಶೇಷ ವರದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮಾನಿಕೆರೆಯ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಸಮಗ್ರ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲು ನಾಗರಿಕರು ಮುಂದಾಗಿದ್ದಾರೆ.
ಅಮಾನಿಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ವಿಕ ಬೆಳಕು ಚೆಲ್ಲಿದ ಬೆನ್ನಲ್ಲೇ ನಗರದ ಕೆಲವು ಪ್ರಜ್ಞಾವಂತರು ಎಚ್ಚೆತ್ತುಕೊಂಡಿದ್ದಾರೆ. ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ಯೋಜನೆ ರೂಪಿಸುವಂತೆ ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ ತಿಳಿಸಿದರು.
ಮಂಗಳವಾರ ಅಮಾನಿಕೆರೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ಮಾರ್ಟ್ಸಿಟಿ ಯೋಜನೆಯಡಿ ಅಮಾನಿಕೆರೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಹಣವನ್ನು ಕೆರೆಯನ್ನು ಸಂಪರ್ಕಿಸುವ ಐದು ಪ್ರಮುಖ ರಾಜಕಾಲುವೆಗಳ ಅಭಿವೃದ್ಧಿಗೆ ಬಳಕೆ ಮಾಡಿದಲ್ಲಿ ನೀರು ಸರಾಗವಾಗಿ ಹರಿದು ಬರುತ್ತದೆ. ಆದರೆ, ಈಗ ಕೆರೆಯ ಬದುವನ್ನು ಪುನರ್ನಿರ್ಮಾಣ ಮಾಡಲು ಈ 25 ಕೋಟಿ ರೂ. ವೆಚ್ಚ ಮಾಡುತ್ತಿರುವುದು ಸಂಪೂರ್ಣವಾಗಿ ಅವೈಜ್ಞಾನಿಕವಾದದ್ದು ಎಂದು ಆರೋಪಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಮಾತನಾಡಿ, ಅಮಾನಿಕೆರೆಗೆ ಈ ಹಿಂದಿನ ಸಂಸದರ ಅನುದಾನವಲ್ಲದೇ 18 ಕೋಟಿ ರೂ. ವಿಶೇಷ ಅನುದಾನ ಬಳಸಲಾಗಿದೆ. ಅದಕ್ಕೂ ಹಿಂದಿನ ಶಾಸಕ ಸೊಗಡು ಶಿವಣ್ಣರ ಅವಧಿಯಲ್ಲಿ ಕೂಡ ಹಣ ನೀಡಲಾಗಿದೆ. ಇದೀಗ ಸ್ಮಾರ್ಟ್ ಸಿಟಿಯಲ್ಲಿ ಕೆರೆಯ ಬದು ಅಗಲೀಕರಣಕ್ಕೆ 25 ಕೋಟಿ ರೂ. ಹಾಗೂ ಪೈಪ್ಲೈನ್ ಅಳವಡಿಕೆಗೆ 56 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿಯಲ್ಲಿ ಅವ್ಯವಹಾರದ ಶಂಕೆ ಇದ್ದು, ತನಿಖೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದರು.
ಮಳೆ ನೀರು ಸರಾಗವಾಗಿ ಹರಿದು ಬರಲು ರಾಯಗಾಲುವೆಗಳಲ್ಲಿ ಹೂಳು ತೆಗೆದಿರುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ನಗರ ಮತ್ತು ಒಳಚರಂಡಿ ಮಂಡಳಿಯಿಂದ ರಾಯಗಾಲುವೆ ಸ್ವಚ್ಛ ಮಾಡಲು 25 ಲಕ್ಷ ರೂ., ಸ್ಮಾರ್ಟ್ಸಿಟಿಯಿಂದ 34 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಪಾಲಿಕೆಯಿಂದ ಅವರದ್ದೇ ಜೆಸಿಬಿ ಬಳಸಿ 25 ಲಕ್ಷ ರೂ. ಖರ್ಚು ಮಾಡಿದ್ದಾರೆ. ಕೇವಲ ರಾಯಗಾಲುವೆ ತೆರವು ಮಾಡಲು ಅಂದಾಜು 120 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ಅಂಕಿ-ಅಂಶಗಳು ಪಾಲಿಕೆಯ ಜಾಲತಾಣದಲ್ಲಿ ಲಭ್ಯವಿದೆ. ಇಷ್ಟು ಹಣದಲ್ಲಿ ರಾಯಗಾಲುವೆಗಳಿಗೆ ಸಿಮೆಂಟ್ ಹಾಕಿ ಕಾಲುವೆ ನಿರ್ಮಾಣ ಮಾಡಿದ್ದಿದ್ದರೆ ಶಾಶ್ವತ ಪರಿಹಾರ ದೊರೆಯುತ್ತಿತ್ತು ಎಂದರು.
ಸಾಮಾಜಿಕ ಕಾರ್ಯಕರ್ತ ಡಮರುಗ ಉಮೇಶ್ ಮಾತನಾಡಿ, ಸ್ಮಾರ್ಟ್ಸಿಟಿಯಡಿ ಜನರಿಗೆ ಅನುಕೂಲವಾಗುವಂತಹ ದೀರ್ಘಾವಧಿ ಕಾಮಗಾರಿ ಕೈಗೊಂಡಿಲ್ಲ. ಅಮಾನಿಕೆರೆಗೆ ಏಳೆಂಟು ಯೋಜನೆಗಳ ಅನುದಾನ ಬಳಕೆ ಮಾಡಿ ಹಣ ಬಿಡುಗಡೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಶಾಸಕರಾಗಿದ್ದ ಸೊಗಡು ಶಿವಣ್ಣರ ಅವಧಿಯಲ್ಲಿ ಕೆರೆಯ ಬದುವಿಗೆ ಕಲ್ಲು ಕಟ್ಟಲಾಗಿತ್ತು. ಈಗ ಅದನ್ನು ಸ್ಮಾರ್ಟ್ಸಿಟಿಯವರು ಕಿತ್ತು ಹಾಕುತ್ತಿದ್ದಾರೆ. ಸಾರ್ವಜನಿಕರ ಹಣ ವೃಥಾ ಪೋಲಾಗುತ್ತಿದೆ. ನಗರದ ಪ್ರಜ್ಞಾವಂತ ಜನರು ಈ ಬಗ್ಗೆ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ನಗರದ ಅಭಿವೃದ್ಧಿಗೆ ಬಂದ ಹಣ ವ್ಯರ್ಥವಾಗುತ್ತದೆ ಎಂದು ಎಚ್ಚರಿಸಿದರು. ಪರಿಸರ ಕಾರ್ಯಕರ್ತರಾದ ಸಿಂಧೂಸ್ವಾಮಿ ಇದ್ದರು.
ಯು.ಟಿ. ಖಾದರ್ಗೆ ದೂರು:
ಅಮಾನಿಕೆರೆಯ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುವುದು. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸಮಗ್ರ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ತಿಳಿಸಿದರು.
ಜೂ.10ರಂದು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅವರನ್ನು ಭೇಟಿ ಮಾಡಿದಾಗ ಕೆರೆಯಲ್ಲಿ 9 ಇಂಚು ಹೂಳು ತೆಗೆಯುತ್ತಿರುವುದಾಗಿ ಹೇಳಿದ್ದರು. ಆದರೆ ನಾವು ಸ್ಥಳ ಪರಿಶೀಲನೆ ನಡೆಸಿದಾಗ ಇಲ್ಲಿ ಹಳೆಯ ಕಲ್ಲುಗಳನ್ನು ಕಿತ್ತು, ಅದರಿಂದಲೇ ಕೆರೆಯ ಬದುವನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ. ತಕ್ಷಣ ಈ ವ್ಯರ್ಥ ಕಾಮಗಾರಿ ನಿಲ್ಲಿಸಬೇಕು. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಎರಡೂ ಸರಕಾರಕ್ಕೆ ಪತ್ರ ಬರೆದು ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಲಾಗುವುದು. ಅದಕ್ಕೂ ಮುಂಚೆ ಸ್ಮಾರ್ಟ್ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್, ಆಯುಕ್ತ ರಂಗಸ್ವಾಮಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ಸಂಸದ ಜಿ.ಎಸ್. ಬಸವರಾಜು ಅವರುಗಳು ಸ್ಥಳ ಪರಿಶೀಲನೆ ಮಾಡಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ ಒತ್ತಾಯಿಸಿದರು.
ಅಮಾನಿಕೆರೆ ಸಂಪರ್ಕಿಸುವ ಕೆಲವು ರಾಯಗಾಲುವೆಗಳಲ್ಲಿನ ಹೂಳು ತೆಗೆಯಲಾಗಿದೆ. ಎಲ್ಲವನ್ನೂ ಸ್ವಚ್ಛ ಮಾಡಲಾಗಿಲ್ಲ. 25 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಬದು ನಿರ್ಮಾಣ ನಡೆಯುತ್ತಿದೆ. ಕೆರೆಯ ಹೂಳು ತೆಗೆದು, ಬುಗುಡನಹಳ್ಳಿ ಕೆರೆಯಿಂದ ಪೈಪ್ಲೈನ್ ಮೂಲಕ ನೀರು ತುಂಬಿಸಿ, ನಗರಕ್ಕೆ ಕುಡಿಯಲು ಪೂರೈಕೆ ಮಾಡುವ ಯೋಜನೆ ನಡೆಯುತ್ತಿದೆ.
- ರಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್ಸಿಟಿ
'ಸ್ಮಾರ್ಟ್ಸಿಟಿ ಅನುಷ್ಠಾನ ವೈಫಲ್ಯ, ಪಕ್ಷಿಗಳ ಮಾರಣ ಹೋಮ!' ಶೀರ್ಷಿಕೆಯಡಿ ಜೂ.10ರಂದು ವಿಕ ಪ್ರಕಟಿಸಿದ್ದ ವಿಶೇಷ ವರದಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮಾನಿಕೆರೆಯ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಸಮಗ್ರ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲು ನಾಗರಿಕರು ಮುಂದಾಗಿದ್ದಾರೆ.
ಅಮಾನಿಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿ ಬಗ್ಗೆ ವಿಕ ಬೆಳಕು ಚೆಲ್ಲಿದ ಬೆನ್ನಲ್ಲೇ ನಗರದ ಕೆಲವು ಪ್ರಜ್ಞಾವಂತರು ಎಚ್ಚೆತ್ತುಕೊಂಡಿದ್ದಾರೆ. ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ಯೋಜನೆ ರೂಪಿಸುವಂತೆ ಒತ್ತಾಯಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ ತಿಳಿಸಿದರು.
ಮಂಗಳವಾರ ಅಮಾನಿಕೆರೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಸ್ಮಾರ್ಟ್ಸಿಟಿ ಯೋಜನೆಯಡಿ ಅಮಾನಿಕೆರೆಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಹಣವನ್ನು ಕೆರೆಯನ್ನು ಸಂಪರ್ಕಿಸುವ ಐದು ಪ್ರಮುಖ ರಾಜಕಾಲುವೆಗಳ ಅಭಿವೃದ್ಧಿಗೆ ಬಳಕೆ ಮಾಡಿದಲ್ಲಿ ನೀರು ಸರಾಗವಾಗಿ ಹರಿದು ಬರುತ್ತದೆ. ಆದರೆ, ಈಗ ಕೆರೆಯ ಬದುವನ್ನು ಪುನರ್ನಿರ್ಮಾಣ ಮಾಡಲು ಈ 25 ಕೋಟಿ ರೂ. ವೆಚ್ಚ ಮಾಡುತ್ತಿರುವುದು ಸಂಪೂರ್ಣವಾಗಿ ಅವೈಜ್ಞಾನಿಕವಾದದ್ದು ಎಂದು ಆರೋಪಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ಮಾತನಾಡಿ, ಅಮಾನಿಕೆರೆಗೆ ಈ ಹಿಂದಿನ ಸಂಸದರ ಅನುದಾನವಲ್ಲದೇ 18 ಕೋಟಿ ರೂ. ವಿಶೇಷ ಅನುದಾನ ಬಳಸಲಾಗಿದೆ. ಅದಕ್ಕೂ ಹಿಂದಿನ ಶಾಸಕ ಸೊಗಡು ಶಿವಣ್ಣರ ಅವಧಿಯಲ್ಲಿ ಕೂಡ ಹಣ ನೀಡಲಾಗಿದೆ. ಇದೀಗ ಸ್ಮಾರ್ಟ್ ಸಿಟಿಯಲ್ಲಿ ಕೆರೆಯ ಬದು ಅಗಲೀಕರಣಕ್ಕೆ 25 ಕೋಟಿ ರೂ. ಹಾಗೂ ಪೈಪ್ಲೈನ್ ಅಳವಡಿಕೆಗೆ 56 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿಯಲ್ಲಿ ಅವ್ಯವಹಾರದ ಶಂಕೆ ಇದ್ದು, ತನಿಖೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದರು.
ಮಳೆ ನೀರು ಸರಾಗವಾಗಿ ಹರಿದು ಬರಲು ರಾಯಗಾಲುವೆಗಳಲ್ಲಿ ಹೂಳು ತೆಗೆದಿರುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ. ನಗರ ಮತ್ತು ಒಳಚರಂಡಿ ಮಂಡಳಿಯಿಂದ ರಾಯಗಾಲುವೆ ಸ್ವಚ್ಛ ಮಾಡಲು 25 ಲಕ್ಷ ರೂ., ಸ್ಮಾರ್ಟ್ಸಿಟಿಯಿಂದ 34 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಪಾಲಿಕೆಯಿಂದ ಅವರದ್ದೇ ಜೆಸಿಬಿ ಬಳಸಿ 25 ಲಕ್ಷ ರೂ. ಖರ್ಚು ಮಾಡಿದ್ದಾರೆ. ಕೇವಲ ರಾಯಗಾಲುವೆ ತೆರವು ಮಾಡಲು ಅಂದಾಜು 120 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಈ ಅಂಕಿ-ಅಂಶಗಳು ಪಾಲಿಕೆಯ ಜಾಲತಾಣದಲ್ಲಿ ಲಭ್ಯವಿದೆ. ಇಷ್ಟು ಹಣದಲ್ಲಿ ರಾಯಗಾಲುವೆಗಳಿಗೆ ಸಿಮೆಂಟ್ ಹಾಕಿ ಕಾಲುವೆ ನಿರ್ಮಾಣ ಮಾಡಿದ್ದಿದ್ದರೆ ಶಾಶ್ವತ ಪರಿಹಾರ ದೊರೆಯುತ್ತಿತ್ತು ಎಂದರು.
ಸಾಮಾಜಿಕ ಕಾರ್ಯಕರ್ತ ಡಮರುಗ ಉಮೇಶ್ ಮಾತನಾಡಿ, ಸ್ಮಾರ್ಟ್ಸಿಟಿಯಡಿ ಜನರಿಗೆ ಅನುಕೂಲವಾಗುವಂತಹ ದೀರ್ಘಾವಧಿ ಕಾಮಗಾರಿ ಕೈಗೊಂಡಿಲ್ಲ. ಅಮಾನಿಕೆರೆಗೆ ಏಳೆಂಟು ಯೋಜನೆಗಳ ಅನುದಾನ ಬಳಕೆ ಮಾಡಿ ಹಣ ಬಿಡುಗಡೆ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಶಾಸಕರಾಗಿದ್ದ ಸೊಗಡು ಶಿವಣ್ಣರ ಅವಧಿಯಲ್ಲಿ ಕೆರೆಯ ಬದುವಿಗೆ ಕಲ್ಲು ಕಟ್ಟಲಾಗಿತ್ತು. ಈಗ ಅದನ್ನು ಸ್ಮಾರ್ಟ್ಸಿಟಿಯವರು ಕಿತ್ತು ಹಾಕುತ್ತಿದ್ದಾರೆ. ಸಾರ್ವಜನಿಕರ ಹಣ ವೃಥಾ ಪೋಲಾಗುತ್ತಿದೆ. ನಗರದ ಪ್ರಜ್ಞಾವಂತ ಜನರು ಈ ಬಗ್ಗೆ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ನಗರದ ಅಭಿವೃದ್ಧಿಗೆ ಬಂದ ಹಣ ವ್ಯರ್ಥವಾಗುತ್ತದೆ ಎಂದು ಎಚ್ಚರಿಸಿದರು. ಪರಿಸರ ಕಾರ್ಯಕರ್ತರಾದ ಸಿಂಧೂಸ್ವಾಮಿ ಇದ್ದರು.
ಯು.ಟಿ. ಖಾದರ್ಗೆ ದೂರು:
ಅಮಾನಿಕೆರೆಯ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಾಗುವುದು. ಈ ಎಲ್ಲಾ ಅವ್ಯವಹಾರಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಸಮಗ್ರ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಇಮ್ರಾನ್ ಪಾಷಾ ತಿಳಿಸಿದರು.
ಜೂ.10ರಂದು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅವರನ್ನು ಭೇಟಿ ಮಾಡಿದಾಗ ಕೆರೆಯಲ್ಲಿ 9 ಇಂಚು ಹೂಳು ತೆಗೆಯುತ್ತಿರುವುದಾಗಿ ಹೇಳಿದ್ದರು. ಆದರೆ ನಾವು ಸ್ಥಳ ಪರಿಶೀಲನೆ ನಡೆಸಿದಾಗ ಇಲ್ಲಿ ಹಳೆಯ ಕಲ್ಲುಗಳನ್ನು ಕಿತ್ತು, ಅದರಿಂದಲೇ ಕೆರೆಯ ಬದುವನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ. ತಕ್ಷಣ ಈ ವ್ಯರ್ಥ ಕಾಮಗಾರಿ ನಿಲ್ಲಿಸಬೇಕು. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಎರಡೂ ಸರಕಾರಕ್ಕೆ ಪತ್ರ ಬರೆದು ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಲಾಗುವುದು. ಅದಕ್ಕೂ ಮುಂಚೆ ಸ್ಮಾರ್ಟ್ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್, ಆಯುಕ್ತ ರಂಗಸ್ವಾಮಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ಸಂಸದ ಜಿ.ಎಸ್. ಬಸವರಾಜು ಅವರುಗಳು ಸ್ಥಳ ಪರಿಶೀಲನೆ ಮಾಡಬೇಕು ಎಂದು ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ ಒತ್ತಾಯಿಸಿದರು.
ಅಮಾನಿಕೆರೆ ಸಂಪರ್ಕಿಸುವ ಕೆಲವು ರಾಯಗಾಲುವೆಗಳಲ್ಲಿನ ಹೂಳು ತೆಗೆಯಲಾಗಿದೆ. ಎಲ್ಲವನ್ನೂ ಸ್ವಚ್ಛ ಮಾಡಲಾಗಿಲ್ಲ. 25 ಕೋಟಿ ರೂ. ವೆಚ್ಚದಲ್ಲಿ ಕೆರೆಯ ಬದು ನಿರ್ಮಾಣ ನಡೆಯುತ್ತಿದೆ. ಕೆರೆಯ ಹೂಳು ತೆಗೆದು, ಬುಗುಡನಹಳ್ಳಿ ಕೆರೆಯಿಂದ ಪೈಪ್ಲೈನ್ ಮೂಲಕ ನೀರು ತುಂಬಿಸಿ, ನಗರಕ್ಕೆ ಕುಡಿಯಲು ಪೂರೈಕೆ ಮಾಡುವ ಯೋಜನೆ ನಡೆಯುತ್ತಿದೆ.
- ರಂಗಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ, ಸ್ಮಾರ್ಟ್ಸಿಟಿ