ಆ್ಯಪ್ನಗರ

ರಾಜ್ಯದ ಹಣಕಾಸಿನ ಸ್ಥಿತಿ ಏನು ಅಂತಾ ನನ್ನೊಬ್ಬನಿಗೆ‌ ಮಾತ್ರ ಗೊತ್ತು: ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ ಶ್ರೀಮತಿ ದಿ‌. ಮೈತ್ರಾದೇವಿ ಹೆಸರಿನಲ್ಲಿ 3 - 4 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಅಲ್ಲದೆ, ಎಡೆಯೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಎಲ್ಲಾ ಕೆರೆಕಟ್ಟೆಗಳನ್ನ ತುಂಬಿಸೋದೆ ನಮ್ಮ ಆದ್ಯತೆ ಎಂದೂ ಸಿಎಂ ಹೇಳಿದರು.

Vijaya Karnataka Web 18 Oct 2019, 12:54 pm
ತುಮಕೂರು: ಜಿಲ್ಲೆಯ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರದಲ್ಲಿ ಶುಕ್ರವಾರ 10 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಭಾಷಣ ಮಾಡಿದ್ದಾರೆ. ''ಈ ಕ್ಷೇತ್ರಕ್ಕೆ ಬರೋ‌ ಸಂಖ್ಯೆ ದಿನೇ‌ದಿನೇ ಹೆಚ್ಚಾಗ್ತಿದೆ. ಈ ಹಿಂದೆ 10 ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೆ. ಈಗ ನಾನೇ ಮತ್ತೆ ಮುಖ್ಯಮಂತ್ರಿಯಾಗಿ ಉದ್ಘಾಟನೆ ನೆರವೇರಿಸಿದ್ದು ಸಂತೋಷ ತಂದಿದೆ'' ಎಂದಿದ್ದಾರೆ.
Vijaya Karnataka Web yeddyurappa 1


ಇನ್ನು, ''ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ದಿ ಮಾಡಬೇಕಿದೆ. ನನ್ನ ಶ್ರೀಮತಿ ದಿ‌. ಮೈತ್ರಾದೇವಿ ಹೆಸರಿನಲ್ಲಿ 3 - 4 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿದೆ. ನನ್ನ ಸ್ವಂತ ಹಣದಿಂದ ನಾಳೆಯಿಂದಲೇ ಕಾಮಗಾರಿ ಆರಂಭವಾಗುತ್ತೆ. ಈ‌ ಸಂದರ್ಭದಲ್ಲಿ ನಾನು ರಾಜಕೀಯ ಮಾತನಾಡೋಕೆ ಹೋಗಲ್ಲ. ರಾಜ್ಯದ ಹಣಕಾಸಿನ ಸ್ಥಿತಿ ಏನು ಅಂತಾ ನನ್ನೊಬ್ಬನಿಗೆ‌ ಗೊತ್ತು. ನಾನು ಸಿಎಂ ಆಗಿ ಕೇವಲ ಎರಡು ತಿಂಗಳಾಗಿದೆ. ಇನ್ನೂ ಮುಂದಿನ ಐದಾರು ವರ್ಷದ ಹಣಕ್ಕೆ ಹಿಂದಿನ ಸರಕಾರ ಅನುಮೊದನೆ ಮಾಡಿದ್ದಾರೆ'' ಎಂದು ಸಿಎಂ ತಮ್ಮ ಭಾಷಣದ ವೇಳೆ ಹೇಳಿದರು.

ಜತೆಗೆ, ''ಎಲ್ಲಾ ಕ್ಷೇತ್ರಗಳಿಗೂ ಭೇದಭಾವ ಇಲ್ಲದೇ ಅಭಿವೃದ್ಧಿ ಮಾಡಲಾಗುತ್ತೆ. ಹಿಂದೆಂದೂ ಕಾಣದ ರೀತಿಯಲ್ಲಿ ರಾಜ್ಯದಲ್ಲಿ ನೆರೆ ಆಗಿದೆ. ನೆರೆ ಸಂತ್ರಸ್ಥರ ಪರಿಹಾರಕ್ಕೂ ಹಣ ನೀಡುತ್ತಿದ್ದೇವೆ. ಹಿಂದಿನ ಸರಕಾರದ ರೈತರ ಸಾಲ ಮನ್ನಾಗೂ ಹಣ ಹೊಂದಿಸಬೇಕಿದೆ. ಈ‌ ಭಾಗಕ್ಕೆ ನೀರಾವರಿಯಲ್ಲಿ ಯಾವುದೇ ಭೇದಭಾವ ಮಾಡಿಲ್ಲ. ಹಣಕಾಸಿನ ಲಭ್ಯತೆ ನೋಡಿಕೊಂಡು ತಕ್ಷಣ ಕ್ರಮ ಕೈಗೊಳ್ಳಲಾಗುತ್ತೆ. ಎಲ್ಲಾ ಕೆರೆಕಟ್ಟೆಗಳನ್ನ ತುಂಬಿಸೋದೆ ನಮ್ಮ ಆದ್ಯತೆ. ಜನವರಿ-ಫೆಬ್ರವರಿ ವರೆಗೂ ನನಗೆ ಸಮಯ ಬೇಕಾಗುತ್ತೆ. ಸದ್ಯ ಅತಿವೃಷ್ಠಿ ಕಡೆ ಹೆಚ್ಚು ಗಮನ ಹರಿಸ್ತಿದ್ದೇನೆ'' ಎಂದು ಸಹ ಸಿಎಂ ತಿಳಿಸಿದರು.

ಇನ್ನೊಂದೆಡೆ, ''ಮಹಾರಾಷ್ಟ್ರಕ್ಕೆ ಹೋಗಿ ಬಂದೆ. ಬಂದ ಕೂಡಲೇ ನಿನ್ನೆ ರಾಜ್ಯದ ಹಣಕಾಸಿನ ಸ್ಥಿತಿಗತಿ ತಿಳಿದಿದ್ದೇನೆ. ಏನೆಲ್ಲಾ ಅಭಿವೃದ್ದಿ ಕಾರ್ಯ ಮಾಡಬೇಕಿದೆ, ಹಣಕಾಸಿನ ಲಭ್ಯತೆ ನೋಡಿಕೊಂಡು ಬಳಿಕ ತೀರ್ಮಾನ ಮಾಡ್ತೇನೆ ಎಂದು ತುಮಕೂರು ಜಿಲ್ಲೆ ಎಡೆಯೂರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ