ಆ್ಯಪ್ನಗರ

ಸರ್ದಾರ್ ಪಟೇಲ್ ಪ್ರತಿಮೆಗಿಂತಲೂ ಎತ್ತರವಾಗಿ ಯಡಿಯೂರಪ್ಪ ಪ್ರತಿಮೆ ನಿರ್ಮಾಣ: ತುಮಕೂರು ಸಂಸದ

ಗುಜರಾತ್‌ನಲ್ಲಿರುವ ಪಟೇಲ್‌ ಪ್ರತಿಮೆಗಿಂತಲೂ ಎತ್ತರವಾದ ಯಡಿಯೂರಪ್ಪ ಪ್ರತಿಮೆ ನಿರ್ಮಾಣ ಮಾಡುವುದಾಗಿ ತುಮಕೂರು ಸಂಸದರು ಹೇಳಿದ್ದಾರೆ. ನೇತ್ರಾವತಿ ನದಿಯಿಂದ ಎತ್ತಿನಹೊಳೆ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿಸಿದರೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

Vijaya Karnataka Web 14 Nov 2019, 5:43 pm
ತುಮಕೂರು: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪ್ರತಿಮೆಯನ್ನು ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗಿಂತಲೂ ಎತ್ತರವಾಗಿ ರಾಜ್ಯದಲ್ಲಿ ನಿರ್ಮಿಸಲಾಗುತ್ತದೆ ಎಂದು ತುಮಕೂರು ಲೋಕಸಭಾ ಸಂಸದ ಹೇಳಿದ್ದಾರೆ.
Vijaya Karnataka Web gs basavaraj toi


ಈ ಸುದ್ದಿ ಓದಿ: ರಾಷ್ಟ್ರೀಯ ಏಕತಾ ದಿನ, ಸರ್ದಾರ್ ಪಟೇಲ್ ರ 'ಸ್ಟ್ಯಾಚು ಆಫ್ ಯೂನಿಟಿ'ಗೆ ಪ್ರಧಾನಿ ಭೇಟಿ

ತುಮಕೂರು ನಗರದಲ್ಲಿ ನಡೆಯುತ್ತಿರುವ 66ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಸಂಸದ ಜಿ.ಎಸ್ ಬಸವರಾಜ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕುಮಾರಧಾರ ಮತ್ತು ನೇತ್ರಾವತಿ ನದಿಯಿಂದ ಎತ್ತಿನಹೊಳೆ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿಸಬೇಕು. ಈ ಕೆಲಸವಾದರೆ ಗುಜರಾತಿನ ನರ್ಮದಾ ನದಿ ತೀರದಲ್ಲಿ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗಿಂತಲೂ ಎತ್ತರವಾದ ಪ್ರತಿಮೆಯು ರಾಜ್ಯದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ದೇವೇಗೌಡರಿಂದ'ಏಕತಾ ಪ್ರತಿಮೆ'ವೀಕ್ಷಣೆ: ಪ್ರಧಾನಿ ಮೋದಿ ಸಂತಸ

ಸಿಎಂ ಯಡಿಯೂರಪ್ಪ ಸಮ್ಮುಖದಲ್ಲೇ ತುಮಕೂರು ಸಂಸದ ಜಿ.ಎಸ್ ಬಸವರಾಜ್ ಯಡಿಯೂರಪ್ಪ ಪ್ರತಿಮೆ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನ ರಾಜಕೀಯ ‘ಅಗ್ನಿಕುಂಡ’ದಿಂದೆದ್ದ ಸಿಎಂಗೆ ತುಮಕೂರಲ್ಲಿ ‘ಅಗ್ನಿ ದರ್ಶನ’..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ