ಆ್ಯಪ್ನಗರ

ಸರಕಾರಿ ಶಾಲೆಗೆ ಪುಂಡರ ಕಾಟ

ಹಗಲಿನಲ್ಲಿ ವಿದ್ಯಾರ್ಥಿಗಳ ಜ್ಞಾನರ್ಜನೆಯ ಸ್ಥಳವಾದ ಶಾಲೆ ರಾತ್ರಿ ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟಿದ್ದು, ಕಳ್ಳರ ಹಾಗೂ ಪುಂಡರ ಕಾಟದಿಂದ ಬೇಸತ್ತ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳು ರಕ್ಷ ಣೆಗಾಗಿ ಪೊಲೀಸ್‌ ಮೊರೆ ಹೋಗಿದ್ದಾರೆ.

Vijaya Karnataka 15 Dec 2018, 5:00 am
ಕೊಡಿಗೇನಹಳ್ಳಿ (ಮಧುಗಿರಿ ತಾ): ಹಗಲಿನಲ್ಲಿ ವಿದ್ಯಾರ್ಥಿಗಳ ಜ್ಞಾನರ್ಜನೆಯ ಸ್ಥಳವಾದ ಶಾಲೆ ರಾತ್ರಿ ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟಿದ್ದು, ಕಳ್ಳರ ಹಾಗೂ ಪುಂಡರ ಕಾಟದಿಂದ ಬೇಸತ್ತ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳು ರಕ್ಷ ಣೆಗಾಗಿ ಪೊಲೀಸ್‌ ಮೊರೆ ಹೋಗಿದ್ದಾರೆ.
Vijaya Karnataka Web bully mishandle case in government school
ಸರಕಾರಿ ಶಾಲೆಗೆ ಪುಂಡರ ಕಾಟ


ಹೌದು ಕೊಡಿಗೇನಹಳ್ಳಿ ಸರಕಾರಿ ಶಾಲೆಗೆ ಇಂತಹ ದುಸ್ಥಿತಿ ಎದುರಾಗಿದ್ದು ಗುರುವಾರ ರಾತ್ರಿ ಪುಂಡರು ಕುಡಿದ ಮತ್ತಿನಲ್ಲಿ ಶಾಲೆಯ ಗೋಡೆ ಧ್ವಂಸಗೊಳಿಸಿದ್ದು, ಪ್ರತಿ ವಾರ ಒಂದೊಂದು ಕಡೆಯ ಗೋಡೆಗಳನ್ನು ನಾಶಪಡಿಸುತ್ತಿದ್ದಾರೆ.

ವಾರಕೊಮ್ಮೆಯಾದರೂ ಪ್ರಾರ್ಥನೆ ವೇಳೆ ಶಿಕ್ಷ ಕರು ಹಾಗೂ ವಿದ್ಯಾರ್ಥಿಗಳಿಗೆ ಮದ್ಯದ ಖಾಲಿ ಬಾಟಲಿ, ಬೀಡಿ, ಸಿಗರೇಟು ತುಂಡುಗಳನ್ನು ಆಯ್ದು ಸ್ವಚ್ಛಗೊಳಿಸುವ ದುಸ್ಥಿತಿ ಎದುರಾಗಿದೆ.

ಶಾಲೆ ಅವಧಿ ಮುಗಿದ ತಕ್ಷ ಣ ಕತ್ತಲು ಆವರಿಸುತ್ತಿದ್ದಂತೆ ಅಕ್ರಮವಾಗಿ ಶಾಲೆ ಆವರಣದೊಳಗೆ ನುಗ್ಗಿ ಪಾನಮತ್ತರಾಗಿ ಶಾಲೆಯ ಬಾಗಿಲು ನಾಶ ಪಡಿಸಿ ಕೊಠಡಿಯಲ್ಲಿ ಮಲಗಿ ನಸುಕಿನಲ್ಲಿ ಎದ್ದು ಹೋಗುತ್ತಿದ್ದಾರೆ. ಬೇಸತ್ತ ಶಿಕ್ಷ ಕರು ಈ ಬಗ್ಗೆ ಶುಕ್ರವಾರ ಲಿಖಿತ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ