ಆ್ಯಪ್ನಗರ

ಸಾಧುಗಳು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಶಿವಕುಮಾರ ಸ್ವಾಮೀಜಿ: ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ

ಸಿದ್ದಗಂಗಾ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಮಾಡುವುದು ಅಧ್ಬುತವಾದ ಕೆಲಸ. ಇದು ಸಾಮಾನ್ಯರಿಗೆ ಸಾದ್ಯವಾಗವುದಿಲ್ಲ. ಅವರಿಗೆ ಭಗವಂತನ ಆಶೀರ್ವಾದ ಇತ್ತು ಎಂದು ಶಿವಕುಮಾರ ಸ್ವಾಮೀಜಿಗಳ ಸಾಧನೆಯನ್ನು ಬಣ್ಣಿಸಿದರು.

Vijaya Karnataka Web 21 Jan 2021, 2:06 pm
ತುಮಕೂರು: ತುಮಕೂರು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ್ದ ಒರಿಸ್ಸಾದ ಸಂಸದ, ಕೇಂದ್ರ ಸಚಿವ ಪ್ರತಾಪ್ ಚಂದ್ರಸಾರಂಗಿ ಅವರು ಮಾತನಾಡಿ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು.
Vijaya Karnataka Web ಸಿದ್ದಗಂಗಾ ಮಠ
ಸಿದ್ದಗಂಗಾ ಮಠ


ನನಗೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಮಠದ ಭಕ್ತರನ್ನು ನೋಡಿ ಸಂತೋಷವಾಗುತ್ತಿದೆ ಅದರೆ ಕನ್ನಡವನ್ನು ಆರ್ಥ ಮಾಡಿಕೊಳ್ಳುತ್ತೇನೆ. ನನಗೆ ಕನ್ನು ಬಾಷೆ ಅಂದರೆ ಬಲು ಪ್ರಿಯ ಎಂದರು.

ತುಮಕೂರು ಸಿದ್ದಗಂಗಾ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಮಾಡುವುದು ಅಧ್ಬುತವಾದ ಕೆಲಸ. ಇದು ಸಾಮಾನ್ಯರಿಗೆ ಸಾದ್ಯವಾಗವುದಿಲ್ಲ. ಅವರಿಗೆ ಭಗವಂತನ ಆಶೀರ್ವಾದ ಇತ್ತು ಎಂದು ಶಿವಕುಮಾರ ಸ್ವಾಮೀಜಿಗಳ ಸಾಧನೆಯನ್ನು ಬಣ್ಣಿಸಿದರು.
ಸಾಧುಗಳು ಜಗತ್ತಿನಲ್ಲಿ ಹೇಗೆ ಇರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ದೇವರು ರಿಮೋಟ್ ಹಿಡಿದು ಕೆಲಸ ಮಾಡಿಸಿದಂತೆ ಶ್ರೀಗಳ ಕಾರ್ಯ ನಿರ್ವಹಿಸಿದ್ದಾರೆ. ಊಟ, ನಿದ್ದೆ ಬದಿಗೊತ್ತಿ ಕೆಲಸ ಮಾಡಿದ್ದಾರೆ ಎಂದು ಸಾರಂಗಿ ತಿಳಿಸಿದರು.

ಇದಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಸಿದ್ದಗಂಗಾ ಮಠಕ್ಕೆ ಭೇಟಿ ನೋಡಿ ಶ್ರೀಗಳ ಗದ್ದುಗೆಗೆ‌ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ದೇಗುಲ ಮಠದ ಶ್ರೀಗಳು, ವಚನಾನಂದಶ್ರೀಗಳು ಉಪಸ್ಥಿತರಿದ್ದರು. ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ್, ವೀರಶೈವ ಅಭಿವೃದ್ಧಿ ನಿಗಮದ ಬಿ.ಎಸ್. ಪರಮಶಿವಯ್ಯ, ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿಗಣೇಶ್ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ