ಆ್ಯಪ್ನಗರ

ಸಿಟಿ ರವಿ ಕಾರು ಅಪಘಾತ: ಎಸ್‌ಪಿಯಿಂದ ಸ್ಥಳ ಪರಿಶೀಲನೆ

ಶಾಸಕ ಸಿ.ಟಿ.ರವಿ ಅವರ ಕಾರು ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 21 Feb 2019, 5:00 am
ಕುಣಿಗಲ್‌: ಶಾಸಕ ಸಿ.ಟಿ.ರವಿ ಅವರ ಕಾರು ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web c t ravi car accident spot verification from police supritendent
ಸಿಟಿ ರವಿ ಕಾರು ಅಪಘಾತ: ಎಸ್‌ಪಿಯಿಂದ ಸ್ಥಳ ಪರಿಶೀಲನೆ


ಡಿವೈಎಸ್‌ಪಿ ರಾಮಲಿಂಗೇಗೌಡ, ಸಿಪಿಐ ಆಶೋಕ್‌ ಕುಮಾರ್‌, ಪಿಎಸ್‌ಐ ಪುಟ್ಟೇಗೌಡ ಅವರೊಂದಿಗೆ ಅಪಘಾತ ನಡೆದ ಸೇತುವೆ ಬಳಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ನಡುವೆ ಶಾಸಕ ಸಿ.ಟಿ.ರವಿ ಅವರ ಕಾರು ಚಾಲಕ ಆಕಾಶ್‌ ಅಲಿಯಾಸ್‌ ರುದ್ರೇಗೌಡನನ್ನು ಬಂಧಿಸಿ ಮದ್ಯಪಾನ ಮಾಡಿರುವ ಬಗ್ಗೆ ಖಾತರಿ ಮಾಡಿಕೊಳ್ಳುವ ಉದ್ದೇಶದಿಂದ ರಕ್ತ ಹಾಗೂ ಯೂರಿನ್‌ ಸ್ಯಾಂಪಲ್‌ಗಳನ್ನು ಎಫೆಸಿಎಲ್‌ ಲ್ಯಾಬ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ನಂತರ ಆಕಾಶ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಿಪಿಐ ಅಶೋಕ್‌ಕುಮಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ