ಆ್ಯಪ್ನಗರ

ಆವಿಷ್ಕಾರದಲ್ಲಿ ಕ್ಯಾಲಿಫೋರ್ನಿಯಾವನ್ನು ಬೆಂಗಳೂರು ಹಿಂದಿಕ್ಕಿದೆ: ಸಚಿವ ಅಶ್ವತ್ಥನಾರಾಯಣ

ಈಗ ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ಉತ್ಪನ್ನ ಕೊಂಡರೂ ಅದರ ಹಿಂದೆ ನಮ್ಮ ಬೆಂಗಳೂರಿಗರ ತಾಂತ್ರಿಕ ಸಹಕಾರ ಬಹುತೇಕ ಇದ್ದೇ ಇರುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

Vijaya Karnataka Web 25 Jun 2022, 7:45 pm
ಅಂಕನಹಳ್ಳಿ ಗವಿಮಠ (ಕುಣಿಗಲ್ ತಾಲೂಕು): ತಂತ್ರಜ್ಞಾನ ಹಾಗೂ ಆವಿಷ್ಕಾರದಲ್ಲಿ ನಮ್ಮ ಬೆಂಗಳೂರು ನಗರವು ಅಮೆರಿಕಾದ ಕ್ಯಾಲಿಫೋರ್ನಿಯಾವನ್ನು ಕೂಡ ಹಿಂದಿಕ್ಕಿದೆ. ಆದರೆ, ನಾವು ಎಷ್ಟು ಮುಂದಿದ್ದೇವೆ ಎಂದು ನಮಗೇ ಗೊತ್ತಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
Vijaya Karnataka Web ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ


ಹುಲಿಯೂರುದುರ್ಗ ಹೋಬಳಿ ಅಂಕನಹಳ್ಳಿ ಗವಿಮಠದಲ್ಲಿ ಶನಿವಾರ ಏರ್ಪಡಿಸಿದ್ದ ಫಿರಂಗೀಶ್ವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರು ಮಾತನಾಡಿದರು.

ಈಗ ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ಉತ್ಪನ್ನ ಕೊಂಡರೂ ಅದರ ಹಿಂದೆ ನಮ್ಮ ಬೆಂಗಳೂರಿಗರ ತಾಂತ್ರಿಕ ಸಹಕಾರ ಬಹುತೇಕ ಇದ್ದೇ ಇರುತ್ತದೆ ಎಂದು ತಿಳಿಸಿದರು.

ಪೋಷಕರೇ ಖಾಸಗಿ ಶಾಲೆಗಳ ಲಾಬಿಗೆ ಮರುಳಾಗದಿರಿ: ‘ಸರಕಾರಿ ಶಾಲೆಗಳಲ್ಲೂ ಇದೆ ಗುಣಮಟ್ಟದ ಶಿಕ್ಷಣ’

ನಮ್ಮ ತಂದೆಯವರು ಪ್ರತಿಭಾವಂತ ವಿದ್ಯಾವಂತರಾಗಿದ್ದು, ಒಳ್ಳೆಯ ಕ್ರೀಡಾಪಟುವಾಗಿದ್ದರೂ ವ್ಯವಸಾಯಗಾರಬೇಕೆಂಬ ಗೀಳು ಹತ್ತಿಸಿಕೊಂಡು ಸರಕಾರಿ ನೌಕರಿಗಳನ್ನೆಲ್ಲಾ ತೊರೆದು ಬಂದಿದ್ದರು. ಆದರೆ ಕೌಟುಂಬಿಕ ಕಟ್ಟುಪಾಡುಗಳಿಂದ ಅವರು ಪುನಃ ಉದ್ಯೋಗಕ್ಕೆ ಸೇರಬೇಕಾದ ಸಂದರ್ಭ ಬಂದಾಗ ಅಂಕನಹಳ್ಳಿ ಮಠದ ಶಾಲೆಯಲ್ಲಿ ಅವರು ಮೇಷ್ಟ್ರಾಗಿ ಕೆಲಸಕ್ಕೆ ಸೇರಿದರು. ಆನಂತರ, ನಮ್ಮ ತಂದೆಯವರಿಗೆ ಹಾಗೂ ಕುಟುಂಬದವರಿಗೆ ಅಂಕನಹಳ್ಳಿ ಸ್ವಾಮೀಜಿಗಳ ಮಾರ್ಗದರ್ಶನ ನಿರಂತರವಾಗಿ ಸಿಗುತ್ತಾ ಬಂದಿದೆ. ಅದರಿಂದಾಗಿಯೇ ಇಂದು ನಾವು ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಸಚಿವರು ವಿವರಿಸಿದರು.

ನಮ್ಮ ತಂದೆಯವರು ನನಗೆ ಯಾವತ್ತೂ ಈ ಕೆಲಸವನ್ನೇ ಮಾಡು ಎಂದು ನಿರ್ಬಂಧ ಹೇರಲಿಲ್ಲ. ಆದರೆ ಯಾವುದೇ ಒಳ್ಳೆಯ ಕೆಲಸ ಮಾಡಿದರೂ ನಿನ್ನ ಬೆಂಬಲಕ್ಕೆ ಇರುತ್ತೇನೆ ಎಂದು ವಿಶ್ವಾಸ ತುಂಬುವ ಮಾತುಗಳನ್ನಾಡಿದರು. ಅದಕ್ಕೆ ಜೊತೆಯಾಗಿ ನಮ್ಮ ತಾಯಿಯೂ ಕುಟುಂಬದ ಶಕ್ತಿಯಾಗಿ ದುಡಿದರು. ಸಮಾಜಕ್ಕೆ ಋಣಿಯಾಗಿ ಕೆಲಸ ಮಾಡಬೇಕೆಂಬುದೇ ನಮ್ಮ ಅಪೇಕ್ಷೆಯಾಗಿದೆ. ಯಾವುದೇ ನಿರೀಕ್ಷೆಯಿಲ್ಲದೆ ಈ ಕೆಲಸವನ್ನು ಮಾಡುತ್ತೇವೆ ಎಂದು ಸಚಿವರು ಹೇಳಿದರು.

ಶಿಕ್ಷಣದ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಂತೆ ನಾವು ನೋಡಿಕೊಂಡರೆ ಅದರ ಸಿಹಿಫಲಗಳನ್ನು ಇನ್ನು ಕೆಲವಾರು ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ನೋಡಲಿದ್ದೇವೆ. ಭಾರತವು ವಿಶ್ವಗುರುವಿನ ಸ್ಥಾನಮಾನಕ್ಕೆ ಪಾತ್ರವಾಗಲಿದೆ ಎಂದು ಸಚಿವರು ಹೇಳಿದರು.

Crop Survey: ರೈತರೇ ನಿಮ್ಮ ಜಮೀನಿನ ಬೆಳೆ ವಿವರ ನೀವೇ ದಾಖಲಿಸಿ..! ಶುರುವಾಗಿದೆ ಮುಂಗಾರು ಬೆಳೆ ಸಮೀಕ್ಷೆ..!

ನಿವೃತ್ತ ಪ್ರಭಾರ ದೈಹಿಕ ಶಿಕ್ಷಣ ಅಧೀಕ್ಷಕರಾದ ಟಿ.ಕೆ.ನಾರಾಯಣಪ್ಪ ಅವರಿಗೆ ಫಿರಂಗೀಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ಸಚಿವ ಡಾ ಸಿಎನ್‌ ಅಶ್ವತ್ಥನಾರಾಯಣ ಅವರ ತಂದೆ.

ಶ್ರೀ ಫಿರಂಗೀಶ್ವರ ಸ್ವಾಮೀಜಿಗಳು, ಶಾಸಕ ಅ.ದೇವೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ