ಆ್ಯಪ್ನಗರ

ಇಟ್ಟಿಗೆ ಗೂಡು ಕುಸಿದು ವ್ಯಕ್ತಿ ಸಾವು

ತೋವಿನಕೆರೆ ಸಮೀಪದ ದಾಸಲಕುಂಟೆ ಕೆರೆಯ ಅಂಗಳದಲ್ಲಿ ಸುಟ್ಟ ಇಟ್ಟಿಗೆಗೂಡು ಕುಸಿದು ವ್ಯಕ್ತಿ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 16 Mar 2017, 3:50 pm
ತುಮಕೂರು: ತೋವಿನಕೆರೆ ಸಮೀಪದ ದಾಸಲಕುಂಟೆ ಕೆರೆಯ ಅಂಗಳದಲ್ಲಿ ಸುಟ್ಟ ಇಟ್ಟಿಗೆಗೂಡು ಕುಸಿದು ವ್ಯಕ್ತಿ ಮೃತಪಟ್ಟಿದ್ದಾರೆ.
Vijaya Karnataka Web brick kiln collapsed man death
ಇಟ್ಟಿಗೆ ಗೂಡು ಕುಸಿದು ವ್ಯಕ್ತಿ ಸಾವು


ತಿಪ್ಪಣ್ಣ ಬಿನ್ ಚಿಕ್ಕನರಸಯ್ಯ ಮೃತಪಟ್ಟವರು. ಇಟ್ಟಿಗೆ ಗೂಡು ದಾಸಲಕುಂಟೆ ಉದಯಕುಮಾರ್ ಅವರಿಗೆ ಸೇರಿದ್ದು, ಬೆಳಗಿನಿಂದ ಸುಟ್ಟ ಇಟ್ಟಿಗೆಯನ್ನು ಬೇರೆಡೆಗೆ ಸಾಗಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಸಡಿಲವಾದ ಇಟ್ಟಿಗೆ ಗೂಡು ಕುಸಿದು ತಿಪ್ಪಣ್ಣ ಮೃತಪಟ್ಟಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಯಲ್ಲಿ ನರಸಿಂಹಮೂತಿ೯ ಮತ್ತು ಕೆಂಪಣ್ಣ ಎನ್ನುವರಿಗೆ ಗಾಯಗಳಾಗಿವೆ. ಅವರನ್ನು ತುಮಕೂರು ಜಿಲ್ಲಾಸ್ಪತ್ರಗೆ ರವಾನಿಸಲಾಗಿದೆ. ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ