ಆ್ಯಪ್ನಗರ

​ಸಂಪುಟ ವಿಸ್ತರಣೆ ಸಂಕಟ: ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧಎಂದ ಮಾಧುಸ್ವಾಮಿ

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲು ಸೂಚನೆ ನೀಡಿದರೆ ಅದನ್ನು ಪಾಲಿಸುತ್ತೇನೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಕೇವಲ ಸಚಿವ ಸ್ಥಾನ ಮಾತ್ರವಲ್ಲ ಶಾಸಕರ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದರು.

Vijaya Karnataka 26 Jan 2020, 1:19 pm
ತುಮಕೂರು: ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ತಮ್ಮ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲು ಸೂಚಿಸಿದರೆ ಹರ್ಷದಿಂದ ತ್ಯಾಗ ಮಾಡುತ್ತೇನೆ. ಸಚಿವ ಸ್ಥಾನವಷ್ಟೇ ಅಲ್ಲ, ಎಂಎಲ್ ಎ ಸ್ಥಾನದ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
Vijaya Karnataka Web bjp minister jc madhuswamy reaction on cabinet expansion
​ಸಂಪುಟ ವಿಸ್ತರಣೆ ಸಂಕಟ: ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧಎಂದ ಮಾಧುಸ್ವಾಮಿ


ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದ ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಮತ್ತು ಸರಕಾರದ ಹಿತಕ್ಕಾಗಿ ಸಂತೋಷದಿಂದ ಸಚಿವ ಸ್ಥಾನ ಬಿಟ್ಟುಕೊಡುತ್ತೇನ ಎಂದರು.

ಫೆಬ್ರವರಿ 15 ರಿಂದ 21 ರ ವರೆಗೆ ಮತ್ತು ಮಾರ್ಚ್ 2 ರಿಂದ 5 ರ ವರೆಗೆ ವಿಧಾನಸಭಾ ಅಧಿವೇಶನ ನಡೆಸಲು ತೀರ್ಮಾನಿಸಿದ್ದೇನೆ. ಫೆ.15 ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಂತರದ ದಿನಗಳಲ್ಲಿ ಭಾಷಣದ ಮೇಲೆ ಚರ್ಚೆ ನಡೆಯಲಿದೆ.

ದಾವೋಸ್ ಸಂಭ್ರಮ ಮುಗೀತು, ಬಿಎಸ್‌ವೈಗೆ ಇನ್ಮುಂದೆ ಸಂಪುಟ ಸಂಕಟ !

ಮಾರ್ಚ್ 2 ರಂದು ಎರಡ್ಮೂರು ಮಸೂದೆ ಮಂಡನೆ ಮಾಡುಬೇಕು ಅಂದುಕೊಂಡಿದ್ದೇವೆ. ಅವುಗಳ ಬಗ್ಗೆ ಶಾಸಕರಿಗೆ ಮೊದಲೇ ತಿಳಿಸುತ್ತೇವೆ. ಅವುಗಳನ್ನು ಶಾಸಕರು ಅಧ್ಯಯನ ಮಾಡಿಕೊಂಡು ಸದನಕ್ಕೆ ಬಂದರೆ, ಉತ್ತಮ ಚರ್ಚೆಗಳನ್ನು ನಡೆಸಬಹುದು ಎಂಬುದು ನನ್ನ ಸದಾಶಯ. ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ ಎಂದು ಹೇಳಿದರು.

ಈ ಬಾರಿ ಬಜೆಟ್ ನಲ್ಲಿ ಯಾವ್ಯಾವ ಜಿಲ್ಲೆಗೆ ಏನೇನು ಕೊಡಬೇಕು.‌ ಜಿಲ್ಲೆಗೆ ಅವಶ್ಯಕವಿರುವುದೇನು ಎಂಬುದನ್ನು ತಿಳಿದುಕೊಳ್ಳಲು ಎಲ್ಲಾ ಜಿಲ್ಲೆಗಳಿಂದ ಮೊದಲೇ ಮಾಹಿತಿ ತರಿಸಿಕೊಂಡು ಚರ್ಚೆ ನಡೆಸಲಾವುದು ಎಂದು ಮಾಹಿತಿ ನೀಡಿದರು.

ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆ; ಸೋತವರಿಗಿಲ್ಲ ಮಂತ್ರಿಗಿರಿ! - ಬಿಎಸ್‌ವೈ ಸ್ಪಷ್ಟನೆ

ಇನ್ನು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಶುಕ್ರವಾರದಂದು ಹೇಳಿಕೆ ನೀಡಿದ್ದರು. ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದರೂ ಕೇವಲ ಆರು ಜನರಿಗೆ ಮಾತ್ರ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದೆ. ಈ ನಡುವೆ ಸೋತವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಸಂಪುಟಕ್ಕೆ ಸೇರಲು ನೂತನ ಬಿಜೆಪಿ ಶಾಸಕರ ಜೊತೆಗೆ ಮೂಲ ಬಿಜೆಪಿ ಶಾಸಕರು ಪೈಪೋಟಿ ನಡೆಸುತ್ತಿದ್ದು ವಿಸ್ತರಣೆಗೆ ಕಗ್ಗಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಚಿವರ ತಲೆದಂಡ ಆಗುತ್ತದೆ ಎನ್ನಲಾಗಿದ್ದು ಸಂಪುಟದಿಂದ ಸ್ಥಾನ ಕಳೆದುಕೊಳ್ಳುವವರು ಯಾರು ಎಂಬುವುದು ಕುತೂಹಲ ಕೆರಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ