ಆ್ಯಪ್ನಗರ

ದಾಬಸ್‌ ಪೇಟೆಯಲ್ಲಿ ಎಟಿಎಂ ಯಂತ್ರವನ್ನೇ ಹೊತ್ತೊಯ್ದ ಖದೀಮರು, 85 ಸಾವಿರ ನಗದು ಕಳ್ಳತನ

ಇಂಡಿಯನ್‌ ಓವರ್‌ ಸಿಸ್‌ ಬ್ಯಾಂಕ್‌ನ ಎಟಿಎಂ ಕಳ್ಳತನ ಮಾಡಿ 85 ಸಾವಿರ ನಗದು ಹಣ ದೋಚಿದ ಘಟನೆ ದಾಬಸ್ ಪೇಟೆಯಲ್ಲಿ ನಡೆದಿದೆ. ಈ ಕುರಿತಾಗಿ ಬ್ಯಾಂಕ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

Vijaya Karnataka Web 20 Jan 2021, 8:24 pm
ದಾಬಸ್‌ ಪೇಟೆ: ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಗ್ಗೆರೆಯ ಇಂಡಿಯನ್‌ ಓವರ್‌ ಸಿಸ್‌ ಬ್ಯಾಂಕ್‌ನ ಎಟಿಎಂ ಕಳ್ಳತನಮಾಡಿ ಮಷಿನಲ್ಲಿದ್ದ ಹಣ ದೋಚಿ ಮಷಿನ್‌ನ್ನು ಸೋಂಪುರ ಹೋಬಳಿ ಬರಗೇನಹಳ್ಳಿ ಗ್ರಾಮದ ರೈತ ಪುಟ್ಟಗಂಗಯ್ಯನ ಅಡಕೆ ತೋಟದಲ್ಲಿ ಬಿಸಾಕಿ ಹೋಗಿರುವ ದುಷ್ಕೃತ್ಯ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಇದೇ 18 ರಂದು ಹೆಗ್ಗೆರೆಯ ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನಲ್ಲಿ ಎಟಿಎಂ ಕಳ್ಳತನವಾಗಿರುವ ಬಗ್ಗೆ ಹಾಗೂ ಅದಲ್ಲಿದ್ದ 85 ಸಾವಿರ ಕಳ್ಳತನವಾಗಿರುವ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೂರು ದಿನಗಳ ಹಿಂದೆ ಬೆಳಗ್ಗೆ ಸುಮಾರು 7 ಗಂಟೆಗೆ ತೋಟದ ರಸ್ತೆಯಲ್ಲಿ ಟಾಟಾಏಸ್‌ ಗಾಡಿಯು ಹೋಗುತ್ತಿದ್ದಾಗ ರೈತ ಪುಟ್ಟಗಂಗಯ್ಯ ಏಕೆ ಅಂತ ಕೇಳಿದ್ದಾರೆ. ಅದಕ್ಕೆ ಅವರುಗಳು 'ತೆಂಗಿನ ಕಾಯಿ ಇದೆ ಅಂತ ಹೇಳಿದ್ದರು ಅದನ್ನು ನೋಡಲು ಬಂದಿದ್ವಿ' ಅಂತ ಹೇಳಿ ಅರ್ಜೆಂಟಾಗಿ ಹೋಗಿದ್ದಾರೆ. ಆ ಗಾಡಿಯಲ್ಲಿ ನಂಬರ್‌ ಇರಲಿಲ್ಲ ಎಂದು ಪುಟ್ಟಗಂಗಯ್ಯ ಪೊಲೀಸರಿಗೆ ತಿಳಿಸಿದ್ದಾರೆ.

ಎಟಿಎಂ ಮಷಿನ್‌ ತಂದವರು ನೀಲಗಿರಿ ತೋಪಿನ ಜಾಗದಲ್ಲಿ ಇಳಿಸಿದ್ದು, ಅದು ಜಾಗ ಸರಿ ಇಲ್ಲದ ಕಾರಣ ರಾತ್ರಿಯಲ್ಲಿ ಸುಮಾರು 300 ಅಡಿ ದೂರ ಇರುವ ಅಡಕೆ ತೋಟಕ್ಕೆ ಹೋಗಿ ಅಲ್ಲಿ ಕಂಬಿ ಕಿತ್ತು ತಂದನಂತರ ಅಲ್ಲಿನ ಕೊಳವೆಬಾವಿಯ ರೂಮ್‌ನ ಬೀಗ ಒಡೆದು ಅಲ್ಲಿ ಎಟಿಎಂನ ಮೆಷಿನನ್ನು ಕರೆಂಟ್‌ ಕಟ್ಟಿಂಗ್‌ನಿಂದ ಓಪನ್‌ ಮಾಡಿ ನಂತರ ಅದರಲ್ಲಿದ್ದ 85 ಸಾವಿರ ರೂಪಾಯಿಯನ್ನು ತೆಗೆದುಕೊಂಡು ಹೋಗಿದ್ದಾರೆ.

ಘಟನೆ ಸ್ಥಳಕ್ಕೆ ನೆಲಮಂಗಲ ವೃತ್ತ ನೀರಿಕ್ಷಕ ಎಂ.ಆರ್‌.ಹರೀಶ್‌, ದಾಬಸ್‌ಪೇಟೆ ಆರಕ್ಷಕ ಉಪನೀರಿಕ್ಷಕ ಡಿ.ಆರ್‌.ಮಂಜುನಾಥ, ತ್ಯಾಮಗೊಂಡ್ಲುಆರಕ್ಷಕ ಉಪನೀರಿಕ್ಷಕ ಮೋಹನ್‌ ಕುಮಾರ್‌, ತುಮಕೂರು ಗ್ರಾಮಾಂತರ ಆರಕ್ಷಕ ಉಪ ನೀರಿಕ್ಷಕ ಲಕ್ಷಯ್ಯ ಇದ್ದರು. ದಾಬಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ