ಆ್ಯಪ್ನಗರ

ನಸುಕಿನ ಜಾವ ಮೂವರು ರೈತರ ಮೇಲೆ ಕರಡಿ ದಾಳಿ

ಕಳೆದೆರಡು ದಿನಗಳಿಂದ ಬೋರ್ ಪಾಯಿಂಟ್ ಕೊರೆಸಲು ಕಾಯುತ್ತಿದ್ದಾರೆ. ಅದರ ಸಲುವಾಗಿ ಬಂಡೇನಹಳ್ಳಿ ಗ್ರಾಮದ ವ್ಯಕ್ತಿಯನ್ನು ಇವರೊಡನೆ ಕರೆಸಿಕೊಂಡಿದ್ದಾರೆ ರಾತ್ರಿ ಈ ದುರ್ಘಟನೆ ನಡೆದಿದೆ.

Vijaya Karnataka Web 19 Mar 2019, 2:08 pm
ಮಧುಗಿರಿ: ಹೊಲದಲ್ಲಿ ನೀರು ಹಾಯಿಸಲು ಮತ್ತು ಬೋರ್ ಪಾಯಿಂಟ್ ಕೊರೆಯಲು ಕಾಯುತ್ತಿದ್ದ ಮೂರು ರೈತರ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಪಡಸಾಲಹಟ್ಟಿ ಗ್ರಾಮದಲ್ಲಿ ಮಂಗಳವಾರ ನಸುಕಿನ ವೇಳೆ ನಡೆದಿದೆ.
Vijaya Karnataka Web bear


ಗ್ರಾಮದ ಬಂಡಪ್ಪ ಎಂಬವರ ಪುತ್ರ ಸುರೇಶ್ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ ಸೇರಿಸಲಾಗಿದೆ. ಬೋರಣ್ಣ ಎಂಬವರ ಮಗ ಶಿವರಾಜ್ ಮತ್ತು ಬಂಡೆನಹಳ್ಳಿ ಗ್ರಾಮದ ವ್ಯಕ್ತಿ ಮೈಲಾರಪ್ಪ ಎಂಬವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
.
ಕಳೆದೆರಡು ದಿನಗಳಿಂದ ಬೋರ್ ಪಾಯಿಂಟ್ ಕೊರೆಸಲು ಕಾಯುತ್ತಿದ್ದಾರೆ. ಅದರ ಸಲುವಾಗಿ ಬಂಡೇನಹಳ್ಳಿ ಗ್ರಾಮದ ವ್ಯಕ್ತಿಯನ್ನು ಇವರೊಡನೆ ಕರೆಸಿಕೊಂಡಿದ್ದಾರೆ ರಾತ್ರಿ ಈ ದುರ್ಘಟನೆ ನಡೆದಿದೆ.

ತಾಲ್ಲೂಕಿನಲ್ಲಿ ಇದೆ ರೀತಿ ಸುಮಾರು ಘಟನೆಗಳು ನಡೆಯುತ್ತಿದ್ದು ಸಂಭಂದ ಪಟ್ಟ ಅಧಿಕಾರಿಗಳು ಏಚ್ಚೆದ್ದು ಕೊಳ್ಳಬೇಕೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ