ಆ್ಯಪ್ನಗರ

ತುಮಕೂರು ಭೀಕರ ಅಪಘಾತ: ಅಟೋ ಚಾಲಕನ ಚೆಲ್ಲಾಟಕ್ಕೆ ಬಲಿಯಾದ್ವಾ ಜೀವಗಳು?

ತುಮಕೂರಿನಲ್ಲಿ ನಡೆದ ಭೀಕರ ಬಸ್ ಅಪಘಾತಕ್ಕೆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಅಟೋ ಚಾಲಕನೊಬ್ಬನ ಅಜಾಗರೂಕತೆ ಹಾಗೂ ಚೆಲ್ಲಾಟದ ಚಾಲನೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘಟನೆಯಲ್ಲಿ ಏಳು ಪ್ರಯಾಣಿಕರು ಸಾವನ್ನಪ್ಪಿದ್ದು 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Vijaya Karnataka Web 30 Oct 2019, 11:08 am
ತುಮಕೂರು: ತುಮಕೂರಿನ ಕೊರಟಗೆರೆಯಲ್ಲಿ ನಡೆದ ಭೀಕರ ಬಸ್ ಅಪಘಾತಕ್ಕೆ ಆಟೋ ಚಾಲಕನೊಬ್ಬನ ಚೆಲ್ಲಾಟ ಕಾರಣ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಕೊರಟಗೆರೆಯ ಜೆಟ್ಟಿ ಅಗ್ರಹಾರ ಎಂಬಲ್ಲಿ ಈ ಭೀಕರ ಅಪಘಾತ ನಡೆದಿದ್ದು ಏಳು ಮಂದಿ ಸಾವನ್ನಪ್ಪಿದ್ದು 20 ಕ್ಕೂ ಅಧಿಕ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.
Vijaya Karnataka Web bus accident


ಕೊರಟಗೆರೆಯಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಇದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಆಟೋ ಚಾಲಕನ ಅಜಾಗರೂಕತೆ ಹಾಗೂ ಚೆಲ್ಲಾಟದ ಚಾಲನೆಯೇ ಕಾರಣ ಎಂಬ ವಿಚಾರವನ್ನು ಸ್ಥಳೀಯರು ತಿಳಿಸುತ್ತಿದ್ದಾರೆ. ಜಗನ್ನಾಥಪುರ ಗ್ರಾಮದಿಂದ ಬರಕ ರಸ್ತೆಯ ಮೂಲಕ ಜೆಟ್ಟಿಅಗ್ರಹಾರದ ರಾಜ್ಯ ಹೆದ್ದಾರಿಗೆ ಸೇರಲು ಬರುತ್ತಿದ್ದ ಚಾಲಕ ಏಕಾಏಕಿ ರಸ್ತೆಗೆ ನುಗ್ಗಿದ್ದಾನೆ.

ತುಮಕೂರಿನಲ್ಲಿ ಭೀಕರ ಅಪಘಾತ; ಏಳು ಸಾವು, ಹಲವರು ಗಂಭೀರ

ಪಾವಗಡ-ಮಧುಗಿರಿ-ಕೊರಟಗೆರೆ ಮೂಲಕ ತುಮಕೂರು ಹೋಗುತ್ತಿದ್ದ ಕೆಎ 64-1849 ಎಂಬ ನಂಬರಿನ ವಿಜಯಲಕ್ಷ್ಮೀ ಎಂಬ ಖಾಸಗಿ ಬಸ್ ವೇಗವಾಗಿ ಬರುತಿತ್ತು. ಬಸ್ಸನ್ನು ಅಟೋ ಚಾಲಕ ನೋಡಿಯೂ ಅಜಾಗರೂಕತೆಯಿಂದ ಆಟೋ ಚಲಾಯಿಸಿದ್ದಾನೆ. ಬಸ್ ಚಾಲಕ ಆಟೋ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಖಾಸಗಿ ಬಸ್ಸು ಪಲ್ಟಿ ಹೊಡೆದಿರುವ ರಭಸಕ್ಕೆ ಬಸ್ಸಿನ ಗಾಜಿನ ಜೊತೆ ಮೃತರ ದೇಹಗಳು ನಜ್ಜುಗುಜ್ಜಾಗಿದ್ದು ಸ್ಥಳದಲ್ಲಿ ನೋವಿನ ಆಕ್ರಂಧನ ಮುಗಿಲು ಮುಟ್ಟಿದೆ . ಅಪಘಾತದಲ್ಲಿ ಮೃತಪಟ್ಟ ಮೃತದೇಹ ಹಾಗೂ ಗಾಯಾಳುಗಳನ್ನು ಕೊರಟಗೆರೆ ಮತ್ತು ತುಮಕೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಪಘಾತವಾದ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದು ರಸ್ತೆ ತೆರವುಗೊಳಿಸಲು ಪೋಲಿಸರು ಹರಸಾಹಸ ಪಡುತ್ತಿದ್ದಾರೆ. ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ಸ್ಥಳದಲ್ಲಿಯೇ ಮೊಕ್ಕಾಂ ಹೊಡಿದ್ದಾರೆ. ಇದೀಗ ಸ್ಥಳಕ್ಕೆ ಸಚಿವ ಜೆ ಸಿ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ